ದರ್ಶನ್ ನೋಡಲು ಸೋನಲ್ ಯಾಕೆ ಬರಲಿಲ್ಲ? ಉತ್ತರ ನೀಡಿದ ತರುಣ್ ಸುಧೀರ್

| Updated By: ಮದನ್​ ಕುಮಾರ್​

Updated on: Jul 19, 2024 | 3:34 PM

ನಟಿ ಸೋನಲ್​ ಮಾಂಥೆರೋ ಮತ್ತು ನಿರ್ದೇಶಕ ತರುಣ್​ ಸುಧೀರ್​ ಅವರು ಕೆಲವೇ ದಿನಗಳಲ್ಲಿ ಮದುವೆ ಆಗಲಿದ್ದಾರೆ. ಈ ವಿಚಾರದ ಬಗ್ಗೆ ಜೈಲಿನಲ್ಲಿರುವ ದರ್ಶನ್​ ಜೊತೆ ತರುಣ್​ ಸುಧೀರ್​ ಅವರು ಇಂದು (ಜುಲೈ 19) ಮಾತನಾಡಿ ಬಂದಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ದರ್ಶನ್​ ಅವರನ್ನು ಮದುವೆಗೆ ಕರೆಯಲು ಸೋನಲ್​ ಯಾಕೆ ಬಂದಿಲ್ಲ ಎಂಬ ಬಗ್ಗೆಯೂ ತರುಣ್​ ಸುಧೀರ್​ ಮಾತನಾಡಿದ್ದಾರೆ.

ನಿರ್ದೇಶಕ ತರುಣ್​ ಸುಧೀರ್​ ಅವರು ಸದ್ಯದಲ್ಲೇ ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ನಟಿ ಸೋನಲ್​ ಮಾಂಥೆರೋ ಜೊತೆ ಅವರ ಮದುವೆ ನಡೆಯಲಿದೆ. ಆದರೆ ಇವರ ಮದುವೆಗೆ ನಟ ದರ್ಶನ್​ ಬರುತ್ತಾರೋ ಇಲ್ಲವೋ ಎಂಬ ಕೌತುಕ ಮೂಡಿದೆ. ಯಾಕೆಂದರೆ, ದರ್ಶನ್​ ಸದ್ಯಕ್ಕೆ ಜೈಲಿನಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆಗಸ್ಟ್​ 1ರ ತನಕ ದರ್ಶನ್​ ಅವರ ನ್ಯಾಯಾಂಗ ಬಂಧನದ ಅವಧಿ ಮುಂದುವರಿಯಲಿದೆ. ಆ ಬಳಿಕವೂ ಜಾಮೀನು ಸಿಗುವುದು ಸುಲಭವಿಲ್ಲ. ತರುಣ್​ ಸುಧೀರ್​ ಅವರು ಇಂದು (ಜುಲೈ 19) ಜೈಲಿಗೆ ತೆರಳಿ ದರ್ಶನ್​ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಸೋನಲ್ ಮಾಂಥೆರೋ ಬಂದಿಲ್ಲ. ಯಾಕೆ ಎಂಬುದಕ್ಕೆ ತರುಣ್​ ಉತ್ತರಿಸಿದ್ದಾರೆ. ‘ಅನುಮತಿ ಇದ್ದಿದ್ದು 5 ಜನರಿಗೆ ಮಾತ್ರ. ಹಾಗಾಗಿ ನಾವು ಮಾತ್ರ ಬಂದಿದ್ದೇವೆ. 2 ವಾರದಿಂದ ನಾನು ಪ್ರಯತ್ನಿಸುತ್ತಿದ್ದೆ. ಮೊದಲು ಕುಟುಂಬದವರ ಭೇಟಿ ಆಗಬೇಕಿತ್ತು. ನನಗೆ ಇಂದು ಅವಕಾಶ ಸಿಕ್ಕಿತು’ ಎಂದು ತರುಣ್ ಸುಧೀರ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on