Video: ಮೋದಿ ಅವರನ್ನು ಆಯ್ಕೆ ಮಾಡಿದ್ರೆ ಉಳಿತೀರಿ, ಇಲ್ಲಾಂದ್ರೆ ಉಳಿಯಲ್ಲ: ಮಹಾಲಿಂಗೇಶ್ವರ ಸ್ವಾಮೀಜಿ ಜಟ ಭವಿಷ್ಯ ವೈರಲ್
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರಿಸಿ ತಂದರೆ ಉಳಿತೀರಿ, ಒಂದು ವೇಳೆ ಆರಿಸಿ ತರಲಿಲ್ಲವೆಂದರೆ ಉಳಿಯುವುದಿಲ್ಲ. ಇದರ ಮೇಲೆ ಏನಾದರೂ ವ್ಯತ್ಯಾಸ ಮಾಡಿದರೆ ಹಾಳಾಗುವ ಕಾಲ ಬರುತ್ತದೆ ಎಂದು ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಗರದ ಮಹಾಲಿಂಗೇಶ್ವರ ಮಠದ ಸ್ವಾಮೀಜಿ ಹೇಳಿದ ಜಟ ಭವಿಷ್ಯ ಹೇಳಿದ್ದಾರೆ.
ಬಾಗಲಕೋಟೆ, ಅಕ್ಟೋಬರ್ 16: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರಿಸಿ ತಂದರೆ ಉಳಿತೀರಿ, ಒಂದು ವೇಳೆ ಆರಿಸಿ ತರಲಿಲ್ಲವೆಂದರೆ ಉಳಿಯುವುದಿಲ್ಲ. ಇದರ ಮೇಲೆ ಏನಾದರೂ ವ್ಯತ್ಯಾಸ ಮಾಡಿದರೆ ಹಾಳಾಗುವ ಕಾಲ ಬರುತ್ತದೆ ಎಂದು ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಗರದ ಮಹಾಲಿಂಗೇಶ್ವರ (mahalingeshwar swamiji) ಮಠದ ಸ್ವಾಮೀಜಿ ಹೇಳಿದ ಜಟ ಭವಿಷ್ಯ ಹೇಳಿದ್ದಾರೆ. ನವರಾತ್ರಿ ದೀಪೋತ್ಸವ ವೇಳೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಕೈಯಲ್ಲಿ ಜಟ ಹಿಡಿದು ಜಟವಾಣಿ ನುಡಿದಿದ್ದಾರೆ. ಸದ್ಯ ಈ ಭವಿಷ್ಯ ವಾಣಿ ಸಾಕಷ್ಟು ವೈರಲ್ ಆಗಿದೆ. ಮೂಲ ಮಹಾಲಿಂಗೇಶ್ವರ ಸ್ವಾಮೀಜಿ ಅವರ ಜಟ(ಕೂದಲು) ಆಗಿದ್ದು, ಪ್ರತಿ ವರ್ಷ ಜಟ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಜಟ ಹಿಡಿದು ಹೇಳುವ ಭವಿಷ್ಯ ನಿಜವಾಗುತ್ತದೆ ಎಂಬ ನಂಬಿಕೆ ಭಕ್ತರದು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:24 pm, Mon, 16 October 23