Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಬಂದ್: ಫ್ರೀಡಂ ಪಾರ್ಕ್ ಬರುತ್ತಿದ್ದಂತೆಯೇ ವಾಟಾಳ್ ನಾಗರಾಜ್​ರನ್ನು ವಶಕ್ಕೆ ಪಡೆದ ಪೊಲೀಸ್

ಕರ್ನಾಟಕ ಬಂದ್: ಫ್ರೀಡಂ ಪಾರ್ಕ್ ಬರುತ್ತಿದ್ದಂತೆಯೇ ವಾಟಾಳ್ ನಾಗರಾಜ್​ರನ್ನು ವಶಕ್ಕೆ ಪಡೆದ ಪೊಲೀಸ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 22, 2025 | 2:19 PM

ಕಾರಿನ ಡೋರ್ ಬಳಿ ನಿಂತಿದ್ದ ಒಬ್ಬ ಕನ್ನಡ ಪರ ಹೋರಾಟಗಾರನ್ನು ಪೊಲೀಸರು ಅನಾಮತ್ತಾಗಿ ಎತ್ತಿ ಬಸ್ಸಿನ ಕಡೆ ಒಯ್ಯುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಾಟಾಳ್ ನಾಗರಾಜ್ ತಮ್ಮನ್ನು ಕರೆದೊಯ್ದ ಬಸ್ಸಿನ ಡೋರ್ ಬಳಿ ನಿಂತು ಪೊಲೀಸ್ ಗೂಂಡಾಗಿರಿಯನ್ನು ಸಹಿಸಲ್ಲ ಎನ್ನುತ್ತಾರೆ. ನಾಗರಾಜ್, ಬಂದ್ ಕರೆ ಯಶ ಕಂಡಿದೆ ಅಂತ ಹೇಳಿದರೆ ನಗರ ಪೊಲೀಸ್ ಕಮೀಶನರ್ ಜನಜೀವನ ಸಾಮಾನ್ಯವಾಗಿದೆ ಎನ್ನುತ್ತಾರೆ.

ಬೆಂಗಳೂರು, 22 ಮಾರ್ಚ್: ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಬೆಳಗಾವಿಯಿಂದ ಬ್ಯಾನ್ ಮಾಡುವುದು, ಮಹಾದಾಯಿ ಯೋಜನೆ ಜಾರಿ, ಕನ್ನಡಿಗರ ಹಿತರಕ್ಷಣೆ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ನಡೆಸಿದ್ದು ಯಶಸ್ವೀಯಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು. ಅವರು ಪ್ರತಿಭಟನೆಗೆ ಅಂತ ಫ್ರೀಡಂ ಪಾರ್ಕ್ ಬಳಿ ಬರುತ್ತಿದ್ದಂತೆಯೇ ಪೊಲೀಸರು ಅವರನ್ನು ಸೇರಿದಂತೆ ಸಾರಾ ಗೋವಿಂದು ಮತ್ತು ಇತರ ಹೋರಾಟಗಾರರನ್ನು ವಶಕ್ಕೆ ಪಡೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಾರೇನೇ ಹೇಳಿದರೂ ಮಾರ್ಚ್​ 22ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ನಿಲ್ಲಿಸಲಾಗದು: ವಾಟಾಳ್ ನಾಗರಾಜ್