ತಿರುಪತಿ ತಿಮ್ಮಪ್ಪನ ಸೇವೆಗೆ ಬಳಸುವ ಪುನುಗು ಬೆಕ್ಕು ಬೋನಿನಲ್ಲಿ ಸಿಕ್ಕಿಬಿತ್ತು! ವಿಡಿಯೋ ವೈರಲ್ ಆಯ್ತು!

ಸಾಧು ಶ್ರೀನಾಥ್​

Updated on: Jul 29, 2024 | 11:39 AM

Viverridae: ಈ ಬೆಕ್ಕಿನ ದೇಹದಲ್ಲಿರುವ ಗ್ರಂಥಿಗಳಿಂದ ಬರುವ ಬೆವರು ಒಣಗಿದಾಗ ಎಣ್ಣೆಯಂತೆ ಅಂಟಿಕೊಂಡಿರುತ್ತದೆ.. ಸುಗಂಧ ಪರಿಮಳವನ್ನು ಸೂಸುತ್ತದೆ.. ಅದಕ್ಕಾಗಿಯೇ ಈ ಎಣ್ಣೆಯನ್ನು ತಿರುಮಲ ಶ್ರೀವಾರಿಯ (ತಿರುಪತಿ ತಿಮ್ಮಪ್ಪನ) ಸೇವೆಗೆ ಬಳಸಲಾಗುತ್ತದೆ. ಶ್ರೀನಿವಾಸನ ಅಭಿಷೇಕ ಮುಗಿದ ನಂತರ ಈ ಪುನುಗು ಬೆಕ್ಕಿನ ಎಣ್ಣೆಯನ್ನು ಶ್ರೀಗಳ ತಲೆಯಿಂದ ಪಾದದವರೆಗೆ ಹಚ್ಚಲಾಗುತ್ತದೆ. ಅಳಿವಿನಂಚಿನಲ್ಲಿರುವ ಈ ಬೆಕ್ಕುಗಳನ್ನು ಟಿಟಿಡಿ ವಿಶೇಷವಾಗಿ ಸಾಕುತ್ತಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಅಪರೂಪದ ಬೆಕ್ಕು ಕಾಣಿಸಿಕೊಂಡಿದೆ. ಶೇಷಾಚಲಂ ಮತ್ತು ನಲ್ಲಮಲ ಅರಣ್ಯದಲ್ಲಿ ಕಂಡುಬರುವ ಈ ಅಪರೂಪದ ಪ್ರಾಣಿ ಗಂಗನಮ್ಮಕೋಡು ಪ್ರದೇಶದ ಈಲಿ ರಮೇಶ್ ಎಂಬುವವರ ಮನೆಯ ಆವರಣದಲ್ಲಿ ಪತ್ತೆಯಾಗಿದೆ. ಇಲಿ, ಹಂದಿಗಳನ್ನು ಹಿಡಿಯಲು ಹಾಕಿದ್ದ ಬೋನಿಗೆ ಪುನುಗು ಬೆಕ್ಕು ಸಿಕ್ಕಿಹಾಕಿಕೊಂಡಿದೆ. ಬೆಳಗ್ಗೆ ಬೋನಿನಲ್ಲಿದ್ದ ಈ ಪ್ರಾಣಿಯನ್ನು ನೋಡಿ ರಮೇಶ್ ಅವರ ಕುಟುಂಬಸ್ಥರು ಆಶ್ಚರ್ಯಚಕಿತರಾದರು. ವಿಷಯ ತಿಳಿದ ಸ್ಥಳೀಯರು ಅದನ್ನು ಪುನುಗು ಬೆಕ್ಕುಎಂದು ಗುರುತಿಸಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಈ ಬೆಕ್ಕಿನ ದೇಹದಲ್ಲಿರುವ ಗ್ರಂಥಿಗಳಿಂದ ಬರುವ ಬೆವರು ಒಣಗಿದಾಗ ಎಣ್ಣೆಯಂತೆ ಅಂಟಿಕೊಂಡಿರುತ್ತದೆ.. ಸುಗಂಧ ಪರಿಮಳವನ್ನು ಸೂಸುತ್ತದೆ.. ಅದಕ್ಕಾಗಿಯೇ ಈ ಎಣ್ಣೆಯನ್ನು ತಿರುಮಲ ಶ್ರೀವಾರಿಯ (ತಿರುಪತಿ ತಿಮ್ಮಪ್ಪನ) ಸೇವೆಗೆ ಬಳಸಲಾಗುತ್ತದೆ. ಶ್ರೀನಿವಾಸನ ಅಭಿಷೇಕ ಮುಗಿದ ನಂತರ ಈ ಪುನುಗು ಬೆಕ್ಕಿನ ಎಣ್ಣೆಯನ್ನು ಶ್ರೀಗಳ ತಲೆಯಿಂದ ಪಾದದವರೆಗೆ ಹಚ್ಚಲಾಗುತ್ತದೆ. ಅಳಿವಿನಂಚಿನಲ್ಲಿರುವ ಈ ಬೆಕ್ಕುಗಳನ್ನು ಟಿಟಿಡಿ ವಿಶೇಷವಾಗಿ ಸಾಕುತ್ತಿದೆ. ತಿರುಮಲದ ಗೋಶಾಲೆಯಲ್ಲಿ ಪುನುಗು ಬೆಕ್ಕುಗಳನ್ನು ಸಾಕಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು