AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜತ್ ಜೊತೆ ಸ್ನೇಹ ಹೊಸದು, ಅವರು ಬಿಗ್ ಬಾಸ್ ಮನೆಗೆ ಬಂದ ಬಳಿಕ ಗೆಳೆತನ ಶುರುವಾಗಿದ್ದು: ತ್ರಿವಿಕ್ರಮ್

ರಜತ್ ಜೊತೆ ಸ್ನೇಹ ಹೊಸದು, ಅವರು ಬಿಗ್ ಬಾಸ್ ಮನೆಗೆ ಬಂದ ಬಳಿಕ ಗೆಳೆತನ ಶುರುವಾಗಿದ್ದು: ತ್ರಿವಿಕ್ರಮ್

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jan 27, 2025 | 10:49 AM

Share

ಭವ್ಯಾ ಮತ್ತು ತ್ರಿವಿಕ್ರಮ್ ನಡುವಿನ ಬಾಂಧ್ಯವ್ಯ, ಒಡನಾಟ ಮತ್ತು ಅನುರಾಗದ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಪ್ರತಿ ಸೀಸನಲ್ಲಿ ಇಂಥದೊಂದು ಅಂದರೆ ಪ್ರಣಯ, ಪ್ರೀತಿ ಎನ್ನುತ್ತಾ ಮನೆತುಂಬಾ ಓಡಾಡುವ ಒಂದು ಜೋಡಿ ಇರುತ್ತದೆ. ಇದು ಟಿಆರ್​ಪಿಗೋಸ್ಕರವೋ ಅಥವಾ ನಿಜವಾಗಿ ಅವರಲ್ಲಿ ಪ್ರೀತಿ ಉಂಟಾಗುತ್ತದೆಯೋ ಅಂತ ನಮಗಂತೂ ಗೊತ್ತಿಲ್ಲ ಮಾರಾಯ್ರೇ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ ಮುಗಿದಿದೆ ಮತ್ತು ಕನ್ನಡಿಗರಿಗೆಲ್ಲ ನೋಡಿರುವಂತೆ ಹಾವೇರಿಯ ಹಣಮಂತು ಹನ್ನೊಂದನೇ ಸೀಸನ್ ಗೆದ್ದುಕೊಂಡಿದ್ದಾರೆ. ಕೊನೇವರೆಗೂ ಉತ್ತಮ ಆಟ ಮತ್ತು ನಡಾವಳಿಯಿಂದ ಜನರ ಗಮನಸೆಳೆದಿದ್ದ ತ್ರಿವಿಕ್ರಮ್ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ್ದು ತಮ್ಮ ಅನುಭವ, ಭವ್ಯಾ ಗೌಡ ಅವರೊಂದಿಗೆ ಸ್ನೇಹ-ಪ್ರೀತಿ ಮತ್ತು ರಜತ್ ಅವರೊಂದಿಗೆ ಪೈಪೋಟಿ, ಗೆಳೆತನದ ಬಗ್ಗೆ ಮಾತಾಡಿದ್ದಾರೆ. ರಜತ್ ಜೊತೆ ಸ್ನೇಹ ಹೊಸದು ಆದರೆ ಭವ್ಯಾ ಮೊದಲಿಂದಲೇ ಪರಿಚಿತರು ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಹನುಮಂತ; ಮೊದಲೇ ಸೋರಿಕೆ ಆಯ್ತು ಮಾಹಿತಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.