ಮಳೆ ಸೃಷ್ಟಿಸಿರುವ ಅವಾಂತರಗಳನ್ನು ಬಿಬಿಎಂಪಿ ವಾರ್ರೂಮಲ್ಲಿ ಕೂತು ನೋಡಿದರೆ ಪರಿಹಾರಗಳು ಸಿಗುತ್ತವೆಯೇ?
ತಪ್ಪೆಲ್ಲ ಅಧಿಕಾರಿಗಳದ್ದೇ ಎಂಬಂತೆ ಮುಖ್ಯಮಂತ್ರಿ ಮಾತಾಡುತ್ತಾರೆ, ಆಫ್ ಕೋರ್ಸ್ ಅಧಿಕಾರಿಗಳ ಬೇಜವಾಬ್ದಾರಿತನ, ಉಡಾಫೆ ಮಾತು ಬೆಂಗಳೂರು ನಿವಾಸಿಗಳಿಗೆ ಅರ್ಥವಾಗುತ್ತಿದೆ. ಆದರೆ ಸರ್ಕಾರ ಏನು ಮಾಡುತ್ತಿದೆ, ರಾಜ್ಯದ ರಾಜಧಾನಿಯನ್ನು ಈ ಸ್ಥಿತಿಯಲ್ಲಿಟ್ಟುಕೊಂಡು ದೂರದ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡಿದರೆ ಅದಕ್ಕೇನಾದರೂ ಅರ್ಥವಿದೆಯಾ ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರು ಮೇ 19: ಈಗಾಗಲೇ ವರದಿಯಾಗಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಸಿಎಂ ಡಿಕೆ ಶಿವಕುಮಾರ್, ಮತ್ತು ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಜೊತೆ ಕೂತು ಬೆಂಗಳೂರು ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾದ (torrential rains in Bengaluru) ಸಮಸ್ಯೆಗಳನ್ನು ವೀಕ್ಷಿಸಿದರು. ನಂತರ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಯೊಬ್ಬರಿಗೆ ಮಳೆಗಾಲಕ್ಕೆ ಮೊದಲಿನ ಸಿದ್ಧತೆಗಳ ಬಗ್ಗೆ ವಿಚಾರಿಸಿದರು. ಈ ಅಧಿಕಾರಿ ಕೇಳಿದ್ದಕ್ಕೆಲ್ಲ ಗೋಣು ಆಡಿಸುತ್ತಾರೆ. ಮೇನಲ್ಲಿ ಮಳೆಯಾಗುತ್ತದೆ ಅಂತ ಗೊತ್ತಿದ್ದರೂ ಪೂರ್ವಸಿದ್ಧತೆಗಳನ್ನು ಯಾಕೆ ಮಾಡಿಕೊಂಡಿಲ್ಲ ಅಂತ ಕೇಳಿದರೆ ಓಕೆ ಸರ್ ಅಂತ ತಲೆಯಾಡಿಸುತ್ತಾರೆ!
ಇದನ್ನೂ ಓದಿ: ಏನು ಸಾಧನೆ ಮಾಡಿದ್ದಾರೆ ಅಂತ ಸಿದ್ದರಾಮಯ್ಯ ಸಾಧನಾ ಸಮಾವೇಶ ಮಾಡುತ್ತಿದ್ದಾರೆ? ಹೆಚ್ ವಿಶ್ವನಾಥ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ