AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದ ಜನರಿಗೆ ಹೂ ನೀಡಿ, ಸ್ವೀಟ್ ತಿನ್ನಿಸಿ, ಕನ್ನಡ ಬಾವುಟ ಹೊದಿಸಿ ಮಾತಾಡಿಸಿದ ಕನ್ನಡಿಗರು!ಮಹಾರಾಷ್ಟ್ರದ ಜನರಿಗೆ ಹೂ ನೀಡಿ, ಸ್ವೀಟ್ ತಿನ್ನಿಸಿ, ಕನ್ನಡ ಬಾವುಟ ಹೊದಿಸಿ ಮಾತಾಡಿಸಿದ ಕನ್ನಡಿಗರು!

ಮಹಾರಾಷ್ಟ್ರದ ಜನರಿಗೆ ಹೂ ನೀಡಿ, ಸ್ವೀಟ್ ತಿನ್ನಿಸಿ, ಕನ್ನಡ ಬಾವುಟ ಹೊದಿಸಿ ಮಾತಾಡಿಸಿದ ಕನ್ನಡಿಗರು!

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Feb 25, 2025 | 8:45 PM

Share

ಕನ್ನಡಪರ ಹೋರಾಟಗಾರರು ತಾವ್ಯಾಕೆ ಹೀಗೆ ಮಾಡುತ್ತಿದ್ದೇವೆ ಅನ್ನೋದನ್ನು ಮಹಾರಾಷ್ಟ್ರದವರಿಗೆ ಹಿಂದಿ ಭಾಷೆಯಲ್ಲಿ ಹೇಳುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಅವರಿಗೆ ಹಿಂದಿ ಚೆನ್ನಾಗಿ ಮಾತಾಡಲು ಬಾರದು, ಅದರೂ ಅವರ ಪ್ರಯತ್ನ ಮೆಚ್ಚಲೇಬೇಕು. ಕನ್ನಡಿಗರ ಈ ವರ್ತನೆಯನ್ನು ಮರಾಠಿಗರು ಗ್ರ್ಯಾಂಟೆಡ್ ಅಗಿ ತೆಗೆದುಕೊಳ್ಳಬಾರದು. ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಕನ್ನಡ ಸಂಘಗಳು ಹೇಗೆ ಹೋರಾಟ ನಡೆಸಿದವು ಅಂತ ಅವರಿಗೆ ಗೊತ್ತಿದೆ.

ದೇವನಹಳ್ಳಿ: ದೇವನಹಳ್ಳಿಯ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಮಾಡುತ್ತಿರುವ ಕೆಲಸ ನೋಡುತ್ತಿದ್ದರೆ ಸಂಜಯ್ ದತ್ ಮತ್ತು ವಿದ್ಯಾಬಾಲನ್ ನಟಿಸಿದ ‘ಲಗೇ ರಹೋ ಮುನ್ನಾಭಾಯಿ’ ಸಿನಿಮಾ ನೆನಪಾಗುತ್ತದೆ. ದೇವನಹಳ್ಳಿ ಟೋಲ್ ಗೇಟ್ ಬಳಿ ಗುಲಾಬಿ ಹೂ, ಸಿಹಿತಿಂಡಿ ಮತ್ತು ಕರ್ನಾಟಕದ ಬಾವುಟಗಳನ್ನು ಹಿಡಿದು ನಿಂತಿದ್ದ ಕಾರ್ಯಕರ್ತರು ಅಲ್ಲಿಗೆ ಬರುತ್ತಿದ್ದ ಮಹಾರಾಷ್ಟ್ರ ವಾಹನಗಳನ್ನು ನಿಲ್ಲಿಸಿ ಅವುಗಳಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗುಲಾಬಿ ಹೂ ನೀಡಿ, ಸಿಹಿ ತಿನ್ನಿಸಿದರು ಮತ್ತು ಅವರ ಹೆಗಲ ಮೇಲೆ ಕನ್ನಡ ಬಾವುಟವನ್ನು ಹೊದೆಸಿದರು. ಕನ್ನಡನಾಡಿನ ಸಂಸ್ಕೃತಿಯೇ ಇದು. ಕನ್ನಡಿಗರು ಶಾಂತಿಪ್ರಿಯರು, ಜಗಳ-ತಂಟೆ-ತಗಾದೆಗಳಿಂದ ಗಾವುದ ದೂರ. ಕನ್ನಡ ಸಂಘದ ಸದಸ್ಯರ ನಡವಳಿಕೆ ಮಹಾರಾಷ್ಟ್ರ ಜನಕ್ಕೆ ಬಹಳ ಇಷ್ಟವಾಯಿತು ಅಂತ ಬೇರೆ ಹೇಳಬೇಕೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ: ಬೆಳಗಾವಿ ಗಡಿಯಲ್ಲಿ ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ವಿವರ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.