ಕೋಲಾರದಲ್ಲಿ ಭಾರತ್ ಅಕ್ಕಿಗಾಗಿ ಮುಗಿಬಿದ್ದ ಜನ: ಕೆಲವೇ ಕ್ಷಣಗಳಲ್ಲಿ ಒಂದು ಲಾರಿ ಲೋಡ್ ಖಾಲಿ
ನಿನ್ನೆಯಷ್ಟೇ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಸ್ ನಿಲ್ದಾಣದ ಬಳಿ ಭಾರತ್ ಅಕ್ಕಿ(bharat brand rice) ಪಡೆಯಲು ಜನರು ಮುಗಿಬಿದ್ದ ಘಟನೆ ನಡೆದಿತ್ತು. ಅದೆಷ್ಟೋ ಜನ ಅಕ್ಕಿ ಸಿಗದೇ ನಿರಾಸೆಗೊಂಡಿದ್ದರು. ಈ ಹಿನ್ನಲೆ ಇಂದು ಕೋಲಾರ (Kolar) ನಗರದ ಡೂಂ ಲೈಟ್ ಸರ್ಕಲ್ನಲ್ಲಿ ಬಿಜೆಪಿಯಿಂದ ಭಾರತ್ ಅಕ್ಕಿ ವಿತರಣೆ ಮಾಡಲಾಗಿದೆ.
ಕೋಲಾರ, ಫೆ.07: ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ (Bharat Brand Rice)ಯೋಜನೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಫೆಬ್ರವರಿ 06 ರಂದು ಚಾಲನೆ ನೀಡಿದರು. ಅದರಂತ ಕೋಲಾರ (Kolar) ನಗರದ ಡೂಂ ಲೈಟ್ ಸರ್ಕಲ್ನಲ್ಲಿ ಬಿಜೆಪಿ ಮುಖಂಡರು ಭಾರತ್ ಅಕ್ಕಿ ವಿತರಣೆ ಮಾಡಿದರು. ಪ್ರತಿ ಕೆಜಿಗೆ 29ರೂ ನಂತೆ ಹತ್ತು ಕೆಜಿ ಅಕ್ಕಿಯ ಬ್ಯಾಗ್ ವಿತರಿಸಲಾಗಿದೆ. ಈ ವೇಳೆ ಅಕ್ಕಿ ಪಡೆಯಲು ಜನರ ನೂಕು ನುಗ್ಗಲು ನಿರ್ಮಾಣವಾಗಿದ್ದು, ಕೆಲವೇ ಕ್ಷಣಗಳಲ್ಲಿ ಒಂದು ಲಾರಿ ಲೋಡ್ ಅಕ್ಕಿ ಖಾಲಿಯಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Wed, 7 February 24