AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್, ಲಾಲು ಯಾದವ್ ಇಬ್ಬರಿಗೂ ಸೀತಾ ಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ; ಅಮಿತ್ ಶಾ ಸವಾಲು

ರಾಹುಲ್, ಲಾಲು ಯಾದವ್ ಇಬ್ಬರಿಗೂ ಸೀತಾ ಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ; ಅಮಿತ್ ಶಾ ಸವಾಲು

ಸುಷ್ಮಾ ಚಕ್ರೆ
|

Updated on: Nov 06, 2025 | 7:59 PM

Share

ಲಾಲು ಪ್ರಸಾದ್ ಯಾದವ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ್ದರು. "ಬಾಬರ್ ರಾಮ ಮಂದಿರವನ್ನು ಕೆಡವಿದರು, ಮೊಘಲರು ಅದರ ಪುನರ್ನಿರ್ಮಾಣವನ್ನು ನಿಲ್ಲಿಸಿದರು, ಬ್ರಿಟಿಷರು ಅದನ್ನು ವಿಳಂಬ ಮಾಡಿದರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅದನ್ನು ತಡೆಯಿತು. ನಂತರ ಲಾಲು ಪ್ರಸಾದ್ ಯಾದವ್ ಕೂಡ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದರು. ಆದರೆ, 2019ರಲ್ಲಿ ನೀವು ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಮತ್ತೆ ಆಯ್ಕೆ ಮಾಡಿದ್ದೀರಿ. ಅವರು ರಾಮ ಮಂದಿರವನ್ನು ನಿರ್ಮಿಸುವ ಮೂಲಕ ದೀರ್ಘಕಾಲದ ಭರವಸೆಯನ್ನು ಈಡೇರಿಸಿದ್ದಾರೆ. ಈಗ, ತಾಯಿ ಸೀತಾ ಮಾತೆಗೆ ಅರ್ಪಿತವಾದ ಭವ್ಯ ದೇವಾಲಯವನ್ನು ನಿರ್ಮಿಸಲು ಸಜ್ಜಾಗಿದ್ದೇವೆ. ಇದನ್ನು ತಪ್ಪಿಸಲು ರಾಹುಲ್ ಗಾಂಧಿ ಅಥವಾ ಲಾಲು ಪ್ರಸಾದ್ ಯಾದವ್ ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಮಧುಬನಿ, ನವೆಂಬರ್ 6: ಬಿಹಾರದಲ್ಲಿ (Bihar Elections) ಎನ್‌ಡಿಎ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳ ಒಳಗೆ ಸೀತಾಮರ್ಹಿಯಲ್ಲಿ ಭವ್ಯವಾದ ಸೀತಾ ಮಾತಾ ಮಂದಿರವನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಬಿಹಾರದ ಮಧುಬನಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ ಮಹಾಘಟಬಂಧನ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಮತ್ತು ಲಾಲು ಪ್ರಸಾದ್ ಯಾದವ್ ಕೂಡ ಸೀತಾ ಮಂದಿರದ ನಿರ್ಮಾಣವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಲಾಲು ಪ್ರಸಾದ್ ಯಾದವ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ್ದರು. “ಬಾಬರ್ ರಾಮ ಮಂದಿರವನ್ನು ಕೆಡವಿದರು, ಮೊಘಲರು ಅದರ ಪುನರ್ನಿರ್ಮಾಣವನ್ನು ನಿಲ್ಲಿಸಿದರು, ಬ್ರಿಟಿಷರು ಅದನ್ನು ವಿಳಂಬ ಮಾಡಿದರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅದನ್ನು ತಡೆಯಿತು. ನಂತರ ಲಾಲು ಪ್ರಸಾದ್ ಯಾದವ್ ಕೂಡ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದರು. ಆದರೆ, 2019ರಲ್ಲಿ ನೀವು ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಮತ್ತೆ ಆಯ್ಕೆ ಮಾಡಿದ್ದೀರಿ. ಅವರು ರಾಮ ಮಂದಿರವನ್ನು ನಿರ್ಮಿಸುವ ಮೂಲಕ ದೀರ್ಘಕಾಲದ ಭರವಸೆಯನ್ನು ಈಡೇರಿಸಿದ್ದಾರೆ. ಈಗ, ತಾಯಿ ಸೀತಾ ಮಾತೆಗೆ ಅರ್ಪಿತವಾದ ಭವ್ಯ ದೇವಾಲಯವನ್ನು ನಿರ್ಮಿಸಲು ಸಜ್ಜಾಗಿದ್ದೇವೆ. ಇದನ್ನು ತಪ್ಪಿಸಲು ರಾಹುಲ್ ಗಾಂಧಿ ಅಥವಾ ಲಾಲು ಪ್ರಸಾದ್ ಯಾದವ್ ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ