AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸದ ಆಸೆಯಲ್ಲಿ ಕೆಂಪೇಗೌಡ ಏರ್​​ಪೋರ್ಟ್​​ಗೆ ಬಂದವರು ಅತಂತ್ರ, ಪ್ಲ್ಯಾನ್​​ಗಳೆಲ್ಲ  ಉಲ್ಟಾ

ಪ್ರವಾಸದ ಆಸೆಯಲ್ಲಿ ಕೆಂಪೇಗೌಡ ಏರ್​​ಪೋರ್ಟ್​​ಗೆ ಬಂದವರು ಅತಂತ್ರ, ಪ್ಲ್ಯಾನ್​​ಗಳೆಲ್ಲ ಉಲ್ಟಾ

ರಮೇಶ್ ಬಿ. ಜವಳಗೇರಾ
|

Updated on: Dec 04, 2025 | 3:19 PM

Share

ಕೆಂಪೇಗೌಡ ಏರ್ಪೋಟ್ ನಲ್ಲಿ ಇಂದು (ಡಿಸೆಂಬರ್ 04) ಸಹ ವಿಮಾನಗಳ‌ ಹಾರಾಟದಲ್ಲಿ ವ್ಯತ್ಯಯ ಮುಂದುವರೆದಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಇಂಡಿಗೋ ವಿಮಾನಗಳ ವ್ಯತ್ಯಯದಿಂದ 6 ದಿನದ ಟ್ರಿಪ್ 5 ದಿನಕ್ಕೆ ಮೊಟಕುಗೊಂಡಿದೆ. ಇದರಿಂದ ವಿದೇಶ ಪ್ರವಾಸಕ್ಕೆಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಅತಂತ್ರವಾಗಿದ್ದು, ಏನು ಮಾಡಬೇಕೆಂದು ದಿಕ್ಕುತೋಚದೇ ಪರದಾಡುತ್ತಿದ್ದಾರೆ.

ಬೆಂಗಳೂರು, (ಡಿಸೆಂಬರ್ 04): ಕೆಂಪೇಗೌಡ ಏರ್ಪೋಟ್ ನಲ್ಲಿ ಇಂದು (ಡಿಸೆಂಬರ್ 04) ಸಹ ವಿಮಾನಗಳ‌ ಹಾರಾಟದಲ್ಲಿ ವ್ಯತ್ಯಯ ಮುಂದುವರೆದಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಇಂಡಿಗೋ ವಿಮಾನಗಳ ವ್ಯತ್ಯಯದಿಂದ 6 ದಿನದ ಟ್ರಿಪ್ 5 ದಿನಕ್ಕೆ ಮೊಟಕುಗೊಂಡಿದೆ. ಇದರಿಂದ ವಿದೇಶ ಪ್ರವಾಸಕ್ಕೆಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಅತಂತ್ರವಾಗಿದ್ದು, ಏನು ಮಾಡಬೇಕೆಂದು ದಿಕ್ಕುತೋಚದೇ ಪರದಾಡುತ್ತಿದ್ದಾರೆ. ದೆಹಲಿಯಲ್ಲಿ ಇಂಡಿಗೋ ವಿಮಾನ 12 ಗಂಟೆ ವಿಳಂಬವಾಗಿದೆ. ಇದರಿಂದ ಬೆಂಗಳೂರಿನಿಂದ ಶ್ರೀಲಂಕಾಗೆ ತೆರಳುವ ಫ್ಲೈಟ್​ ಮಿಸ್ ಆಗಿದ್ದು. 100ಕ್ಕೂ ಹೆಚ್ಚು ಜನರು ಕಂಗಾಲಾಗಿದ್ದಾರೆ. ಇನ್ನು 6 ದಿನ ಪ್ರವಾಸದ ಪ್ಲ್ಯಾನ್​ ಮಾಡಿಕೊಂಡು ಜೈಪುರದಿಂದ ಬಂದಿದ್ದ ತಂಡ ಸಹ ಪ್ಲೈಟ್ ಮಿಸ್ ಆದ ಕಾರಣ ಬಸ್ ಮೂಲಕ ವಿವಿಧೆಡೆ ಪ್ರಯಾಣ ಬೆಳೆಸಿದೆ. ಇನ್ನು ಕೆಲ ಪ್ರಯಾಣಿಕರು ಏರ್​​ಪೋರ್ಟ್​​ನಲ್ಲಿ ಲಗೇಜ್ ಹಿಡಿದುಕೊಂಡು ಪರದಾಡುತ್ತಿದ್ದಾರೆ.

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More