AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಅಂದರೆ ನಿಲ್ಲಿಸಲಾಗುವುದು ಅಂತಲ್ಲ: ಮಂಕಾಳೆ ವೈದ್ಯ

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಅಂದರೆ ನಿಲ್ಲಿಸಲಾಗುವುದು ಅಂತಲ್ಲ: ಮಂಕಾಳೆ ವೈದ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 15, 2024 | 5:37 PM

Share

ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕರು ಮಾಡುವ ಕಾಮೆಂಟ್​​ಗಳು ಮುಖ್ಯವಲ್ಲ, ಯಾಕೆಂದರೆ ಅವರು ಪಾರ್ಲಿಮೆಂಟ್ ನಲ್ಲೂ ಸುಳ್ಳು ಹೇಳುತ್ತಾರೆ, ಹಾಗಾಗಿ ಅವರ ಟೀಕೆಗಳಿಗೆ ಮಹತ್ವ ನೀಡಲ್ಲ, ಸರ್ಕಾರದ ಉದ್ದೇಶ ಗ್ಯಾರಂಟಿ ಯೋಜನೆಗಳ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಿಗಬೇಕು ಎಂದು ಮಂಕಾಳೆ ವೈದ್ಯ ಹೇಳಿದರು.

ಕಾರವಾರ: ನಗರದ ತಮ್ಮ ಕಚೇರಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳಳೊಂದಿಗೆ ಮಾತಾಡಿದ ಮೀನುಗಾರಿಕಾ ಸಚಿವ ಮಂಕಾಳೆ ವೈದ್ಯ ಅವರು, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಅದರೆ ಸರ್ಕಾರ ಅವುಗಳನ್ನು ನಿಲ್ಲಿಸಲಿದೆ ಅಂತ ಅರ್ಥವಲ್ಲ, ಉಳ್ಳವರೂ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ, ಅದನ್ನು ನಿಲ್ಲಿಸುವ ಪ್ರಯತ್ನ ಸರ್ಕಾರ ಮಾಡಲಿದೆ, ಅವು ಕೇವಲ ಬಡವರು ಮತ್ತು ಅಸಹಾಯಕರಿಗಾಗಿ ವಿನ್ಯಾಸಗೊಳಿಸಿರುವ ಯೋಜನೆಗಳು ಎಂದು ಹೇಳಿದರು. ಯೋಜನೆಗಳನ್ನು ಘೋಷಿಸುವಾಗ ಪಕ್ಷದ ನಾಯಕರು ಹೆಚ್ಚು ಉತ್ಸಾಹಿತರಾಗಿ ಎಲ್ಲರಿಗೂ ಅವುಗಳ ಲಾಭ ಸಿಗಲಿದೆ ಅಂತ ಹೇಳಿದ್ದು ನಿಜ, ಆದರೆ ಸರ್ಕಾರೀ ನೌಕರರು ಸೇರಿದಂತೆ ಹಲವಾರು ಜನ ಫೋನ್ ಮಾಡಿ ತಮಗೆ ಯೋಜನೆಗಳ ಅವಶ್ಯಕತೆಯಿಲ್ಲ ಎನ್ನುತ್ತಿದ್ದಾರೆ, ಹಾಗಾಗಿ ಉಳ್ಳವರು, ಸರ್ಕಾರೀ ನೌಕರರು ಒಟ್ಟಿನಲ್ಲಿ ಯೋಜನೆಗಳ ಅವಶ್ಯಕತೆ ಇಲ್ಲದವರ ಹೆಸರುಗಳನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆಯುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಸಚಿವ ವೈದ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅನರ್ಹರೂ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ, ಇದು ನಿಲ್ಲಬೇಕು: ಸತೀಶ್ ಜಾರಕಿಹೊಳಿ