AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಂಪಿಯನ್ ಆರ್​ಸಿಬಿ ತಂಡದ ಆಟಗಾರರನ್ನು ಹೆಚ್​ಎಎಲ್ ನಿಂದ ಕರೆತರಲು ವಿಶೇಷ ಬಸ್ಸುಗಳು ಸಿದ್ಧ

ಚಾಂಪಿಯನ್ ಆರ್​ಸಿಬಿ ತಂಡದ ಆಟಗಾರರನ್ನು ಹೆಚ್​ಎಎಲ್ ನಿಂದ ಕರೆತರಲು ವಿಶೇಷ ಬಸ್ಸುಗಳು ಸಿದ್ಧ

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 04, 2025 | 2:29 PM

Share

ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟದಿಂದ ಸತ್ಕಾರದ ಬಳಿಕ ಆಟಗಾರರನ್ನು ಅಲ್ಲಿಂದ ಸುಮಾರು 6 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ಮೆರವಣಿಗೆ ಬದಲು ಬಸ್​​ಗಳಲ್ಲಿ ಕರೆತರಲಾಗುವುದು. ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ತಮ್ಮ ನೆಚ್ಚಿನ ತಂಡದ ಆಟಗಾರರನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಸಿಗಲಿದೆ. ನಗರದ ನಿವಾಸಿಗಳು ಚಾನ್ಸ್ ಮಿಸ್ ಮಾಡ್ಕೊಳ್ಳೋದು ಬೇಡ.

ಬೆಂಗಳೂರು, ಜೂನ್ 4: ಈ ಎರಡು ಬಸ್​ಗಳನ್ನು ಗಮನಿಸಿ ಮಾರಾಯ್ರೇ, ಇವು ಖಂಡಿತವಾಗಿಯೂ ಸಾಮಾನ್ಯ ಬಸ್​ಗಳಲ್ಲ, ಇಂದು ಗುಜರಾತಿನ ಅಹಮದಾಬಾದ್​ನಿಂದ ನಗರಕ್ಕೆ ಆಗಮಿಸಲಿರುವ ಐಪಿಎಲ್ ಚಾಂಪಿಯನ್ಸ್ ಬೆಂಗಳೂರು ರಾಯಲ್ ಚಾಲೆಂಜರ್ಸ್ (Royal Challengers Bengaluru) ತಂಡದ ಸದಸ್ಯರನ್ನು ಹೆಚ್​ಎಎಲ್ ವಿಮಾನ ನಿಲ್ದಾಣದಿಂದ ವಿಧಾನ ಸೌಧಕ್ಕೆ ಕರೆತರಲು ಅಣಿಯಾಗಿರುವ ಬಸ್​ಗಳಿವು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಇಂದು ಮಧ್ಯಾಹ್ನ 1.30 ಕ್ಕೆ ಆರ್​ಸಿಬಿ ಆಟಗಾರರನ್ನು ಹೊತ್ತ ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಅಗಲಿದೆ. ಅಟಗಾರರು ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 5 ಗಂಟೆಗೆ ಭೇಟಿಯಾಗಲಿದ್ದಾರೆ ಮತ್ತು ಅಲ್ಲೇ ಆಟಗಾರರನ್ನು ಸತ್ಕರಿಸಲಾಗುವುದು.

ಇದನ್ನೂ ಓದಿ:   ಕಪ್ ಗೆದ್ದು ಕೊಡ್ತೀನಿ… RCB ಅಭಿಮಾನಿಗಳ ಮುಂದಿಟ್ಟ ಶಪಥ ಈಡೇರಿಸಿದ ಕೃನಾಲ್ ಪಾಂಡ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 04, 2025 01:37 PM