ಬೇರೆಯವರಂತೆ ನಾವೂ ಸಹ ಸಮಾಜದ ಮುಖಂಡರೊಂದಿಗೆ ಸಭೆ ನಡೆಸುವುದು ಸರಿ ಇರಲ್ಲ: ಬಿವೈ ವಿಜಯೇಂದ್ರ
ಎಲ್ಲ ಸರಿಹೋಗಿ ವಾತಾವರಣ ತಿಳಿಯಾಗುತ್ತಿರುವ ಸಮಯ ಎಂದು ವಿಜಯೇಂದ್ರ ಹೇಳುತ್ತಾರೆ. ಆದರೆ ವಾಸ್ತವ ಬೇರೇನೇ ಇದೆ. ಬಸನಗೌಡ ಪಾಟೀಲ್ ಪ್ರತ್ಯೇಕ ಸಭೆಗಳನ್ನು ನಡೆಸುವುದು ನಿಲ್ಲಿಸಿಲ್ಲ, ಫೆಬ್ರುವರಿ 20 ರೊಳಗೆ ಎಲ್ಲ ಸರಿಹೋಗುತ್ತದೆ ಅಂತ ದೆಹಲಿಯಿಂದ ವಾಪಸ್ಸು ಬಂದ ಬಳಿಕ ಖುದ್ದು ವಿಜಯೇಂದ್ರನೇ ಹೇಳಿದ್ದರು. ಭಿನ್ನರ ಚಟುವಟಿಕೆಗಳನ್ನು ಹತ್ತಿಕ್ಕಲು ವರಿಷ್ಠರು ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಹಾಸನ, ಫೆ 28: ಯಡಿಯೂರಪ್ಪ (BS Yediyurappa) ಮತ್ತು ತನ್ನ ವಿರುದ್ಧ ಪಕ್ಷದ ಕೆಲ ನಾಯಕರ ಜೊತೆ ಸಮಾಜದ ಮುಖಂಡರ ಜೊತೆ ಸಭೆ ನಡೆಸಿರುವುದರ ಬಗ್ಗೆ ತಾನೇನೂ ಕಮೆಂಟ್ ಮಾಡಲ್ಲ, ಅದರೆ ತಾನು ಹೇಳಲಿಚ್ಛಿಸುವ ಸಂಗತಿಯೇನೆಂದರೆ, ಸಮಾಜದ ಮುಖಂಡರೆಂದುಕೊಂಡು ಸಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳನ್ನು ಸಮಾಜ ಹಾಗಿರಲಿ, ಅವರು ವಾಸ ಮಾಡುವ ಊರು ಮತ್ತು ಕೇರಿಯ ಜನ ಸಹ ಅವರನ್ನು ಗುರುತಿಸಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಅವರು ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆಂಬ ಕಾರಣಕ್ಕೆ ನಾವು ಸಹ ಮಾಡೋದು ಸರಿಯಿರಲ್ಲ, ತಾನು ರೇಣುಕಾಚಾರ್ಯ ಜೊತೆ ಮಾತಾಡುವುದಾಗಿ ವಿಜಯೇಂದ್ರ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ: ವಿಚಾರಣೆಗೆ ಹಾಜರಾಗಲು ಸಮನ್ಸ್
Follow Us
Latest Videos
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
