AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇನ್ನುಮುಂದೆ ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ

Video: ಇನ್ನುಮುಂದೆ ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ

ನಯನಾ ರಾಜೀವ್
|

Updated on: May 25, 2025 | 9:37 AM

Share

ಇನ್ನುಮುಂದೆ ಭಯೋತ್ಪಾದಕರ ಶವವನ್ನು ಭಾರತದ ಮಣ್ಣಿನಲ್ಲಿ ಹೂಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಹೇಳಿಕೆ ನೀಡಿದ್ದಾರೆ. ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರ ಮಗಳ ವಿವಾಹ ಸಮಾರಂಭಕ್ಕಾಗಿ ಮುಖ್ಯ ಇಮಾಮ್ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಆಗಮಿಸಿದ್ದರು.

ಗ್ವಾಲಿಯರ್, ಮೇ 25: ಇನ್ನುಮುಂದೆ ಭಯೋತ್ಪಾದಕರ ಶವವನ್ನು ಭಾರತದ ಮಣ್ಣಿನಲ್ಲಿ ಹೂಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಹೇಳಿಕೆ ನೀಡಿದ್ದಾರೆ. ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರ ಮಗಳ ವಿವಾಹ ಸಮಾರಂಭಕ್ಕಾಗಿ ಮುಖ್ಯ ಇಮಾಮ್ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಆಗಮಿಸಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಇಲ್ಯಾಸಿ, ಭಯೋತ್ಪಾದಕ ಸಂಘಟನೆಗಳು ‘ಇಸ್ಲಾಂ’ ಮತ್ತು ‘ಮೊಹಮ್ಮದ್’ ನಂತಹ ಪವಿತ್ರ ಪದಗಳನ್ನು ತಮ್ಮ ಹೆಸರುಗಳಿಂದ ತೆಗೆದುಹಾಕಬೇಕು, ಏಕೆಂದರೆ ಅವರ ಕಾರ್ಯಗಳು ಇಸ್ಲಾಂನ ನಿಜವಾದ ಬೋಧನೆಗಳಿಗೆ ವಿರುದ್ಧವಾಗಿವೆ.ಲವ್ ಜಿಹಾದ್ ಬಗ್ಗೆ ಇಲ್ಯಾಸಿ ಮಾತನಾಡಿ,ಮುಕ್ತವಾಗಿ ಒಪ್ಪಿಕೊಂಡು ಮಾಡುವ ವಿವಾಹಗಳು ನಡೆಯಲಿ, ಆದರೆ ಗೊಂದಲ ಸೃಷ್ಟಿಸುವ ವಿವಾಹಗಳನ್ನು ತಪ್ಪಿಸಬೇಕು ಎಂದರು.ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಭಯೋತ್ಪಾದಕನೊಬ್ಬ ಭೂತವಿದ್ದಂತೆ, ಮತ್ತು ಅವನನ್ನು ಅದೇ ರೀತಿ ನಡೆಸಿಕೊಳ್ಳಬೇಕು ಎಂದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ