‘ನನಗೆ ಅದು ಸಂಬಂಧ ಇಲ್ಲ’: ದರ್ಶನ್​ ಬಳ್ಳಾರಿ ಜೈಲಿಗೆ ಬಂದ ಬಗ್ಗೆ ಜಮೀರ್​ ನೇರ ಮಾತು

ನಟ ದರ್ಶನ್​ ಮತ್ತು ಸಚಿವ ಜಮೀರ್ ಅಹ್ಮದ್​ ಖಾನ್​ ನಡುವೆ ಉತ್ತಮ ಒಡನಾಟ ಇದೇ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈಗ ದರ್ಶನ್​ ಅವರು ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಜಮೀರ್​ ಅಹ್ಮದ್​ ಖಾನ್​ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯಿ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

‘ನನಗೆ ಅದು ಸಂಬಂಧ ಇಲ್ಲ’: ದರ್ಶನ್​ ಬಳ್ಳಾರಿ ಜೈಲಿಗೆ ಬಂದ ಬಗ್ಗೆ ಜಮೀರ್​ ನೇರ ಮಾತು
|

Updated on: Sep 01, 2024 | 2:33 PM

ದರ್ಶನ್​ ಅವರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಜೈಲಿಗೆ ಶಿಫ್ಟ್​ ಮಾಡಿದ ಬಗ್ಗೆ ಜಮೀರ್​ ಅಹ್ಮದ್​ ಖಾನ್​ ಪ್ರತಿಕ್ರಿಯೆ ನೀಡಿದ್ದಾರೆ. ಜಮೀರ್​ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ. ಆದ್ದರಿಂದಲೇ ದರ್ಶನ್​ ಅವರನ್ನು ಬಳ್ಳಾರಿಗೆ ಶಿಫ್ಟ್​ ಮಾಡಲಾಯ್ತಾ ಎಂಬ ಪ್ರಶ್ನೆಗೆ ಜಮೀರ್​ ಉತ್ತರಿಸಿದ್ದಾರೆ. ‘ನನಗೆ ಅದು ಸಂಬಂಧ ಇಲ್ಲ. ಪೊಲೀಸ್ ಇಲಾಖೆ ತೀಮಾನದಿಂದ ಬಳ್ಳಾರಿಗೆ ಶಿಫ್ಟ್​ ಮಾಡಿದ್ದಾರೆ. ನಾನು ಜಿಲ್ಲಾ ಉಸ್ತುವಾರಿ ಸಚಿವ ಮಾತ್ರ. ನಾನು ಡಿಜಿ ಅಲ್ಲ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us