Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಗೂ ತಟ್ಟಿದ ಶಿವಮೊಗ್ಗದ ಈದ್​​ಮಿಲಾದ್​​ ಗಲಾಟೆ ಬಿಸಿ: ಅನಧಿಕೃತ ಬ್ಯಾನರ್​ಗಳ ತೆರವು

ಉಡುಪಿಗೂ ತಟ್ಟಿದ ಶಿವಮೊಗ್ಗದ ಈದ್​​ಮಿಲಾದ್​​ ಗಲಾಟೆ ಬಿಸಿ: ಅನಧಿಕೃತ ಬ್ಯಾನರ್​ಗಳ ತೆರವು

ಪ್ರಜ್ವಲ್ ಅಮೀನ್​, ಉಡುಪಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 04, 2023 | 12:36 PM

ಅ.10ಕ್ಕೆ ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ ನಿಗದಿಯಾಗಿದ್ದು, ಈ ಹಿನ್ನಲೆ ಅನಧಿಕೃತವಾಗಿ ಅಳವಡಿಸಿದ್ದ ಎಲ್ಲಾ ಬ್ಯಾನರ್​ಗಳನ್ನು ತೆರವು ಮಾಡಲಾಗಿದೆ. ಆ ಮೂಲಕ ಶಿವಮೊಗ್ಗದ ಈದ್​​ಮಿಲಾದ್​​ ಗಲಾಟೆ ಬಿಸಿ ಇದೀಗ ಉಡುಪಿಗೂ ತಟ್ಟಿದೆ. ಉಡುಪಿ ಎಸ್​​ಪಿ ಡಾ.ಅರುಣ್ ಸೂಚನೆಯಂತೆ ನಗರದ ಸುತ್ತಮುತ್ತ ಅಳವಡಿಸಿದ್ದ ಬ್ಯಾನರ್​ಗಳನ್ನು ತೆರವು ಮಾಡಲಾಗಿದೆ.

ಉಡುಪಿ, ಅಕ್ಟೋಬರ್​ 04: ಅ.10ಕ್ಕೆ ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ ನಿಗದಿಯಾಗಿದ್ದು, ಈ ಹಿನ್ನಲೆ ಅನಧಿಕೃತವಾಗಿ ಅಳವಡಿಸಿದ್ದ ಎಲ್ಲಾ ಬ್ಯಾನರ್​ (banners) ಗಳನ್ನು ತೆರವು ಮಾಡಲಾಗಿದೆ. ಆ ಮೂಲಕ ಶಿವಮೊಗ್ಗದ ಈದ್​​ಮಿಲಾದ್​​ ಗಲಾಟೆ ಬಿಸಿ ಇದೀಗ ಉಡುಪಿಗೂ ತಟ್ಟಿದೆ. ಉಡುಪಿ ಎಸ್​​ಪಿ ಡಾ.ಅರುಣ್ ಸೂಚನೆಯಂತೆ ನಗರದ ಸುತ್ತಮುತ್ತ ಅಳವಡಿಸಿದ್ದ ಬ್ಯಾನರ್​ಗಳನ್ನು ತೆರವು ಮಾಡಲಾಗಿದೆ. ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳು ಬ್ಯಾನರ್ ತೆರವುಗೊಳಿಸಿದ್ದಾರೆ. ಸದ್ಯ  ಶಿವಮೊಗ್ಗದ ರಾಗಿಗುಡ್ಡದಲ್ಲಿ ಇಂದು ಕೂಡ ನಿಷೇಧಾಜ್ಞೆ ಮುಂದುವರಿಕೆ ಆಗಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಒದಲಾಗಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.