Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಿಯರನ್ನು ಬಳಸಿ ಪ್ರ್ಯಾಂಕ್​ ಕಾಲ್​ ಮಾಡಿದ ಪ್ರಕರಣ; ನಿರ್ದೇಶಕನ ಸ್ಪಷ್ಟನೆ ಏನು?

ಹುಡುಗಿಯರನ್ನು ಬಳಸಿ ಪ್ರ್ಯಾಂಕ್​ ಕಾಲ್​ ಮಾಡಿದ ಪ್ರಕರಣ; ನಿರ್ದೇಶಕನ ಸ್ಪಷ್ಟನೆ ಏನು?

Malatesh Jaggin
| Updated By: ಮದನ್​ ಕುಮಾರ್​

Updated on: Nov 24, 2023 | 5:27 PM

ಕನ್ನಡ ಚಿತ್ರರಂಗದಲ್ಲಿ ಪ್ರ್ಯಾಂಕ್​ ಕಾಲ್​ ವಿವಾದ ಸದ್ದು ಮಾಡುತ್ತಿದೆ. ಹುಡುಗಿಯರ ಮೂಲಕ ಕೆಲವು ನಿರ್ಮಾಪಕರಿಗೆ ಕರೆ ಮಾಡಿ ಹಣ ಕೇಳಿದ ಘಟನೆ ನಡೆದಿದೆ. ನಿರ್ದೇಶಕ ರವೀಂದ್ರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ಕೂಡ ನಡೆಸಿದ್ದಾರೆ. ತಮ್ಮ ಮೇಲೆ ಬಂದ ಆರೋಪಕ್ಕೆ ರವೀಂದ್ರ ಈಗ ಸ್ಪಷ್ಟನೆ ನೀಡಿದ್ದಾರೆ.

ಚಿತ್ರರಂಗದಲ್ಲಿ ಹಲವು ಬಗೆಯ ವಿವಾದಗಳು (Sandalwood) ಇದ್ದೇ ಇರುತ್ತವೆ. ಈಗ ಕನ್ನಡ ಚಿತ್ರರಂಗದಲ್ಲಿ ಪ್ರ್ಯಾಂಕ್​ ಕಾಲ್ (Prank Call)​ ವಿವಾದ ಸದ್ದು ಮಾಡುತ್ತಿದೆ. ಹುಡುಗಿಯರ ಮೂಲಕ ಕೆಲವು ನಿರ್ಮಾಪಕರಿಗೆ ಕರೆ ಮಾಡಿ ಹಣ ಕೇಳಿದ ಘಟನೆ ನಡೆದಿದೆ. ನಿರ್ದೇಶಕ ರವೀಂದ್ರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ಕೂಡ ನಡೆಸಿದ್ದಾರೆ. ತಮ್ಮ ಮೇಲೆ ಬಂದ ಆರೋಪಕ್ಕೆ ರವೀಂದ್ರ ಈಗ ಸ್ಪಷ್ಟನೆ ನೀಡಿದ್ದಾರೆ. ವಾಣಿಜ್ಯ ಮಂಡಳಿಯ ಎಲೆಕ್ಷನ್​ನಲ್ಲಿ ಬೆಂಬಲ ನೀಡಿಲ್ಲ ಎಂಬುದನ್ನೇ ಗಮನದಲ್ಲಿ ಇಟ್ಟುಕೊಂಡು ತಮ್ಮ ವಿರುದ್ಧ ಈ ರೀತಿ ದೂರು ನೀಡಲಾಗಿದೆ ಎಂದು ರವೀಂದ್ರ ಹೇಳಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿ (Kannada Film Industry) ಸಕ್ರಿಯವಾಗಿರುವ ತಾವು ಯಾರಿಗೂ ಮೋಸ ಮಾಡಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ಅವರ ಸ್ಪಷ್ಟನೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.