ರಾಜ್ ಕುಂದ್ರಾ ಮುಖವಾಡ ಕಳಚಲಾರಂಭಿಸಿದೆ, ಬೆತ್ತಲೆ ಮಾಡಿ ವಿಡಿಯೋ ಶೂಟ್ ಮಾಡಲಾಯಿತು ಅಂತ ದೂರಿದ್ದಾರೆ ಒಬ್ಬ ಮಾಡೆಲ್!

ಈ ಮಾಡೆಲ್ ಪೊಲೀಸರಿಗೆ ಸಲ್ಲಿಸಿರುವ ದೂರಿನ ಸಾರಾಂಶವೇನೆಂದರೆ, ಸಿನಿಮಾಗಳಲ್ಲಿ ಅವಕಾಶ ಕೊಡಿಸುವ ಆಮಿಷ ಒಡ್ಡಿ, ಆಕೆಯ ಬೆತ್ತಲೆ ದೇಹವನ್ನು ಶೂಟ್ ಮಾಡಲಾಗಿದೆ. ಹುಟ್ಟುಡುಗೆಯಲ್ಲಿ ಕೆಸರಿನಿಂದ ಆಕೆ ಮೇಲೆದ್ದು ಬರುವ ಶೂಟ್ಗೆ ಕುಂದ್ರಾ ರೂ. ಒಂದು ಲಕ್ಷ ಸಂಭಾವನೆ ನೀಡುವ ಭರವಸೆ ನೀಡಿದ್ದರಂತೆ.

ರಾಜ್ ಕುಂದ್ರಾ ಮುಖವಾಡ ಕಳಚಲಾರಂಭಿಸಿದೆ, ಬೆತ್ತಲೆ ಮಾಡಿ ವಿಡಿಯೋ ಶೂಟ್ ಮಾಡಲಾಯಿತು ಅಂತ ದೂರಿದ್ದಾರೆ ಒಬ್ಬ ಮಾಡೆಲ್!
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 30, 2021 | 7:38 PM

ಒಂದು ಕಡೆ ನೀಲಿ ಚಿತ್ರ ತಯಾರಿಸಿರುವ ಆರೋಪ ಹೊತ್ತ ಉದ್ಯಮಿ ರಾಜ್ ಕುಂದ್ರಾರ ಪತ್ನಿ ತನ್ನ ಮತ್ತು ಗಂಡನ ಬಗ್ಗೆ ವರದಿ ಮಾಡಿದರೆ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಒಡ್ಡುತ್ತಾರೆ. ಆದರೆ ಮತ್ತೊಂದೆಡೆ ಮುಂಬೈನ ಮಾಡೆಲ್ ಒಬ್ಬರು ಕುಂದ್ರಾ ತನ್ನನ್ನು ಶೋಷಿಸಿ ಬ್ಲ್ಯಾಕ್ಮೇಲ್ ಮಾಡಿರುವ ಬಗ್ಗೆ ಮಹಾನಗರದ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ದೂರು ಸಲ್ಲಿಸುತ್ತಾರೆ. ಆಕೆ ಪೋಲಿಸರಲ್ಲಿಗೆ ಹೋಗಿದ್ದೇ ಒಳ್ಳೆಯದಾಯಿತು, ನ್ಯಾಯ ಕೇಳಿ ಶಿಲ್ಪಾ ಹತ್ತಿರ ಹೋಗಿದ್ದರೆ, ಬಾಯಿ ಮುಚ್ಚಿಕೊಂಡಿರದಿದ್ದರೆ, ಕೇಸ್ ಮಾಡ್ತೀನಿ ಅಂತ ನಟಿ ಹೇಳುವುದನ್ನು ಕೇಳಿಸಿಕೊಳ್ಳಬೇಕಾಗುತ್ತಿತ್ತು!

ಈ ಮಾಡೆಲ್ ಪೊಲೀಸರಿಗೆ ಸಲ್ಲಿಸಿರುವ ದೂರಿನ ಸಾರಾಂಶವೇನೆಂದರೆ, ಸಿನಿಮಾಗಳಲ್ಲಿ ಅವಕಾಶ ಕೊಡಿಸುವ ಆಮಿಷ ಒಡ್ಡಿ, ಆಕೆಯ ಬೆತ್ತಲೆ ದೇಹವನ್ನು ಶೂಟ್ ಮಾಡಲಾಗಿದೆ. ಹುಟ್ಟುಡುಗೆಯಲ್ಲಿ ಕೆಸರಿನಿಂದ ಆಕೆ ಮೇಲೆದ್ದು ಬರುವ ಶೂಟ್ಗೆ ಕುಂದ್ರಾ ರೂ. ಒಂದು ಲಕ್ಷ ಸಂಭಾವನೆ ನೀಡುವ ಭರವಸೆ ನೀಡಿದ್ದರಂತೆ. ಆದರೆ ಶೂಟ್ ಮುಗಿದ ನಂತರ ಆಕೆಯ ಕೈಗಿತ್ತಿದ್ದು ಕೇವಲ ರೂ. 10,000. ಬೆತ್ತಲೆ ಭಾಗವನ್ನು ಎಡಿಟ್ ಮಾಡುವಾಗ ಬ್ಲರ್ ಮಾಡಲಾಗುವುದು ವಿಡಿಯೋ ಏರ್ ಮಾಡುವ ಮೊದಲು ಆಕೆಗೆ ತೋರಿಸಲಾಗುವುದು ಅಂತಲೂ ಕುಂದ್ರಾ ಹೇಳಿದ್ದರಂತೆ.

ಎಡಿಟ್ ಆದ ನಂತರವೂ ವಿಡಿಯೋದಲ್ಲಿ ತನ್ನ ಬೆತ್ತಲೆ ದೃಶ್ಯಗಳಿರುವ ಬಗ್ಗೆ ಆಕೆ ಆಕ್ಷೇಪಣೆ ಎತ್ತಿದಾಗ ಕುಂದ್ರಾ ಆಕೆಗೆ ರೂ 3,500 ನೀಡಿ ಸುಮ್ಮನಿರುವಂತೆ ಸೂಚಿಸಿದರಂತೆ. ಆಕೆ ಪ್ರತಿಭಟಿಸಿದಾಗ ಕರೀಯರ್ ಹಾಳು ಮಾಡುವ ಬೆದರಿಕೆಯನ್ನು ಕುಂದ್ರಾ ಒಡ್ಡಿದರಂತೆ.

ಇದೇ ರೀತಿ ಒಟ್ಟು 4 ವಯಸ್ಕ ಚಿತ್ರಗಳಲ್ಲಿ ನಟಿಸುವಂಥ ಅಸಾಹಾಯಕ ಸ್ಥಿತಿಗೆ ತನ್ನನ್ನು ದೂಡಲಾಯಿತು ಎಂದು ಆ ಮಾಡೆಲ್ ಹೇಳಿದ್ದಾರೆ.

ಆ ಶೂಟ್ ಮುಗಿಸಿ ಗಂಡ ಮನೆಗೆ ಬಂದಾಗಲೂ ಶಿಲ್ಪಾ ‘ಸೂಪರ್ ಸೆ ಊಪರ್’ ಅಂತ ಉದ್ಗರಿಸಿದರೇ?

ಇದನ್ನೂ ಓದಿ: ಸುಮಂತ್​ ಅಕ್ಕಿನೇನಿ 2ನೇ ಮದುವೆ? ಲಗ್ನ ಪತ್ರಿಕೆ ವೈರಲ್​ ಆದ ಬಳಿಕ ಸ್ಪಷ್ಟನೆ ನೀಡಿದ ನಟ

Follow us
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್