ಬೆಂಗಳೂರು, ಸೆಪ್ಟೆಂಬರ್ 12: ಮಂಡ್ಯ (Mandya) ನಾಗಮಂಗಲ ಘಟನೆ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿದ್ದು, ಆ ಘಟನೆ ಆಗಬಾರದಿತ್ತು. ರಾಜಕಾರಣಿಗಳ ಹೇಳಿಕೆಯಿಂದಲೇ ಇಂತಹ ಘಟನೆ ಆಗುವುದು. ಬಿಜೆಪಿ ಸರ್ಕಾರದಲ್ಲಿ ಇದ್ದಾಗ ಈ ರೀತಿ ಘಟನೆ ಆಗಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಈ ರೀತಿ ಘಟನೆ ವಿಷಾದನೀಯ. ಎಲ್ಲ ಧರ್ಮದವರಿಗೂ ತಮ್ಮದೇ ಆದ ಹಬ್ಬ ಇರುತ್ತೆ, ಆಚರಿಸುತ್ತಾರೆ. ಈ ಘಟನೆಯನ್ನು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:35 pm, Thu, 12 September 24