ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿದ್ದು, 70ಕ್ಕೂ ಹೆಚ್ಚು ಗಿಳಿಗಳು ಸಾವನ್ನಪ್ಪಿವೆ ಮತ್ತು 50ಕ್ಕೂ ಹೆಚ್ಚು ಗಿಳಿಗಳು ಗಾಯಗೊಂಡಿವೆ. ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಈ ಪ್ರದೇಶದಾದ್ಯಂತ ಮರಗಳು ಉರುಳಿಬಿದ್ದು ಆಸ್ತಿಪಾಸ್ತಿಗೆ ಹಾನಿಯಾಗಿದೆ. ಸತ್ತ ಗಿಳಿಗಳ ನಿಖರ ಸಂಖ್ಯೆ ನೂರಾರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜಿಲ್ಲೆಯ ಬಾಮೋರ್ ಬ್ಲಾಕ್ ಅಡಿಯಲ್ಲಿ ಬರುವ ಸಿಂಘಾರ್ ಗ್ರಾಮದಿಂದ ಈ ಘಟನೆ ವರದಿಯಾಗಿದೆ. ಗ್ರಾಮಸ್ಥರ ಪ್ರಕಾರ, ದೇವಾಲಯದ ಬಳಿಯ ದೊಡ್ಡ ಹಳೆಯ ಪೀಪಲ್ನಲ್ಲಿ ನೂರಾರು ಗಿಳಿಗಳು ವಾಸಿಸುತ್ತಿವೆ.
ನೊಯ್ಡಾ, ಮೇ 24: 2 ದಿನಗಳಿಂದ ಉತ್ತರ ಪ್ರದೇಶದಲ್ಲಿ (Uttar Pradesh Rains) ಭಾರೀ ಮಳೆಯಾಗುತ್ತಿದೆ. ಇದರಿಂದ ಝಾನ್ಸಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಪಾರ ಸಂಖ್ಯೆಯಲ್ಲಿ ಗಿಳಿಗಳು ಸಾವನ್ನಪ್ಪಿವೆ. 70ಕ್ಕೂ ಹೆಚ್ಚು ಗಿಳಿಗಳು ಸಾವನ್ನಪ್ಪಿವೆ, 50ಕ್ಕೂ ಹೆಚ್ಚು ಗಿಳಿಗಳಿಗೆ ಗಾಯವಾಗಿದೆ. ಅವುಗಳನ್ನು ತಕ್ಷಣವೇ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೇ 22ರ ರಾತ್ರಿ ಝಾನ್ಸಿ ಜಿಲ್ಲೆಯ ಕೆಲವು ಭಾಗಗಳನ್ನು ಅಪ್ಪಳಿಸಿದ ಭಾರೀ ಬಿರುಗಾಳಿಯಿಂದಾಗಿ ಅನೇಕರು ಗಾಯಗೊಂಡಿದ್ದಾರೆ. ಸತ್ತ ಗಿಳಿಗಳ ನಿಖರ ಸಂಖ್ಯೆ ನೂರಾರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಜಿಲ್ಲೆಯ ಬಾಮೋರ್ ಬ್ಲಾಕ್ ಅಡಿಯಲ್ಲಿ ಬರುವ ಸಿಂಘಾರ್ ಗ್ರಾಮದ ದೇವಾಲಯದ ಬಳಿಯ ದೊಡ್ಡ ಹಳೆಯ ಮರದಲ್ಲಿ ನೂರಾರು ಗಿಳಿಗಳು ವಾಸಿಸುತ್ತಿವೆ. ಅವು ಬಿರುಗಾಳಿಯ ಹೊಡೆತಕ್ಕೆ ಸತ್ತು ಹೋಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us