ಕಾಂಗ್ರೆಸ್ 50 ವರ್ಷಗಳಲ್ಲಿ ಮಾಡದ್ದನ್ನು ಕೇವಲ 10 ವರ್ಷಗಳಲ್ಲಿ ಮಾಡಿರುವ ಪ್ರಧಾನಿ ಮೋದಿ ಒಬ್ಬ ಕ್ರಾಂತಿಪುರುಷ: ಬಸನಗೌಡ ಯತ್ನಾಳ್

ಆ ಶಿವಾಜಿ ನಂತರ ಈಗ ದೇಶದಲ್ಲಿ ಮತ್ತೊಬ್ಬ ಶಿವಾಜಿ ಅವತರಿಸಿದ್ದಾರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ರೂಪದಲ್ಲಿ ಎಂದು ಯತ್ನಾಳ್ ಹೇಳಿದರು. ಮೋದಿಯವರು ಏನು ಮಾಡಿದ್ದಾರೆ ಅಂತ ಕಾಂಗ್ರೆಸ್ ನವರು ಕೇಳುತ್ತಾರೆ. ಕಾಂಗ್ರೆಸ್ 50-60 ವರ್ಷಗಳಲ್ಲಿ ಮಾಡಲಾಗದ್ದನ್ನು ಮೋದಿ ಕೇವಲ 10 ವರ್ಷದಲ್ಲಿ ಮಾಡಿದ್ದಾರೆ, ಅವರೊಬ್ಬ ಕ್ರಾಂತಿ ಪುರುಷ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಕಾಂಗ್ರೆಸ್ 50 ವರ್ಷಗಳಲ್ಲಿ ಮಾಡದ್ದನ್ನು ಕೇವಲ 10 ವರ್ಷಗಳಲ್ಲಿ ಮಾಡಿರುವ ಪ್ರಧಾನಿ ಮೋದಿ ಒಬ್ಬ ಕ್ರಾಂತಿಪುರುಷ: ಬಸನಗೌಡ ಯತ್ನಾಳ್
|

Updated on: Apr 12, 2024 | 6:35 PM

ಕಾರವಾರ: ನಗರದಲ್ಲಿಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಪರ ಪ್ರಚಾರ ಮಾಡಿದ ಹಿರಿಯ ಬಿಜೆಪಿ ನಾಯಕ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು, ಈ ಬಾರಿ ಲೋಕಸಭಾ ಚುನಾವಣೆ ನಡೆಯುತ್ತಿರೋದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗಾಗಿ ಅಲ್ಲ, ಈ ದೇಶವನ್ನು ರಕ್ಷಿಸಲು ಮತ್ತು ಹಿಂದೂತ್ವವನ್ನು ಉಳಿಸಲು ಎಂದು ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮಾತಾಡಿದ ಯತ್ನಾಳ್, ಹಿಂದೂತ್ವ ಉಳಿಸಲು ಅವರು ಮಾಡಿದ್ದು ಸಾಮಾನ್ಯ ಕೆಲಸವಲ್ಲ, ಅವರಿಲ್ಲದೆ ಹೋಗಿದ್ದರೆ ಇವತ್ತು ಭಾರತದ ಹಿಂದೂಗಳೆಲ್ಲ ಸುನ್ನತಿ ಮಾಡಿಕೊಂಡು ದಾಡಿಬಿಟ್ಟುಕೊಂಡು ತಿರುಗಬೇಕಾಗುತಿತ್ತು ಎಂದರು. ಆ ಶಿವಾಜಿ ನಂತರ ಈಗ ದೇಶದಲ್ಲಿ ಮತ್ತೊಬ್ಬ ಶಿವಾಜಿ ಅವತರಿಸಿದ್ದಾರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ರೂಪದಲ್ಲಿ ಎಂದು ಯತ್ನಾಳ್ ಹೇಳಿದರು. ಮೋದಿಯವರು ಏನು ಮಾಡಿದ್ದಾರೆ ಅಂತ ಕಾಂಗ್ರೆಸ್ ನವರು ಕೇಳುತ್ತಾರೆ. ಕಾಂಗ್ರೆಸ್ 50-60 ವರ್ಷಗಳಲ್ಲಿ ಮಾಡಲಾಗದ್ದನ್ನು ಮೋದಿ ಕೇವಲ 10 ವರ್ಷದಲ್ಲಿ ಮಾಡಿದ್ದಾರೆ, ಅವರೊಬ್ಬ ಕ್ರಾಂತಿ ಪುರುಷ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೆ ನಾನೇ ಮುಖ್ಯಮಂತ್ರಿ: ಬಸನಗೌಡ ಪಾಟೀಲ್ ಯತ್ನಾಳ್

Follow us