ಚಿಕ್ಕಮಗಳೂರಿನ ದೇವರಮನೆಯಲ್ಲಿರುವ ಭೈರವೇಶ್ವರ ದೇವಸ್ಥಾನ ಪ್ರದೇಶ ಪರಶಿವ ಕಾಲಿಡುವ ಮೊದಲು ಬೆಂಗಾಡಾಗಿತ್ತು!

ಈ ಪ್ರದೇಶದ ಪೌರಾಣಿಕ ಹಿನ್ನೆಲೆಯನ್ನು ನಾವು ಗಮನಿಸಿದ್ದೇಯಾದರೆ, ಇದು ಮೊದಲಿಗೆ ದಟ್ಟಕಾಡಾಗಿತ್ತು. ಪರಶಿವನು ಇಲ್ಲಿ ಕಾಲಿಟ್ಟ ನಂತರ ಬೆಂಗಾಡು ಹೀಗೆ ಪರಿವರ್ತನೆಗೊಂಡು ದೇವರಮನೆ ಅನಿಸಿಕೊಂಡಿತು.

ಚಿಕ್ಕಮಗಳೂರಿನ ದೇವರಮನೆಯಲ್ಲಿರುವ ಭೈರವೇಶ್ವರ ದೇವಸ್ಥಾನ ಪ್ರದೇಶ ಪರಶಿವ ಕಾಲಿಡುವ ಮೊದಲು ಬೆಂಗಾಡಾಗಿತ್ತು!
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 29, 2021 | 5:24 PM

ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ದೇವರಮನೆಯಲ್ಲರುವ ಕಾಲ ಭೈರವೇಶ್ವರ ದೇವಸ್ಥಾವನ್ನು ತಲುಪಬೇಕಾದರೆ, ನೀವು ಮೊದಲು ಈ ಪ್ರಕೃತಿದತ್ತ ರಮಣೀಯ ಗುಡ್ಡಗಾಡು ಪ್ರದೇಶವನ್ನು ಪ್ರವೇಶಿಸಬೇಕು. ಬೆಟ್ಟದ ಮೇಲಿನ ಹಚ್ಚ ಹಸುರಿನಿಂದಾವೃತ, ಮನಸ್ಸಿಗೆ ಮುದನೀಡುವ ಮತ್ತು ಕಣ್ಣಿಗೆ ಮನೋಹರವಾಗಿ ಕಾಣುವ ಸ್ಥಳವನ್ನು ನೋಡಿದರೆ, ಸ್ವರ್ಗವೇ ಭೂಮಿಗೆ ಇಳಿದು ಬಂದಂತಿದೆ ಎಂದು ಭಾಸವಾಗುತ್ತದೆ. ಸಮುದ್ರಮಟ್ಟಕ್ಕಿಂತ ಎರಡು ಸಾವಿರ ಅಡಿ ಎತ್ತರವಿರುವ ದೇವರಮನೆ ಪ್ರದೇಶದಲ್ಲಿ ಸರಿದಾಡುವ ಮೋಡಗಳು ನಿಮ್ಮ ಕೈಗೆಟಕುವ ಎತ್ತರದಲ್ಲಿರುವಂತೆ ಅನಿಸುತ್ತದೆ. ಅಗೋ, ಅಲ್ಲಿ ದೂರದಲ್ಲಿ ಹರಿಯುತ್ತಿರುವ ಝರಿಗಳನ್ನು ನೋಡಿ. ಬೆಟ್ಟದಿಂದ ಹಾಲು ಹರಿಯುತ್ತಿರುವಂತೆ ಕಾಣುತ್ತದೆ.

ಇಂಥ ಮನಮೋಹಕ ಪ್ರದೇಶವಾಗಿರುವ ದೇವರಮನೆಯಲ್ಲಿ ಸುಮಾರು 1,400 ವರ್ಷಗಳ ಹಿಂದೆ ಕಾಲಭೈರವೇಶ್ವರ ಮಂದಿರ ನಿರ್ಮಾಣಗೊಂಡಿದೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದ್ದೇಯಾದರೆ, ಚೋಳ ಸಾಮ್ರಾಜ್ಯದ ಅರಸ ಬಲಾಢ್ಯ ರಾಯ ಈ ದೇವಸ್ಥಾನ ಕಟ್ಟಿಸಿದನೆಂಬ ಬಗ್ಗೆ ಮಾಹಿತಿ ಸಿಗುತ್ತದೆ.

ಹಾಗೆಯೇ ಈ ಪ್ರದೇಶದ ಪೌರಾಣಿಕ ಹಿನ್ನೆಲೆಯನ್ನು ನಾವು ಗಮನಿಸಿದ್ದೇಯಾದರೆ, ಇದು ಮೊದಲಿಗೆ ದಟ್ಟಕಾಡಾಗಿತ್ತು. ಪರಶಿವನು ಇಲ್ಲಿ ಕಾಲಿಟ್ಟ ನಂತರ ಬೆಂಗಾಡು ಹೀಗೆ ಪರಿವರ್ತನೆಗೊಂಡು ದೇವರಮನೆ ಅನಿಸಿಕೊಂಡಿತು. ಇಲ್ಲಿರುವ ದೇವಸ್ಥಾನದ ಪ್ರಸಿದ್ಧಿ ಹೇಗಿದೆಯೆಂದರೆ, ಚಿಕ್ಕಮಗಳೂರು ಮತ್ತು ಪಕ್ಕದ ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆನೇಕ ಕುಟುಂಬಗಳಿಗೆ ದೇವರ ಮನೆ ಭೈರವೇಶ್ವರನೇ ಮನೆ ದೇವರು.

ಲಗ್ನ ಆಗಬೇಕೆಂದಿರುವರು ಮತ್ತು ಸಂತಾನ ಬಯಸುತ್ತಿರುವವರಿಗೆ ಈ ದೇವಸ್ಥಾನದ ಭೇಟಿ ಫಲಪ್ರದವಾಗುತ್ತದಂತೆ. ಉಗಾದಿ ಹಬ್ಬದ ಸಂದರ್ಭದಲ್ಲಿ ಸಹಸ್ರಾರು ಭಕ್ತರು ದೇವರಮನೆಗೆ ಭೇಟಿ ನೀಡಿ ಪೂಜೆ ಪುನಸ್ಕಾರ ನಡೆಸುತ್ತಾರೆ.

ಇದನ್ನೂ ಓದಿ:  ಯೂಟ್ಯೂಬ್​​ನಲ್ಲಿ ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಪಾಲಕರಿಗೆ ಗೊತ್ತಾಗದಂತೆ ನಿಭಾಯಿಸಿದ ರೀತಿ ನಿಜಕ್ಕೂ ಶಾಕಿಂಗ್​​

Follow us
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​