Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಂಡ ಕಂಡಾಕ್ಷಣ ದೇಹ ತಂಪಾಗಿಸಿಕೊಳ್ಳಲು ನೀರಿಗಿಳಿದ ಆನೆಹಿಂಡು, ಜಲಕ್ರೀಡೆಯ ಸುಂದರ ದೃಶ್ಯ

ಹೊಂಡ ಕಂಡಾಕ್ಷಣ ದೇಹ ತಂಪಾಗಿಸಿಕೊಳ್ಳಲು ನೀರಿಗಿಳಿದ ಆನೆಹಿಂಡು, ಜಲಕ್ರೀಡೆಯ ಸುಂದರ ದೃಶ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 03, 2025 | 10:47 AM

ಈಗಾಗಲೇ ವರದಿಯಾಗಿರುವ ಹಾಗೆ ಈ ಬಾರಿಯ ಬೇಸಿಗೆ ಹಿಂದೆಂದಿಗಿಂತಲೂ ತೀಕ್ಷ್ಣವಾಗಿದೆ. ವಿಶ್ವದಾದ್ಯಂತ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶದಲ್ಲಿ 2 ಡಿಗ್ರೀ ಸೆಲ್ಸಿಯಸ್ ನಷ್ಟು ಏರಿಕೆಯಾಗಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ಕೆರೆಕುಂಟೆಗಳಲ್ಲಿ ನೀರು ಬತ್ತಿ ಹೋಗಿರುವುದರಿಂದ ಹೊಂಡಗಳಲ್ಲಿ ಟ್ಯಾಂಕರ್​ಗಳಿಂದ ನೀರು ತುಂಬಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ.

ಚಾಮರಾಜನಗರ, ಏಪ್ರಿಲ್ 3:  ಕಡು ಬೇಸಿಗೆಯ ಮಧ್ಯಭಾಗವಿದು, ರಾಜ್ಯದೆಲ್ಲೆಡೆ ರಣಬಿಸಿಲು. ಅರಣ್ಯಪ್ರದೇಶಗಳಲ್ಲಿ ವನ್ಯಪ್ರಾಣಿಗಳಿಗೆ (wild animals ) ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯ ಹನೂರು ತಾಲ್ಲೂಕಿನ ವಡಕೆಹಳ್ಳ ರಸ್ತೆಯಲ್ಲಿರುವ ಚಿಕ್ಕ ನೀರಿನ ಹೊಂಡವೊಂದರಲ್ಲಿ ಸ್ವಚ್ಛವಲ್ಲದಿದ್ದರೂ ನೀರನ್ನು ಕಂಡ ಆನೆಗಳ ಗುಂಪಿಗೆ ಖುಷಿಯೋ ಖುಷಿ. ನಾಲ್ಕು ಆನೆಗಳು ಜಲಕ್ರೀಡೆ ನಡೆಸುವ ದೃಶ್ಯ ವಾಹನವಾರರ ಮೊಬೈಲ್ ಫೋನ್​ಗಳಲ್ಲಿ ಸೆರೆಯಾಗಿದೆ. ಆನೆಗಳು ಸೊಂಡಿಲುಗಳಿಂದ ನೀರನ್ನು ಮೈಮೇಲೆ ಹುಯ್ಯಿದುಕೊಂಡು ಸುಡುವ ಬಿಸಿಲಿಂದ ತಾತ್ಕಾಲಿಕ ನಿರಾಳತೆ ಪಡೆಯುವ ಪ್ರಯತ್ನದಲ್ಲಿವೆ.

ಇದನ್ನೂ ಓದಿ:  ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ನೀರಿನ ಹಾಹಾಕಾರ, ಟ್ಯಾಂಕರ್ ಮೂಲಕ ಕೆರೆಕುಂಟೆಗಳಿಗೆ ನೀರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 03, 2025 10:35 AM