Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಬಿಜೆಪಿ ಕಚೇರಿಗೆ ನಾಗರ ಹಾವು ಎಂಟ್ರಿ, ಸಿಎಂ ಬೊಮ್ಮಾಯಿ ಮುಂದೆ ಬುಸುಗುಟ್ಟಿದ ನಾಗಪ್ಪ

Video Viral: ಬಿಜೆಪಿ ಕಚೇರಿಗೆ ನಾಗರ ಹಾವು ಎಂಟ್ರಿ, ಸಿಎಂ ಬೊಮ್ಮಾಯಿ ಮುಂದೆ ಬುಸುಗುಟ್ಟಿದ ನಾಗಪ್ಪ

ಅಕ್ಷಯ್​ ಪಲ್ಲಮಜಲು​​
|

Updated on: May 13, 2023 | 11:08 AM

ರಾಜ್ಯದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಿಎಂ ಬಸವರಾಜ ಬೊಮ್ಮಾಯಿ) ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೆಲ ಹೊತ್ತಿನ ಹಿಂದೆ ಶಿಗ್ಗಾಂವಿ ಬಿಜೆಪಿ ಶಿಬಿರ ಕಚೇರಿಗೆ ಆಗಮಿಸಿದ್ದರು. ಆದರೆ ಅಷ್ಟರಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.

ರಾಜ್ಯದಲ್ಲಿ ಇಂದು ಬೆಳಗ್ಗೆ ಎಂಟು ಗಂಟೆಯಿಂದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶುರುವಾಗಿದ್ದು. ಈಗಾಗಲೇ ಹಿನ್ನಡೆ, ಮುನ್ನಡೆ ಲೆಕ್ಕಾಚಾರಗಳು ಪ್ರಾರಂಭವಾಗಿದೆ. ಬೆಳಿಗ್ಗೆ 9:45 ರವರೆಗಿನ ಅಂಕಿಅಂಶಗಳ ಪ್ರಕಾರ, 224 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ 115 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ 75 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರು ರಾಜ್ಯದಲ್ಲಿ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಹಾವು ಪತ್ತೆ

ರಾಜ್ಯದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಿಎಂ ಬಸವರಾಜ ಬೊಮ್ಮಾಯಿ) ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೆಲ ಹೊತ್ತಿನ ಹಿಂದೆ ಶಿಗ್ಗಾಂವಿ ಬಿಜೆಪಿ ಶಿಬಿರ ಕಚೇರಿಗೆ ಆಗಮಿಸಿದ್ದರು. ಆದರೆ ಅಷ್ಟರಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ವಾಸ್ತವವಾಗಿ ಸಿಎಂ ಬೊಮ್ಮಾಯಿ ಬಿಜೆಪಿ ಕಚೇರಿಯಲ್ಲಿದ್ದಾಗ ನಾಗರ ಹಾವು ಅಲ್ಲಿ ಹರಿದಾಡುತ್ತಿತ್ತು.

ಇದನ್ನೂ ಓದಿ:Karnataka Assembly Election Results: ಕಾಂಗ್ರೆಸ್​ ಮುನ್ನಡೆ, ಸಿದ್ದು ಟೀ ಕುಡಿಯೋ ಸ್ಟೈಲ್​ ಚೇಂಜ್​

ಈ ಬಗ್ಗೆ ಒಂದು ವೀಡಿಯೋ ಕೂಡ ವೈರಲ್ ಆಗಿದೆ. ಕಚೇರಿ ಆವರಣದಲ್ಲಿ ಸಿಎಂ ಬೊಮ್ಮಾಯಿ ಇದ್ದಾಗ ಏಕಾಏಕಿ ಕಿಂಗ್ ಕೋಬ್ರಾ ಅವರ ಎದುರಿಗೆ ಬಂದಿರುವುದನ್ನು ಇದರಲ್ಲಿ ಕಾಣಬಹುದು. ಹಾವನ್ನು ನೋಡಿ ಸಿಎಂ ಅಲರ್ಟ್ ಆಗಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು. ಭದ್ರತಾ ಸಿಬ್ಬಂದಿ ಕೂಡ ಅವರನ್ನು ಹಿಂದೆ ಉಳಿಯುವಂತೆ ಹೇಳಿದರು. ನಂತರ ಆ ಹಾವನ್ನು ರಕ್ಷಣೆ ಮಾಡಿದ್ದಾರೆ.

ಎಎನ್‌ಐ ಹಂಚಿಕೊಂಡ ಎರಡನೇ ವೀಡಿಯೊದಲ್ಲಿ, ಪೊಲೀಸರು ಹಾವಿನ ಸಮೀಪಕ್ಕೆ ಬಂದಿದ್ದು, ಕಬ್ಬಿಣದ ರಾಡ್ ಸಹಾಯದಿಂದ ಹಾವನ್ನು ಬಾಲದಿಂದ ಹಿಡಿದು ಕಚೇರಿಯಿಂದ ದೂರ ಬಿಟ್ಟಿದ್ದಾರೆ.

ವಿಧಾನಸಭೆ ಚುನಾವಣೆ ನೇರಪ್ರಸಾರ ಇಲ್ಲಿದೆ