ಗದೆ ಹಿಡಿದು ಭೀಮ ಪಾತ್ರಧಾರಿಯಾದ ಶಿವಲಿಂಗೇಗೌಡ: ಅಬಕಾರಿ ಸಚಿವರ ಡೈಲಾಗ್​​ ಕೇಳಿ ಪ್ರೇಕ್ಷಕರು ಫಿದಾ

Edited By:

Updated on: Sep 06, 2026 | 8:44 AM

ಹಾಸನದ ಅರಸೀಕೆರೆ ತಾಲೂಕಿನ ಚಿಂದೇನಹಳ್ಳಿಯಲ್ಲಿ ನಡೆದ ಕುರುಕ್ಷೇತ್ರ ಪೌರಾಣಿಕ ನಾಟಕದಲ್ಲಿ ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ಗದೆ ಹಿಡಿದು ಭೀಮನ ಪಾತ್ರದ ಸಂಭಾಷಣೆ ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ನಾಟಕದ ಡೈಲಾಗ್ ಹೇಳುವಂತೆ ಸಚಿವರನ್ನು ಗ್ರಾಮಸ್ಥರು ಒತ್ತಾಯಿಸಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಗದೆ ಹಿಡಿದು ಕುರುಕ್ಷೇತ್ರ ನಾಟಕದ ಸಂಭಾಷಣೆಯನ್ನು ಶಿವಲಿಂಗೇಗೌಡರು ಹೇಳಿದ್ದಾರೆ.

ಹಾಸನ, ಸೆಪ್ಟೆಂಬರ್​​ 06: ಗದೆ ಹಿಡಿದು ಭೀಮನಾದ ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ಪೌರಾಣಿಕ ನಾಟಕದ ಡೈಲಾಗ್ ಹೊಡೆದು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಪ್ರಜಾ ಸೇವೆ ಆಂದೋಲನ ಸಭೆ ಮುಗಿಸಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಚಿಂದೇನಹಳ್ಳಿ ಗಡಿಯಲ್ಲಿ ನಿನ್ನೆ ರಾತ್ರಿ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ನಡೆಯುತ್ತಿದ್ದ ಸ್ಥಳಕ್ಕೆ ಸಚಿವರು ಭೇಟಿ ನೀಡಿದ್ದರು. ಈ ವೇಳೆ ನಾಟಕದ ಡೈಲಾಗ್ ಹೇಳುವಂತೆ ಸಚಿವರನ್ನು ಗ್ರಾಮಸ್ಥರು ಒತ್ತಾಯಿಸಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಗದೆ ಹಿಡಿದು ಕುರುಕ್ಷೇತ್ರ ನಾಟಕದ ಸಂಭಾಷಣೆಯನ್ನು ಶಿವಲಿಂಗೇಗೌಡರು ಹೇಳಿದ್ದಾರೆ. ಸಚಿವ ಮಾತಿಗೆ ಫಿದಾ ಆದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದು ಸಂತಸಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Published on: Sep 06, 2026 08:41 AM
Loading...
Unable to load recommendations.
Follow Us