200 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಸರ್ಕಾರಕ್ಕೆ ನಿರ್ಮಾಪಕ ಕೆ. ಮಂಜು ಮನವಿ
ನಿರ್ಮಾಪಕರ ಹೊರೆ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದೇವೆ. ಸರ್ಕಾರದಿಂದ ಸಹಾಯ ಪಡೆದು ವ್ಯವಸ್ಥೆ ಮಾಡುತ್ತೇವೆ. ಬಜೆಟ್ನಲ್ಲಿ ಚಿತ್ರರಂಗಕ್ಕೆ ಏನು ಬೇಕು ಎಂಬುದನ್ನು ಸರ್ಕಾರಕ್ಕೆ ಹೇಳುತ್ತೇವೆ. ಚಿತ್ರರಂಗ ಬೆಳೆಯಬೇಕು, ಉಳಿಯಬೇಕು. ಉದ್ಯಮಕ್ಕೆ ಯಾವುದೇ ಕಳಂಕ ಬರಬಾರದು ಎಂದು ಕೆ. ಮಂಜು ಹೇಳಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ (KFCC) ಸುದ್ದಿಗೋಷ್ಠಿ ನಡೆಸಲಾಗಿದೆ. ಈ ವೇಳೆ ನಿರ್ಮಾಪಕ ಕೆ. ಮಂಜು ಅವರು ಮಾತನಾಡಿದರು. ‘ಇಂದು ಹಲವು ನಿರ್ಮಾಪಕರು ವಾಣಿಜ್ಯ ಮಂಡಳಿಗೆ ಮನವಿ ಪತ್ರ ನೀಡಿದ್ದಾರೆ. ಚಿತ್ರರಂಗ ಇರುವವರೆಗೂ ಸಬ್ಸಿಡಿ ನೀಡಬೇಕು ಎಂಬುದು ನಮ್ಮೆಲ್ಲರ ಉದ್ದೇಶ. ಯಾವ ಕಾರಣಕ್ಕೂ ಸಬ್ಸಿಡಿ ನಿಲ್ಲಬಾರದು. ಇನ್ನೂ ಜಾಸ್ತಿ ಕೊಡಿ ಅಂತ ಕೇಳುತ್ತೇವೆ. 10 ಲಕ್ಷ ರೂಪಾಯಿ ಇರುವುದನ್ನು 15 ಲಕ್ಷ ರೂಪಾಯಿ ಮಾಡಿ ಎನ್ನುತ್ತೇವೆ. 125 ಸಿನಿಮಾಗಳಿಗೆ ಕೊಡುತ್ತಾರೆ. 200 ಸಿನಿಮಾಗಳಿಗೆ ಕೊಡಿ ಅಂತ ಕೇಳುತ್ತಿದ್ದೇವೆ. ಚಿತ್ರೋದ್ಯಮದ ಹಿತದೃಷ್ಟಿಯಿಂದ ಮನವಿ ಮಾಡುತ್ತಿದ್ದೇನೆ’ ಎಂದು ಕೆ. ಮಂಜು (K Manju) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 10, 2026 09:26 PM

