ರೇವಣ್ಣ ಕಣ್ಣೀರು ಹಾಕುವಂತೆ ಮಾಡಿದವರಿಗೆ ಒಕ್ಕಲಿಗರ ಶಕ್ತಿಯೇನು ಅಂತ ತೋರಿಸ್ತೀವಿ: ರೇವಣ್ಣ ಅಭಿಮಾನಿಗಳು

ಅರುಣ್​ ಕುಮಾರ್​ ಬೆಳ್ಳಿ

Updated on: May 14, 2024 | 6:34 PM

ಹಾಸನ ಜಿಲೆಯ ಜನರು ಕಣ್ಣೀರು ಸುರಿಸುವಂತೆ ಸರ್ಕಾರ ಮಾಡಿದೆ. ಅವರನ್ನು ಕಂಡು ರೇವಣ್ಣ ಸಹ ಕಣ್ಣೀರಿಟ್ಟಿದ್ದಾರಂತೆ. ಹಾಗಾಗಿ ಅವರ ಕಣ್ಣೀರು ವ್ಯರ್ಥ ಹೋಗಲು ಬಿಡಲ್ಲ, ಮುಂಬರುವ ದಿನಗಳಲ್ಲಿ ಒಕ್ಕಲಿಗರ ಶಕ್ತಿ ಏನು ಅಂತ ತೋರಿಸುತ್ತೇವೆ ಎಂದು ಅವರು ಹೇಳುತ್ತಾರೆ.

ಬೆಂಗಳೂರು: ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣರನ್ನು (HD Revanna) ಬಂಧಿಸಿ 3-4 ದಿನಗಳ ಕಾಲ ಜೈಲಿನಲ್ಲಿಟ್ಟಿದ್ದಕ್ಕೆ ಅವರ ಆಭಿಮಾನಿಗಳು ಮತ್ತು ಪಕ್ಷದ ಹಾಸನ ಕಾರ್ಯಕರ್ತರು ರೊಚ್ಚಿಗೆದಿದ್ದಾರೆ. ರೇವಣ್ಣ ಇಂದು ಜಾಮಿನು ಪಡೆದು ಹೊರಬಂದ ವಿಷಯ ಗೊತ್ತಾಗುತ್ತಿದ್ದಂತೆಯೇ ಅವರನ್ನು ಭೇಟಿಯಾಗಿ ಮಾತಾಡಿಸಲು ಹಾಸನ, ಹೊಳೆನರಸೀಪುರ ಮತ್ತು ಹಾಸನ ಜಿಲ್ಲೆಯ ಬೇರೆ ಬೇರೆ ಊರುಗಳಿಂದ ಜನ ಬಂದಿದ್ದರು. ರೇವಣ್ಣರನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (HD Devegowda) ಮನೆಯಲ್ಲಿ ಮನೆಯಲ್ಲಿ ಮಾತಾಡಿಸಿ ಬಂದ ಅಭಿಮಾನಿಗಳು ಮಾಧ್ಯಮದವರ (media) ಜೊತೆ ಮಾತಾಡಲು ಮುಗಿಬಿದ್ದರು. ಹಾಗಾಗಿ, ಅವರ ಮಾತು ಸ್ಪಷ್ಟವಾಗಿ ಕೇಳದ ಸನ್ನಿವೇಶ ಸೃಷ್ಟಿಯಾಯಿತು. ಎಲ್ಲರಿಗೂ ರೋಷದಲ್ಲಿ, ಆವೇಶದಲ್ಲಿ ಮಾತಾಡುವ ಕಾತುರ. ಅವರೆಲ್ಲ ಹೇಳುವುದನ್ನು ಕ್ರೋಢೀಕರಿಸಿ ನೋಡುವುದಾದರೆ, ರೇವಣ್ಣ ಅಮಾಯಕರು ಮತ್ತು ಸುಳ್ಳು ಕೇಸಲ್ಲಿ ಅವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ಹಾಸನ ಜಿಲೆಯ ಜನರು ಕಣ್ಣೀರು ಸುರಿಸುವಂತೆ ಸರ್ಕಾರ ಮಾಡಿದೆ. ಅವರನ್ನು ಕಂಡು ರೇವಣ್ಣ ಸಹ ಕಣ್ಣೀರಿಟ್ಟಿದ್ದಾರಂತೆ. ಹಾಗಾಗಿ ಅವರ ಕಣ್ಣೀರು ವ್ಯರ್ಥ ಹೋಗಲು ಬಿಡಲ್ಲ, ಮುಂಬರುವ ದಿನಗಳಲ್ಲಿ ಒಕ್ಕಲಿಗರ ಶಕ್ತಿ ಏನು ಅಂತ ತೋರಿಸುತ್ತೇವೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜೈಲಿಂದ ನೇರವಾಗಿ ದೇವೇಗೌಡರ ಮನೆಗೆ ಬಂದಿರುವ ಹೆಚ್ ಡಿ ರೇವಣ್ಣರನ್ನು ನೋಡಲು ಸಾವಿರಾರು ಜನರ ಜಮಾವಣೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.