AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯೂಅರ್ ಕೋಡ್ ತೆಗೆದಿಟ್ಟ ಧಾಬಾ ಮಾಲೀಕ, ಯುಪಿಐ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದ ಗ್ರಾಹಕ

ಕ್ಯೂಅರ್ ಕೋಡ್ ತೆಗೆದಿಟ್ಟ ಧಾಬಾ ಮಾಲೀಕ, ಯುಪಿಐ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದ ಗ್ರಾಹಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 19, 2025 | 3:43 PM

Share

ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಧಾಬಾ ಮಾಲೀಕ, ಯುಪಿಐ ಮೂಲಕ ಹಣ ಸ್ವೀಕರಿಸುವುದು ಸಮಸ್ಯೆ ಸೃಷ್ಟಿಸುತ್ತಿರುವುದರಿಂದ ಅದನ್ನು ತೆಗೆದು ಬಿಟ್ಟಿದ್ದೇವೆ, ಅದ್ರೆ ಜನ ಫೋನ್​ಗಳ ಮೂಲಕವೇ ಪೇಮೆಂಟ್ ಮಾಡಲು ಮುಂದಾಗುತ್ತಿದ್ದಾರೆ. ಸರ್ಕಾರ ಏನಾದರೂ ಬದಲೀ ವ್ಯವಸ್ಥೆ ಮಾಡಬೇಕು, ವಾಣಿಜ್ಯ ತೆರಿಗೆಯನ್ನು ತಾವು ಲಕ್ಷಗಟ್ಟಲೆ ನೀಡಲಾಗಲ್ಲ ಎಂದು ಹೇಳುತ್ತಾರೆ.

ಧಾರವಾಡ, ಜುಲೈ 19: ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯವರು ಸಣ್ಣಪುಟ್ಟ ವ್ಯಾಪಾರಿಗಳಿಗೆ, ತರಕಾರಿ ಮಾರುವವರಿಗೆ ಹೋಟೆಲ್, ಧಾಬಾ ನಡೆಸುವವರಿಗೆ ಕಳಿಸುತ್ತಿರುವ ಭಾರೀ ಮೊತ್ತದ ಟ್ಯಾಕ್ಸ್ ನೋಟೀಸ್​ಗಳು (tax notice) ತಲ್ಲಣ ಸೃಷ್ಟಿಸಿವೆ. ಯುಪಿಐ ಮೂಲಕ ಹಣ ಸ್ವೀಕರಿಸುವುದೇ ಬೇಡ ಎಂಬ ನಿರ್ಣಯಕ್ಕೆ ಬಹಳಷ್ಟು ವ್ಯಾಪಾರಿಗಳು ಬಂದಂತಿದೆ. ಧಾರವಾಡ ನಗರದ ಹೊರವಲಯದಲ್ಲಿ ಧಾಬಾವೊಂದನ್ನು ನಡೆಸುವ ವ್ಯಕ್ತಿಯೊಬ್ಬರು ತಮ್ಮ ಕ್ಯಾಶ್ ಕೌಂಟರ್ ಮೇಲೆ ನಗದು ಮಾತ್ರ ಬರೆದುಬಿಡುವ ಜೊತೆಗೆ ಬ್ಯಾಂಕ್​ನವರು ನೀಡಿದ್ದ ಕ್ಯೂಅರ್ ಕೋಡ್ ಅನ್ನು ತೆಗೆದುಬಿಟ್ಟಿದ್ದಾರೆ. ಅದರೆ ಗ್ರಾಹಕರೊಬ್ಬರು ತನ್ನಲ್ಲಿ ಯುಪಿಐ ಮೂಲಕ ಹಣ ನೀಡುವವುದನ್ನು ಬಿಟ್ರೆ ಬೇರೆ ಆಪ್ಷನ್ ಇಲ್ಲವೆನ್ನುತ್ತಿದ್ದಾರೆ. ಎಂಥ ಸಂದಿಗ್ಧತೆ ಇದು?

ಇದನ್ನೂ ಓದಿ:   ತಪ್ಪದ ಕಮರ್ಷಿಯಲ್ ಟ್ಯಾಕ್ಸ್ ಬವಣೆ, ಸರ್ಕಾರಕ್ಕೆ ಪಾಠ ಕಲಿಸಲು ಮುಂದಾದ ಸಣ್ಣ ವರ್ತಕರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ