AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ರೇಣುಕಾಚಾರ್ಯ ಮತ್ತು ಇತರ ಅತೃಪ್ತರೊಂದಿಗೆ ಯಡಿಯೂರಪ್ಪ ಚರ್ಚೆ, ಅಸಮಾಧಾನ ಶಮನಕ್ಕೆ ಕಸರತ್ತು!

ದಾವಣಗೆರೆಯಲ್ಲಿ ರೇಣುಕಾಚಾರ್ಯ ಮತ್ತು ಇತರ ಅತೃಪ್ತರೊಂದಿಗೆ ಯಡಿಯೂರಪ್ಪ ಚರ್ಚೆ, ಅಸಮಾಧಾನ ಶಮನಕ್ಕೆ ಕಸರತ್ತು!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 26, 2024 | 4:50 PM

ಗಾಯತ್ರಿಗೆ ನೀಡಿರುವ ಟಿಕೆಟ್ ವಾಪಸ್ಸು ಪಡೆದು ತನಗೆ ನೀಡುವವವರೆಗೆ ವಿಶ್ರಮಿಸುವುದಿಲ್ಲ ಎಂದು ಹಟಕ್ಕೆ ಬಿದ್ದಿರುವ ಮಾಜಿ ಶಾಸಕನನ್ನು ಸಮಾಧಾನಪಡಿಸಲು ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ದಾವಣಗೆರೆಗೆ ಭೇಟಿ ನೀಡಿದ್ದರು.

ದಾವಣಗೆರೆ: ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂಪಿ ರೇಣುಕಾಚಾರ್ಯ (MP Renukacharya), ಅದು ಗಾಯತ್ರಿ ಸಿದ್ದೇಶ್ವರ್ (Gayathri Siddeshwara) ಪಾಲಾದಾಗಿನಿಂದ ಬಂಡೆದ್ದಿರುವುದು ಕನ್ನಡಿಗರಿಗೆ ಗೊತ್ತಿರುವ ಸಂಗತಿ. ಗಾಯತ್ರಿಗೆ ನೀಡಿರುವ ಟಿಕೆಟ್ ವಾಪಸ್ಸು ಪಡೆದು ತನಗೆ ನೀಡುವವವರೆಗೆ ವಿಶ್ರಮಿಸುವುದಿಲ್ಲ ಎಂದು ಹಟಕ್ಕೆ ಬಿದ್ದಿರುವ ಮಾಜಿ ಶಾಸಕನನ್ನು ಸಮಾಧಾನಪಡಿಸಲು ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಇಂದು ದಾವಣಗೆರೆಗೆ ಭೇಟಿ ನೀಡಿದ್ದರು. ರೇಣುಕಾಚಾರ್ಯ ಜತೆ ಮಾಜಿ ಸಚಿವರಾದ ಕರುಣಾಕರ ರೆಡ್ಡಿ, ಎಸ್ ಎ ರವೀಂದ್ರನಾಥ್ ಮತ್ತು ಇನ್ನಿತರ ಜೊತೆಯೂ ಯಡಿಯೂರಪ್ಪ ಚರ್ಚೆ ನಡೆಸಿದರು. ನಂತರ ಅವರೆಲ್ಲರೊಂದಿಗೆ ಯಡಿಯೂರಪ್ಪ ನಗರದ ಹೊರವಲಯದಲ್ಲಿರುವ ರೆಸಾರ್ಟ್ ಒಂದರಲ್ಲಿ ಲಂಚ್ ಸಹ ಮಾಡಿದರು. ಅತೃಪ್ತ ನಾಯಕರೊಂದದಿಗೆ ಯಡಿಯೂರಪ್ಪ ರೆಸಾರ್ಟ್ ಗೆ ಆಗಮಿಸುತ್ತಿರವುದನ್ನು ಮತ್ತು ಅವರೊಂದಿಗೆ ಊಟಕ್ಕೆ ಕೂರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಗಮನಿಸಬೇಕಾದ ಸಂಗತಿಯೇನೆಂದರೆ, ಗಾಯತ್ರಿ ಅವರನ್ನಾಗಲೀ ಅಥವಾ ಅವರ ಪತಿ ಹಾಲಿ ಸಂಸದ ಜಿಎಂ ಸಿದ್ದೇಶ್ವರ ಅವರನ್ನಾಗಲೀ ರೆಸಾರ್ಟ್ ಗೆ ಆಹ್ವಾನಿಸಿರಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಿಜೆಪಿ ಎರಡನೇ ಪಟ್ಟಿ: ವಿರೋಧಿಗಳಿಗೆ ಟಿಕೆಟ್ ತಪ್ಪಿಸುವಲ್ಲಿ ಬಿಎಸ್ ಯಡಿಯೂರಪ್ಪ ಮೇಲುಗೈ, ಸಂತೋಷ್ ಬಣಕ್ಕೆ ಅಲ್ಪ ಯಶಸ್ಸು