‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್ಗೆ 10 ನಿರ್ದೇಶಕರಿಂದ ಮೋಸ
ಮುಖ್ಯಾಂಶಗಳು
- ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಯುವ ರೈತ ಚೇತನ್.
- ‘ದೇವಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಚೇತನ್ ಮಾತು.
- 10 ನಿರ್ದೇಶಕರಿಂದ ಮೋಸ ಆಗಿದೆ ಎಂಬ ಆರೋಪ.
ಯುವ ರೈತ ಚೇತನ್ ಅವರು ‘ದೇವಿ’ ಸಿನಿಮಾದ ಮೂಲಕ ಹೀರೋ ಆಗುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 10 ಮಂದಿ ನಿರ್ದೇಶಕರಿಂದ ತಮಗೆ ಮೋಸ ಆಗಿದೆ ಎಂದು ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
ಯುವ ರೈತ ಚೇತನ್ ಅವರು ‘ದೇವಿ’ (Devi) ಸಿನಿಮಾದ ಮೂಲಕ ಹೀರೋ ಆಗುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 10 ಮಂದಿ ನಿರ್ದೇಶಕರಿಂದ ತಮಗೆ ಮೋಸ ಆಗಿದೆ ಎಂದು ಅವರು ಹೇಳಿದ್ದಾರೆ. ‘ಒಂದೂವರೆ ವರ್ಷದ ಹಿಂದೆ ಒಬ್ಬರು ನಿರ್ದೇಶಕರು ಬಂದಿದ್ದರು. ಸಿನಿಮಾಗೆ ಹಣ ಹಾಕು ಎಂದರು, ನಾನು ನಂಬಿದೆ. ಆ ಮೇಲೆ ಆ ನಿರ್ದೇಶಕರೇ ಕಾಣಿಸಲಿಲ್ಲ. ಚಿತ್ರರಂಗ ನಮಗೆ ಸೆಟ್ ಆಗಲ್ಲ ಅಂತ ಮತ್ತೆ ಊರಿಗೆ ವಾಪಸ್ ಹೋಗಲು ನಿರ್ಧರಿಸಿದೆ. ಆ ವೇಳೆ ಇನ್ನೊಬ್ಬರು ಫೋನ್ ಮಾಡಿದರು. ನಿಮ್ಮನ್ನು ಹೀರೋ ಮಾಡುತ್ತೇನೆ ಅಂತ ಭರವಸೆ ನೀಡಿದರು. ಆ ಚಿತ್ರದ ಶೂಟಿಂಗ್ ಕೆಲವು ದಿನ ನಡೆಯಿತು. ಆ ನಿರ್ದೇಶಕನಿಗೆ ಕೆಲಸವೇ ಬರಲ್ಲ ಅಂತ ಆಗ ಗೊತ್ತಾಯಿತು. ಈ ರೀತಿ 10 ನಿರ್ದೇಶಕರು ಮೋಸ ಮಾಡಿದ ಮೇಲೆ 11ನೇ ಸಿನಿಮಾದ ಕಥೆಯನ್ನು ನಾನೇ ಬರೆದಿದ್ದೇನೆ. 20 ನಿಮಿಷದಲ್ಲಿ ಸಿದ್ಧಪಡಿಸಿದ ಕಥೆ ಇದು’ ಎಂದು ಚೇತನ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

