Kantara 2: ಅಣ್ಣಪ್ಪ ಪಂಜುರ್ಲಿ ಬಳಿ ‘ಕಾಂತಾರ 2’ ಬಗ್ಗೆ ರಿಷಬ್ ಶೆಟ್ಟಿ ಕೇಳಿದ್ದೇನು? ಎಲ್ಲವನ್ನೂ ವಿವರಿಸಿದ ದೈವ ನರ್ತಕರು
Rishab Shetty | Kantara Movie: ‘ಕಾಂತಾರ’ ಸಿನಿಮಾ ಯಶಸ್ವಿ ಆದ ಬೆನ್ನಲ್ಲೇ ‘ಕಾಂತರ 2’ ಬಗ್ಗೆ ಕೌತುಕ ಮೂಡಿದೆ. ಅದಕ್ಕಾಗಿ ರಿಷಬ್ ಶೆಟ್ಟಿ ಮತ್ತು ತಂಡದವರು ದೈವದ ಬಳಿ ಅನುಮತಿ ಕೇಳಿದ್ದಾರೆ.
ಅಣ್ಣಪ್ಪ ಪಂಜುರ್ಲಿ ದೈವಕ್ಕೆ ‘ಕಾಂತಾರ’ (Kantara Movie) ಚಿತ್ರತಂಡ ನೇಮೋತ್ಸವ ನೀಡಿದೆ. ಈ ಸಂದರ್ಭದಲ್ಲಿ ‘ಕಾಂತಾರ 2’ (Kantara 2) ಸಿನಿಮಾ ಮಾಡುವ ಬಗ್ಗೆ ಅನುಮತಿಯನ್ನು ಕೇಳಲಾಗಿದೆ. ಈ ಕಾರ್ಯದಲ್ಲಿ ಮುಂದುವರಿಯಬಹುದು ಎಂದು ದೈವದ ಅನುಮತಿ ಸಿಕ್ಕಿದೆ. ಈ ಕುರಿತು ದೈವ ನರ್ತಕರಾದ ಉಮೇಶ್ ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ (Rishab Shetty) ಅವರು ಆದಷ್ಟು ಬೇಗ ‘ಕಾಂತಾರ 2’ ಸಿನಿಮಾ ಶುರು ಮಾಡಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:27 pm, Mon, 12 December 22