Chikmagalur: ಸ್ವಾತಂತ್ರ್ಯ ಸಿಕ್ಕು 76 ವರ್ಷಗಳ ನಂತರ ಚಿಕ್ಕಮಗಳೂರಿನ ಹೊಯ್ಸಳಲು ಗ್ರಾಮಕ ಮೊದಲ ಬಾರಿಗೆ ಸರ್ಕಾರಿ ಬಸ್ ಕಂಡಿತು!
ಮಕ್ಕಳ ಮುಖದಲ್ಲಿ ಮಿಂಚು ನೋಡಿದರೆ ಅವರು ಎಷ್ಟು ಸಂಭ್ರಮಿಸುತ್ತಿದ್ದಾರೆ ಅನ್ನೋದು ಗೊತ್ತಾಗುತ್ತದೆ.
ಚಿಕ್ಕಮಗಳೂರು: ನಮ್ಮ ದೇಶಕ್ಕೆ ಸ್ವಾತಂತ್ರ್ಯ (Independence) ಬಂದು 76 ವರ್ಷವಾಯಿತು ಅಂತ ಸಂಭ್ರಮಿಸಿದ್ದಷ್ಟೇ ಬಂತು ಸ್ವಾಮಿ. ಇದನ್ನು ಯಾಕೆ ವಿಷಾದದಿಂದ ಹೇಳಬೇಕಿದೆ ಅಂದರೆ, ದೇಶವನ್ನು ಮತ್ತು ರಾಜ್ಯವನ್ನು ಆಳಿದ ಬೇರೆ ಬೇರೆ ಸರ್ಕಾರಗಳು ಇದುವರೆಗೆ ಕೆಲವು ಗ್ರಾಮಗಳಿಗೆ ಬಸ್ ಸೌಕರ್ಯವನ್ನು ಕಲ್ಪಿಸಿಲ್ಲ. ಅಂಥದೊಂದು ಗ್ರಾಮ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೊಯ್ಸಳಲು (Hoysalu). ಇಲ್ಲಿನ ನಿವಾಸಿಗಳು ಸೋಮವಾರದಂದು ತಮ್ಮ ಊರಲ್ಲಿ ಮೊದಲ ಬಾರಿಗೆ ಕೆಆಸ್ ಆರ್ ಟಿ ಸಿ ಬಸ್ (KSRTC bus) ಕಂಡಿದ್ದಾರೆ. ಹಾಗೆ ನೋಡಿದರೆ, ಈ ಊರು ತಾಲ್ಲೂಕು ಕೇಂದ್ರದಿಂದ ಕೇವಲ 5 ಕಿಮೀ ಮಾತ್ರ ದೂರದಲ್ಲಿದೆ. ಶಾಲಾ ಮಕ್ಕಳು ಪ್ರತಿದಿನ 5 ಕಿಮೀ ನಡೆದು ಶಾಲೆ ತಲುಪುತ್ತಿದ್ದರು. ಮಕ್ಕಳ ಮುಖದಲ್ಲಿ ಮಿಂಚು ನೋಡಿದರೆ ಅವರು ಎಷ್ಟು ಸಂಭ್ರಮಿಸುತ್ತಿದ್ದಾರೆ ಅನ್ನೋದು ಗೊತ್ತಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
.

ಯತ್ನಾಳ್ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ

ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್

ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
