ಮೈಸೂರು: ದಸರಾ ಆನೆಗಳ ಮಾವುತರ ಮಕ್ಕಳ ಜತೆ ವಾಲಿಬಾಲ್ ಆಡಿದ ಸಚಿವ ಮಹದೇವಪ್ಪ

ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ಗಜಪಡೆಗೂ ತರಬೇತಿ ನೀಡಲಾಗುತ್ತಿದೆ. ಸಚಿವ ಹೆಚ್​ಸಿ ಮಹದೇವಪ್ಪ ದಸರಾ ಸಿದ್ದತಾ ಪರಿಶೀಲನಾ ಸಭೆಗೆ ಬುಧವಾರ ಹಾಜರಾದರು. ಇದಕ್ಕೂ ಮುನ್ನ ಮಾವುತರು ಹಾಗೂ ಕಾವಾಡಿಗಳ ಮಕ್ಕಳ ಜೊತೆ ವಾಲಿಬಾಲ್ ಆಡಿದರು. ವಿಡಿಯೋ ಇಲ್ಲಿದೆ.

ಮೈಸೂರು: ದಸರಾ ಆನೆಗಳ ಮಾವುತರ ಮಕ್ಕಳ ಜತೆ ವಾಲಿಬಾಲ್ ಆಡಿದ ಸಚಿವ ಮಹದೇವಪ್ಪ
| Updated By: ಗಣಪತಿ ಶರ್ಮ

Updated on: Sep 04, 2024 | 2:51 PM

ಮೈಸೂರು, ಸೆಪ್ಟೆಂಬರ್4: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬಂದಿರುವ ಗಜಪಡೆಗೆ ತರಬೇತಿ ಆರಂಭವಾಗಿದೆ. ದಸರಾ ಮಹೋತ್ಸವಕ್ಕೆ ಭರದಿಂದ ಸಿದ್ಧತೆ ಸಾಗಿದೆ. ಈ ಮಧ್ಯೆ, ಮಾವುತರು ಕಾವಾಡಿಗಳ ಮಕ್ಕಳ ಜೊತೆ ಸಚಿವ ಹೆಚ್​ಸಿ ಮಹದೇವಪ್ಪ ಮೈಸೂರು ಅರಮನೆಯಲ್ಲಿ ತುಸು ಹೊತ್ತು ವಾಲಿಬಾಲ್ ಆಡಿದರು.

ಇಂದು ದಸರಾ ಸಿದ್ದತಾ ಪರಿಶೀಲನಾ ಸಭೆ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಲು ಸಚಿವ ಮಹದೇವಪ್ಪ ಆಗಮಿಸಿದ್ದಾರೆ. ಈ ವೇಳೆ ಆನೆಗಳನ್ನು ವೀಕ್ಷಿಸಿದ ಅವರು ಮಾವುತರು, ಕಾವಾಡಿಗಳ ಜೊತೆ ಕಾಲ ಕಳೆದರು. ನಂತರ ವಾಲಿಬಾಲ್ ಆಡಿ ಗಮನಸೆಳೆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us