
[lazy-load-videos-and-sticky-control id=”zMq7XR380CA”]
ನೆಲಮಂಗಲ: ರಾಜಧಾನಿಯಲ್ಲಿ ಲಾಕ್ಡೌನ್ ಘೋಷಿಸಿದ್ರೂ ಜನ ಮಾತ್ರ ಬುದ್ಧಿ ಕಲೀತಿಲ್ಲ. ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಈಗಾಗಲೇ ಹಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಇದರ ನಡುವೆ ಪೀಣ್ಯ ಕೈಗಾರಿಕಾ ಪ್ರದೇಶದ ಕೆಲವು ಕೈಗಾರಿಕೆಗಳು ಲಾಕ್ಡೌನ್ಗೆ ಡೋಂಟ್ಕೇರ್ ಎನ್ನುತ್ತಿವೆ.
ಬೆಂಗಳೂರಿನಲ್ಲಿ ಲಾಕ್ಡೌನ್ ಇದ್ರೂ ಗಾರ್ಮೆಂಟ್ಗಳು ಎಂದಿನಂತೆ ಓಪನ್ ಆಗಿವೆ. ಕಾರ್ಮಿಕರು ಸ್ವಂತ ವಾಹನಗಳಲ್ಲಿ ಕೆಲಸಕ್ಕೆ ಬರುತ್ತಿದ್ದಾರೆ. ಪೊಲೀಸರು ನೆಪಕ್ಕೆ ಮಾತ್ರವೇ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದಂತಿದೆ. ಕಾರು,ಬೈಕ್ಗಳಲ್ಲಿ ಕಾರ್ಮಿಕರು ಓಡಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ.
Published On - 10:54 am, Wed, 15 July 20