ಪವಿತ್ರಾ ಗೌಡರನ್ನು ಭೇಟಿಯಾಗಲು ಜೈಲಿಗೆ ಬಂದ ವಕೀಲ ನ್ಯಾಯಾಂಗ ಕಸ್ಟಡಿ ಬಗ್ಗೆ ಉಪನ್ಯಾಸ ನೀಡಿದರು!

ಪವಿತ್ರಾ ಗೌಡರನ್ನು ಭೇಟಿಯಾಗಲು ಜೈಲಿಗೆ ಬಂದ ವಕೀಲ ನ್ಯಾಯಾಂಗ ಕಸ್ಟಡಿ ಬಗ್ಗೆ ಉಪನ್ಯಾಸ ನೀಡಿದರು!
|

Updated on: Jun 29, 2024 | 8:35 PM

ತಾನೇನೂ ಮಾಡಿಲ್ಲ ಆದರೂ ತನಗ್ಯಾಕೆ ಇಂಥ ಸ್ಥಿತಿಯೆಂಬ ಶಾಕ್ ನಲ್ಲಿ ಪವಿತ್ರಾ ಗೌಡ ಇದ್ದಾರೆ, ಅವರ ಜಾಮೀನು ಅರ್ಜು ಸಲ್ಲಿಸುವುದು ಯಾವಾಗ ಅಂತ ಚರ್ಚೆ ಮಾಡಲು ಜೈಲಿಗೆ ಬಂದಿದ್ದು ಅಂತ ವಕೀಲ ನಾರಾಯಣ ಸ್ವಾಮಿ ಹೇಳುತ್ತಾರೆ. ಅದು ಸರಿ; ಆದರೆ ಅವರು ನ್ಯಾಯಾಂಗ ಕಸ್ಟಡಿ ಅಂದರೇನು, ಆರೋಪಿಗಳನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಮೊದಲಾದ ಸಂಗತಿಗಳ ಬಗ್ಗೆ ಉಪನ್ಯಾಸ ಯಾಕೆ ನೀಡಿದರು ಅನ್ನೋದು ಗೊತ್ತಾಗಲಿಲ್ಲ!

ಆನೇಕಲ್ (ಬೆಂಗಳೂರು): ಇದ್ದಕ್ಕಿದ್ದಂತೆ ತನ್ನ ಕಕ್ಷಿದಾರಳು ಪವಿತ್ರಾ ಗೌಡರನ್ನು ಭೇಟಿಯಾಲು ಬಂದಿದ್ದ ಅವರ ವಕೀಲ ನಾರಾಯಣಸ್ವಾಮಿ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತಾಡಿದರು. ತನ್ನ ಕಕ್ಷಿದಾರೆ ನ್ಯಾಯಾಂಗ ಬಂಧನದಲ್ಲಿದ್ದಾರೆ, ಈ ಕಸ್ಟಡಿಯಲ್ಲಿ ಬೇರೆಯವರನ್ನು ಹೇಗಿಟ್ಟಿರುತ್ತಾರೋ ಪವಿತ್ರಾ ಗೌಡರನ್ನೂ ಹಾಗೆಯೇ ಇಡಲಾಗಿದೆ, ಅವರಿಗೆ ಬೇರೆ ರೀತಿಯ ಟ್ರೀಟ್ಮೆಂಟ್ ಏನೂ ಸಿಗುತ್ತಿಲ್ಲ ಎಂದು ವಕೀಲ ಹೇಳಿದರು. ನ್ಯಾಯಾಂಗ ಬಂಧನದಲ್ಲಿರುವವರಿಗೆ ತೊಂದರೆ ಕೊಡೋದಿಲ್ಲ, ಅಲ್ಲಿ ಅವರಿಗೆ ಹಿಂಸೆ ನೀಡಲಾಗುತ್ತದೆ, ವಿಚಾರಣೆ ಮಾಡಲಾಗುತ್ತದೆ ಅನ್ನೋದು ಸುಳ್ಳು, ಆರೋಪಿಗಳ ಮನ ಪರಿವರ್ತನೆಯಾಗಲಿ ಎಂಬ ಉದ್ದೇಶದಿಂದ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿರುತ್ತದೆ. ಬೇರೆಯವರಿಗೆ ಕೊಡುವ ಊಟವನ್ನೇ ಅವರಿಗೂ ಕೊಡಲಾಗುತ್ತದೆ, ಮಾಧ್ಯಮಗಳು ವರದಿ ಮಾಡುವ ಹಾಗೆ ಪವಿತ್ರಾ ಗೌಡಗೆ ಬೇರೆ ಊಟವೇನೂ ನೀಡಲ್ಲ ಎಂದು ನಾರಾಯಣಸ್ವಾಮಿ ಹೇಳಿದರು. ಬೇಲ್ ಸಿಗುವವರೆಗೆ ಅಥವಾ ವಿಚಾರಣೆ ಮುಗುಯುವವರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲಾಗುತ್ತದೆ ಎಂದು ಅವರು ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು

Follow us
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ