AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಂಟಿ ಮನುಷ್ಯನಾಗಿಯೇ ಉಳಿಯೋದು ನೀನು’; ಕಾರ್ತಿಕ್​ಗೆ ನೇರವಾಗಿ ಹೇಳಿದ ವಿನಯ್

‘ಒಂಟಿ ಮನುಷ್ಯನಾಗಿಯೇ ಉಳಿಯೋದು ನೀನು’; ಕಾರ್ತಿಕ್​ಗೆ ನೇರವಾಗಿ ಹೇಳಿದ ವಿನಯ್

ರಾಜೇಶ್ ದುಗ್ಗುಮನೆ
|

Updated on: Nov 08, 2023 | 9:09 AM

Share

ಕಾರ್ತಿಕ್ ಹಾಗೂ ಸಂಗೀತಾ ಎದುರು ಸಿರಿ ಟೀಂನವರು ಕೂಗಾಡಿದ್ದಾರೆ. ‘ನೀನು ಒಂಟಿಯಾಗಿಯೇ ಸಾಯೋದು’ ಎಂದು ಕಾರ್ತಿಕ್​ಗೆ ಹೇಳಿದ್ದಾರೆ ವಿನಯ್. ಈ ಪ್ರೋಮೋ ಗಮನ ಸೆಳೆಯುತ್ತಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್​ನಲ್ಲಿ (Bigg Boss) ಹೊಸ ಹೊಸ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಎಲ್ಲಾ ಟಾಸ್ಕ್​ಗಳು ಭಿನ್ನವಾಗಿವೆ. ಇವುಗಳು ವೀಕ್ಷಕರಿಗೆ ಇಷ್ಟ ಆಗುತ್ತಿವೆ. ಇದರ ಜೊತೆ ಈ ಟಾಸ್ಕ್​ಗಳಿಂದ ಮನೆಯಲ್ಲಿ ಮನಸ್ತಾಪಗಳು ಉಂಟಾಗುತ್ತಿವೆ. ಇಂದು (ನವೆಂಬರ್ 8) ಹೊಸ ಟಾಸ್ಕ್ ಒಂದನ್ನು ನೀಡಲಾಗಿದೆ. ಈ ಟಾಸ್ಕ್​ ಪ್ರಕಾರ ಒಬ್ಬರು ಕುಳಿತಿರುತ್ತಾರೆ. ಅವರ ಎದುರು ಹೋಗಿ ಎದುರಾಳಿಗಳು ಅವರನ್ನು ಕೆಣಕಬೇಕು. ಕಾರ್ತಿಕ್ ಹಾಗೂ ಸಂಗೀತಾ (Sangeetha Sringeri) ಎದುರು ಸಿರಿ ಟೀಂನವರು ಕೂಗಾಡಿದ್ದಾರೆ. ‘ನೀನು ಒಂಟಿಯಾಗಿಯೇ ಸಾಯೋದು’ ಎಂದು ಕಾರ್ತಿಕ್​ಗೆ ಹೇಳಿದ್ದಾರೆ ವಿನಯ್. ಈ ಪ್ರೋಮೋ ಗಮನ ಸೆಳೆಯುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡುವ ಅವಕಾಶವೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More