Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikmagalur: ಸ್ವಾತಂತ್ರ್ಯ ಸಿಕ್ಕು 76 ವರ್ಷಗಳ ನಂತರ ಚಿಕ್ಕಮಗಳೂರಿನ ಹೊಯ್ಸಳಲು ಗ್ರಾಮಕ ಮೊದಲ ಬಾರಿಗೆ ಸರ್ಕಾರಿ ಬಸ್ ಕಂಡಿತು!

Chikmagalur: ಸ್ವಾತಂತ್ರ್ಯ ಸಿಕ್ಕು 76 ವರ್ಷಗಳ ನಂತರ ಚಿಕ್ಕಮಗಳೂರಿನ ಹೊಯ್ಸಳಲು ಗ್ರಾಮಕ ಮೊದಲ ಬಾರಿಗೆ ಸರ್ಕಾರಿ ಬಸ್ ಕಂಡಿತು!

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 26, 2023 | 10:53 AM

ಮಕ್ಕಳ ಮುಖದಲ್ಲಿ ಮಿಂಚು ನೋಡಿದರೆ ಅವರು ಎಷ್ಟು ಸಂಭ್ರಮಿಸುತ್ತಿದ್ದಾರೆ ಅನ್ನೋದು ಗೊತ್ತಾಗುತ್ತದೆ.

ಚಿಕ್ಕಮಗಳೂರು: ನಮ್ಮ ದೇಶಕ್ಕೆ ಸ್ವಾತಂತ್ರ್ಯ (Independence) ಬಂದು 76 ವರ್ಷವಾಯಿತು ಅಂತ ಸಂಭ್ರಮಿಸಿದ್ದಷ್ಟೇ ಬಂತು ಸ್ವಾಮಿ. ಇದನ್ನು ಯಾಕೆ ವಿಷಾದದಿಂದ ಹೇಳಬೇಕಿದೆ ಅಂದರೆ, ದೇಶವನ್ನು ಮತ್ತು ರಾಜ್ಯವನ್ನು ಆಳಿದ ಬೇರೆ ಬೇರೆ ಸರ್ಕಾರಗಳು ಇದುವರೆಗೆ ಕೆಲವು ಗ್ರಾಮಗಳಿಗೆ ಬಸ್ ಸೌಕರ್ಯವನ್ನು ಕಲ್ಪಿಸಿಲ್ಲ. ಅಂಥದೊಂದು ಗ್ರಾಮ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೊಯ್ಸಳಲು (Hoysalu). ಇಲ್ಲಿನ ನಿವಾಸಿಗಳು ಸೋಮವಾರದಂದು ತಮ್ಮ ಊರಲ್ಲಿ ಮೊದಲ ಬಾರಿಗೆ ಕೆಆಸ್ ಆರ್ ಟಿ ಸಿ ಬಸ್ (KSRTC bus) ಕಂಡಿದ್ದಾರೆ. ಹಾಗೆ ನೋಡಿದರೆ, ಈ ಊರು ತಾಲ್ಲೂಕು ಕೇಂದ್ರದಿಂದ ಕೇವಲ 5 ಕಿಮೀ ಮಾತ್ರ ದೂರದಲ್ಲಿದೆ. ಶಾಲಾ ಮಕ್ಕಳು ಪ್ರತಿದಿನ 5 ಕಿಮೀ ನಡೆದು ಶಾಲೆ ತಲುಪುತ್ತಿದ್ದರು. ಮಕ್ಕಳ ಮುಖದಲ್ಲಿ ಮಿಂಚು ನೋಡಿದರೆ ಅವರು ಎಷ್ಟು ಸಂಭ್ರಮಿಸುತ್ತಿದ್ದಾರೆ ಅನ್ನೋದು ಗೊತ್ತಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
.

Published on: Jun 26, 2023 10:52 AM