AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತ್ರಿನಯನಿ’ ಧಾರಾವಾಹಿ ನಟಿ ಸಾವು ಹೇಗೆ ಆಯ್ತು? ವಿವರಿಸಿದ ಸಂಬಂಧಿಕರು

‘ತ್ರಿನಯನಿ’ ಧಾರಾವಾಹಿ ನಟಿ ಸಾವು ಹೇಗೆ ಆಯ್ತು? ವಿವರಿಸಿದ ಸಂಬಂಧಿಕರು

ಮದನ್​ ಕುಮಾರ್​
|

Updated on:May 13, 2024 | 7:54 PM

Share

ನಟಿ ಪವಿತ್ರಾ ಜಯರಾಮ್​ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು, ಮಂಡ್ಯದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಪಘಾತದಲ್ಲಿ ಪವಿತ್ರಾ ಅವರಿಗೆ ಹೆಚ್ಚು ಗಾಯ ಆಗಿರಲಿಲ್ಲ. ಹಾಗಿದ್ದರೂ ಕೂಡ ಅವರು ಕೊನೆಯುಸಿರು ಎಳೆದರು. ಅದಕ್ಕೆ ಕಾರಣ ಏನು ಎಂಬುದನ್ನು ಅವರ ಕುಟುಂಬದವರು ವಿವರಿಸಿದ್ದಾರೆ. ಆ ವಿಡಿಯೋ ಇಲ್ಲಿದೆ..

ರಸ್ತೆ ಅಪಘಾತದಲ್ಲಿ ನಟಿ ಪವಿತ್ರಾ ಜಯರಾಮ್ (Pavithra Jayaram) ಅವರು ಭಾನುವಾರ (ಮೇ 12) ನಿಧನರಾಗಿದ್ದಾರೆ. ಇಂದು (ಮೇ 13) ಮಂಡ್ಯದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸ್ನೇಹಿತರ ಜೊತೆ ಪವಿತ್ರಾ ಅವರು ಕಾರಿನಲ್ಲಿ ಬೆಂಗಳೂರಿನಿಂದ ಹೈದರಾಬಾದ್​ಗೆ ಪ್ರಯಾಣ ಮಾಡುವಾಗ ಅಪಘಾತ (Pavithra Jayaram Accident) ಸಂಭವಿಸಿತ್ತು. ಆದರೆ ಅವರಿಗೆ ಹೆಚ್ಚೇನೂ ಗಾಯ ಆಗಿರಲಿಲ್ಲ. ಹಾಗಿದ್ದರೂ ಕೂಡ ಅವರು ಕೊನೆಯುಸಿರು ಎಳೆದರು. ಆ ಘಟನೆ ಬಗ್ಗೆ ಸಂಬಂಧಿಕರು ಪ್ರತಿಕ್ರಿಯೆ ನೀಡಿದ್ದಾರೆ. ‘ಶೂಟಿಂಗ್​ ಸಲುವಾಗಿ ಪವಿತ್ರಾ ಅವರು ಹೈದರಾಬಾದ್​ಗೆ ತೆರಳುತ್ತಿದ್ದರು. ಅಲ್ಲಿ ಅಪಘಾತ ಆಯಿತು. ಹತ್ತಿರದಲ್ಲೇ ಆಸ್ಪತ್ರೆ ಇತ್ತು. ಆದರೆ ಸರಿಯಾದ ಸಮಯದಲ್ಲಿ ಆಂಬ್ಯುಲೆನ್ಸ್​ ಬರಲಿಲ್ಲ. ಜೊತೆಯಲ್ಲಿ ಇದ್ದವರಿಗೆ ಹೆಚ್ಚೇನೂ ಗಾಯ ಆಗಿಲ್ಲ. ಚಂದು ಎಂಬುವವರಿಗೆ ಸ್ವಲ್ಪ ಗಾಯ ಆಗಿದೆ. ಅವರ ಮುಖವೆಲ್ಲ ರಕ್ತವಾಗಿತ್ತು. ಅವರನ್ನು ನೋಡಿ ಗಾಬರಿಯಾಗಿ ಪವಿತ್ರಾಗೆ ಉಸಿರು ನಿಂತಿದೆ’ ಎಂದು ಸಂಬಂಧಿಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪವಿತ್ರಾ ಜಯರಾಮ್​ ನಿಧನಕ್ಕೆ (Pavithra Jayaram Death) ಅಭಿಮಾನಿಗಳು ಮತ್ತು ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ದರ್ಶನ್​ ನಟನೆಯ ಹೊಸ ಸಿನಿಮಾದಲ್ಲಿ ನಟಿಸುವ ಸಲುವಾಗಿ ಮಾತುಕಥೆಗೆ ಬಂದಿದ್ದ ನಟಿ ಪವಿತ್ರಾ ಜಯರಾಮ್​ ಅವರು ವಾಪಸ್​ ಹೈದರಾಬಾದ್​ಗೆ ಹೋಗುವಾಗ ಈ ದುರ್ಘಟನೆ ನಡೆದಿದೆ. ‘ತ್ರಿನಯನಿ’ ಧಾರಾವಾಹಿಯಲ್ಲಿ ನಟಿಸಿ ಅವರು ಫೇಮಸ್​ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: May 13, 2024 07:26 PM

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More