AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

’ಜನರ ಅಭಿಪ್ರಾಯ ಬದಲಿಸಿ‘ ಎಂದಿದ್ದ ಬೈಡೆನ್​ಗೆ ಪಾಕ್​ ಉಗ್ರರ ಬಗ್ಗೆ ಹೇಳಿದ್ದ ಅಶ್ರಫ್​ ಘನಿ !

ಅಂದು ಬೈಡನ್​ ಮತ್ತು ಘನಿ ನಡುವೆ ಮಿಲಿಟರಿ ವ್ಯವಸ್ಥೆ, ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆದಿತ್ತು. ಆದರೂ ಅಷ್ಟು ಬೇಗ ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತದೆ. ಸರ್ಕಾರ ಪತನವಾಗುತ್ತದೆ ಎಂಬ ಅಂದಾಜು ಇಬ್ಬರಿಗೂ ಇರಲಿಲ್ಲ ಎಂದು ರಾಯಿಟರ್ಸ್​ ವರದಿ ಮಾಡಿದೆ.

’ಜನರ ಅಭಿಪ್ರಾಯ ಬದಲಿಸಿ‘ ಎಂದಿದ್ದ ಬೈಡೆನ್​ಗೆ ಪಾಕ್​ ಉಗ್ರರ ಬಗ್ಗೆ ಹೇಳಿದ್ದ ಅಶ್ರಫ್​ ಘನಿ !
ಜೋ ಬೈಡೆನ್​ ಮತ್ತು ಅಶ್ರಫ್​ ಘನಿ
TV9 Web
| Updated By: Lakshmi Hegde|

Updated on: Sep 01, 2021 | 4:36 PM

Share

ಅಫ್ಘಾನಿಸ್ತಾನವನ್ನು ತಾಲಿಬಾನಿ (Taliban)ಗಳು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದಕ್ಕೂ ಮೊದಲು ಅಂದರೆ ಜುಲೈ 23ರಂದು ಅಫ್ಘಾನ್​ನ ಆಗಿನ ಅಧ್ಯಕ್ಷ ಅಶ್ರಫ್​ ಘನಿ (Ashraf Ghani)ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden)​ಗೆ ಫೋನ್​ ಕರೆ ಮಾಡಿ, ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ದ ಉಗ್ರರು (Pakistani Terrorists) ಆಗಮಿಸಿದ್ದಾರೆ ಎಂಬ ವಿಷಯವನ್ನು ಹೇಳಿದ್ದರು ಎಂಬುದು ಇದೀಗ ಗೊತ್ತಾಗಿದೆ. ಅಂದು ದೂರವಾಣಿ ಕರೆ ಮಾಡಿದ್ದ ಅಶ್ರಫ್​ ಘನಿ, ಈಗಾಗಲೇ ತಾಲಿಬಾನಿಗಳು ಒಂದೊಂದೇ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದೀಗ ಅಫ್ಘಾನ್ (Afghanistan)​​ನನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು 10-15ಸಾವಿರ ಪಾಕಿಸ್ತಾನಿ ಉಗ್ರರು ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ಎಲ್ಲ ರೀತಿಯ ಸಂಚಾರ, ಹಣಕಾಸು ವ್ಯವಸ್ಥೆಯೂ ಆಗುತ್ತಿದೆ. ನೀವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ವಿಚಾರವನ್ನು ತಿಳಿಸಿದ್ದರು ಎಂದು ರಾಯಿಟರ್ಸ್ ಸುದ್ದಿ ಮಾಧ್ಯಮ ಇದೀಗ ವರದಿ ಮಾಡಿದೆ. ಹಾಗೇ, ಅಂದು ಬೈಡನ್​ ಮತ್ತು ಘನಿ ಮಧ್ಯೆ 14 ನಿಮಿಷಗಳ ಮಾತುಕತೆ ನಡೆದಿತ್ತು ಎಂದು ವರದಿಯಲ್ಲಿ ತಿಳಿಸಿದೆ.

ಅಂದು ಬೈಡನ್​ ಮತ್ತು ಘನಿ ನಡುವೆ ಮಿಲಿಟರಿ ವ್ಯವಸ್ಥೆ, ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆದಿತ್ತು. ಆದರೂ ಅಷ್ಟು ಬೇಗ ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತದೆ. ಸರ್ಕಾರ ಪತನವಾಗುತ್ತದೆ ಎಂಬ ಅಂದಾಜು ಇಬ್ಬರಿಗೂ ಇರಲಿಲ್ಲ ಎಂದು ರಾಯಿಟರ್ಸ್ ಹೇಳಿದೆ. ಅವತ್ತು ಫೋನ್​ನಲ್ಲಿ ಮಾತುಕತೆ ನಡೆಯುವ ವೇಳೆ, ಅಫ್ಘಾನಿಸ್ತಾನದಲ್ಲಿ ಇದೀಗ ಉಂಟಾಗಿರುವ ಪರಿಸ್ಥಿತಿಯ ನಿಯಂತ್ರಣಕ್ಕೆ ನೀವು ಸಾರ್ವಜನಿಕವಾಗಿ ಮುಂದಾದರೆ, ನಾವದಕ್ಕೆ ಯಾವುದೇ ಬೆಂಬಲ ನೀಡುತ್ತೇವೆ ಎಂದು ಬೈಡನ್​​, ಘನಿಗೆ ಹೇಳಿದ್ದರು ಎನ್ನಲಾಗಿದೆ.

ಜನರ ಗ್ರಹಿಕೆ ಬದಲಿಸುವ ಪ್ರಯತ್ನ ಮಾಡಿ ಜುಲೈ 23ರಂದು ಬೈಡನ್​ ಒಂದು ಸಲಹೆಯನ್ನು ಅಶ್ರಫ್​ ಘನಿಗೆ ನೀಡಿದ್ದರು. ಅದೇನೆಂದರೆ, ಈಗ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಅತಿಕ್ರಮಣ ಹೆಚ್ಚಿಸಿದ್ದಾರೆ. ಅಫ್ಘಾನ್​ ತಾಲಿಬಾನಿಗಳ ವಶವಾಗುತ್ತದೆ ಎಂದೇ ಜಗತ್ತಿನಾದ್ಯಂತ ಜನರು, ಆಡಳಿತಗಳು ಭಾವಿಸಿಕೊಂಡಿವೆ. ಆದರೆ ಈಗ, ಅಫ್ಘಾನಿಸ್ತಾನ ತಾಲಿಬಾನಿಗಳನ್ನು ಎದುರಿಸಲು ಸಿದ್ಧವಾಗಿದೆ, ಸುಸಜ್ಜಿತ ವ್ಯವಸ್ಥೆ ಮಾಡಿಕೊಂಡಿದೆ ಎಂದು ನೀವು ಸಾರ್ವಜನಿಕವಾಗಿ ಘೋಷಿಸಿ. ಈ ಮೂಲಕ ಜನರ ಅಭಿಪ್ರಾಯವನ್ನು ಬದಲಿಸಿ ಎಂದು ಬೈಡನ್​ ಹೇಳಿದ್ದರು. ಆಗ ಘನಿ, ಅಫ್ಘಾನ್​ನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದರು. ಇಲ್ಲಿರುವುದು ತಾಲಿಬಾನ್​ ಮಾತ್ರವಲ್ಲ. ಪಾಕಿಸ್ತಾನದ ಉಗ್ರರೂ ಇದ್ದಾರೆ. ಈ ಅಂತಾರಾಷ್ಟ್ರೀಯ ಭಯೋತ್ಪಾದಕರಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಬೈಡೆನ್​ ಗೆ ಮನವರಿಕೆ ಮಾಡಿಕೊಟ್ಟಿದ್ದರು.

ಪಾಕಿಸ್ತಾನ ತಾಲಿಬಾನಿಗಳಿಗೆ ಬೆಂಬಲ ನೀಡುತ್ತಿದೆ ಎಂಬುದನ್ನು ಈ ಹಿಂದಿನ ಸರ್ಕಾರದ ಅಧಿಕಾರಿಗಳು, ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್​ ಸೇರಿ ಹಲವರು ಪದೇಪದೆ ಒತ್ತಿ ಹೇಳಿದ್ದಾರೆ. ಆದರೆ ಪಾಕ್​ನ ಮಂತ್ರಿಗಳು, ರಾಜಕೀಯ ಮುಖಂಡರು ಇದನ್ನು ಅಲ್ಲಗಳೆಯುತ್ತಲೇ ಇದ್ದಾರೆ. ಆದರೂ ತಾಲಿಬಾನಿಗಳ ಆಡಳಿತ ಬಂದ ನಂತರ ಪಾಕ್​ ಸಂಭ್ರಮಿಸಿದ್ದನ್ನು ಇಡೀ ಜಗತ್ತು ನೋಡಿದ್ದಂತೂ ಸುಳ್ಳಲ್ಲ.

ಇದನ್ನೂ ಓದಿ: T20 World cup: ವಿಶ್ವದ ಮುಂದೆ ಭಾರತದ ಮಾನ ತೆಗೆದಿದ್ದ ಬಾಂಗ್ಲಾ ತಂಡದ ಓಪನರ್ ಟಿ-20 ವಿಶ್ವಕಪ್​ಗೆ ಗೈರು! ಕಾರಣ ಸಿಂಪಲ್

ಪ್ರಾಯಶ್ಚಿತವಾಗಿ ಗುರುದ್ವಾರವನ್ನು ಸ್ವಚ್ಛಗೊಳಿಸುವೆ; ಪಂಜ್ ಪ್ಯಾರೆ ಪದ ಬಳಕೆಗೆ ಕ್ಷಮೆಯಾಚಿಸಿದ ಹರೀಶ್ ರಾವತ್

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?