ಮೈಸೂರು: ಪೆನ್ಸಿಲ್​​ನಲ್ಲಿ ಮೋದಿ ಕಲಾಕೃತಿ ರಚಿಸಿದ ಅಭಿಮಾನಿ; ಪ್ರಧಾನಿಗೆ ನೀಡಲು ಕಾತರ

|

Updated on: Apr 30, 2023 | 2:43 PM

ಇಂದು(ಏ.30) ಸಾಂಸ್ಕೃತಿಕ ನಗರಿ ಮೈಸೂರಿಗೆ ಮೋದಿ ಆಗಮಿಸುತ್ತಿದ್ದು, ಕೆಲವೇ ಕ್ಷಣದಲ್ಲಿ ಬರಲಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಗೆ ಕೊಡಲು ಸ್ಪೆಷಲ್​ ಗಿಫ್ಟ್​ ಕೂಡ ರೆಡಿಯಾಗಿದೆ. ಮೋದಿ ಅಭಿಮಾನಿ ನಂಜುಂಡಸ್ವಾಮಿ ಎನ್ನುವರು ಪೆನ್ಸಿಲ್ ಕಲಾಕೃತಿ ನೀಡಲು ಮುಂದಾಗಿದ್ದಾರೆ.

ಮೈಸೂರು: ವಿಧಾನಸಭೆ ಚುನಾವಣೆ(Karnataka Assembly Election) ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ(Narendra Modi) ಕರ್ನಾಟಕ ಪ್ರವಾಸದಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಅದರಂತೆ ಇಂದು(ಏ.30) ಸಾಂಸ್ಕೃತಿಕ ನಗರಿ ಮೈಸೂರಿಗೆ ಮೋದಿ ಆಗಮಿಸುತ್ತಿದ್ದು, ಕೆಲವೇ ಕ್ಷಣದಲ್ಲಿ ಸಾಂಸ್ಕೃತಿಕ ನಗರಿಗೆ ಬರಲಿದ್ದಾರೆ. ಮೋದಿ ಱಲಿ ಹಿನ್ನೆಲೆಯಲ್ಲಿ ಅರಮನೆನಗರಿಯಲ್ಲಿ ಬಿಜೆಪಿ ಕಾರ್ಯಕರ್ತರು ಭರ್ಜರಿ ತಯಾರಿ ನಡೆಸಿದ್ದಾರೆ. ಇನ್ನು ಪ್ರಧಾನಿ ಮೋದಿಗೆ ಕೊಡಲು ಸ್ಪೆಷಲ್​ ಗಿಫ್ಟ್​ ಕೂಡ ರೆಡಿಯಾಗಿದೆ. ಮೋದಿ ಅಭಿಮಾನಿ ನಂಜುಂಡಸ್ವಾಮಿ ಎನ್ನುವರು ಪೆನ್ಸಿಲ್ ಕಲಾಕೃತಿ ನೀಡಲು ಮುಂದಾಗಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Sun, 30 April 23