AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

’ಜನರ ಅಭಿಪ್ರಾಯ ಬದಲಿಸಿ‘ ಎಂದಿದ್ದ ಬೈಡೆನ್​ಗೆ ಪಾಕ್​ ಉಗ್ರರ ಬಗ್ಗೆ ಹೇಳಿದ್ದ ಅಶ್ರಫ್​ ಘನಿ !

ಅಂದು ಬೈಡನ್​ ಮತ್ತು ಘನಿ ನಡುವೆ ಮಿಲಿಟರಿ ವ್ಯವಸ್ಥೆ, ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆದಿತ್ತು. ಆದರೂ ಅಷ್ಟು ಬೇಗ ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತದೆ. ಸರ್ಕಾರ ಪತನವಾಗುತ್ತದೆ ಎಂಬ ಅಂದಾಜು ಇಬ್ಬರಿಗೂ ಇರಲಿಲ್ಲ ಎಂದು ರಾಯಿಟರ್ಸ್​ ವರದಿ ಮಾಡಿದೆ.

’ಜನರ ಅಭಿಪ್ರಾಯ ಬದಲಿಸಿ‘ ಎಂದಿದ್ದ ಬೈಡೆನ್​ಗೆ ಪಾಕ್​ ಉಗ್ರರ ಬಗ್ಗೆ ಹೇಳಿದ್ದ ಅಶ್ರಫ್​ ಘನಿ !
ಜೋ ಬೈಡೆನ್​ ಮತ್ತು ಅಶ್ರಫ್​ ಘನಿ
TV9 Web
| Edited By: |

Updated on: Sep 01, 2021 | 4:36 PM

Share

ಅಫ್ಘಾನಿಸ್ತಾನವನ್ನು ತಾಲಿಬಾನಿ (Taliban)ಗಳು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದಕ್ಕೂ ಮೊದಲು ಅಂದರೆ ಜುಲೈ 23ರಂದು ಅಫ್ಘಾನ್​ನ ಆಗಿನ ಅಧ್ಯಕ್ಷ ಅಶ್ರಫ್​ ಘನಿ (Ashraf Ghani)ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden)​ಗೆ ಫೋನ್​ ಕರೆ ಮಾಡಿ, ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ದ ಉಗ್ರರು (Pakistani Terrorists) ಆಗಮಿಸಿದ್ದಾರೆ ಎಂಬ ವಿಷಯವನ್ನು ಹೇಳಿದ್ದರು ಎಂಬುದು ಇದೀಗ ಗೊತ್ತಾಗಿದೆ. ಅಂದು ದೂರವಾಣಿ ಕರೆ ಮಾಡಿದ್ದ ಅಶ್ರಫ್​ ಘನಿ, ಈಗಾಗಲೇ ತಾಲಿಬಾನಿಗಳು ಒಂದೊಂದೇ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದೀಗ ಅಫ್ಘಾನ್ (Afghanistan)​​ನನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು 10-15ಸಾವಿರ ಪಾಕಿಸ್ತಾನಿ ಉಗ್ರರು ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ಎಲ್ಲ ರೀತಿಯ ಸಂಚಾರ, ಹಣಕಾಸು ವ್ಯವಸ್ಥೆಯೂ ಆಗುತ್ತಿದೆ. ನೀವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ವಿಚಾರವನ್ನು ತಿಳಿಸಿದ್ದರು ಎಂದು ರಾಯಿಟರ್ಸ್ ಸುದ್ದಿ ಮಾಧ್ಯಮ ಇದೀಗ ವರದಿ ಮಾಡಿದೆ. ಹಾಗೇ, ಅಂದು ಬೈಡನ್​ ಮತ್ತು ಘನಿ ಮಧ್ಯೆ 14 ನಿಮಿಷಗಳ ಮಾತುಕತೆ ನಡೆದಿತ್ತು ಎಂದು ವರದಿಯಲ್ಲಿ ತಿಳಿಸಿದೆ.

ಅಂದು ಬೈಡನ್​ ಮತ್ತು ಘನಿ ನಡುವೆ ಮಿಲಿಟರಿ ವ್ಯವಸ್ಥೆ, ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆದಿತ್ತು. ಆದರೂ ಅಷ್ಟು ಬೇಗ ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತದೆ. ಸರ್ಕಾರ ಪತನವಾಗುತ್ತದೆ ಎಂಬ ಅಂದಾಜು ಇಬ್ಬರಿಗೂ ಇರಲಿಲ್ಲ ಎಂದು ರಾಯಿಟರ್ಸ್ ಹೇಳಿದೆ. ಅವತ್ತು ಫೋನ್​ನಲ್ಲಿ ಮಾತುಕತೆ ನಡೆಯುವ ವೇಳೆ, ಅಫ್ಘಾನಿಸ್ತಾನದಲ್ಲಿ ಇದೀಗ ಉಂಟಾಗಿರುವ ಪರಿಸ್ಥಿತಿಯ ನಿಯಂತ್ರಣಕ್ಕೆ ನೀವು ಸಾರ್ವಜನಿಕವಾಗಿ ಮುಂದಾದರೆ, ನಾವದಕ್ಕೆ ಯಾವುದೇ ಬೆಂಬಲ ನೀಡುತ್ತೇವೆ ಎಂದು ಬೈಡನ್​​, ಘನಿಗೆ ಹೇಳಿದ್ದರು ಎನ್ನಲಾಗಿದೆ.

ಜನರ ಗ್ರಹಿಕೆ ಬದಲಿಸುವ ಪ್ರಯತ್ನ ಮಾಡಿ ಜುಲೈ 23ರಂದು ಬೈಡನ್​ ಒಂದು ಸಲಹೆಯನ್ನು ಅಶ್ರಫ್​ ಘನಿಗೆ ನೀಡಿದ್ದರು. ಅದೇನೆಂದರೆ, ಈಗ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಅತಿಕ್ರಮಣ ಹೆಚ್ಚಿಸಿದ್ದಾರೆ. ಅಫ್ಘಾನ್​ ತಾಲಿಬಾನಿಗಳ ವಶವಾಗುತ್ತದೆ ಎಂದೇ ಜಗತ್ತಿನಾದ್ಯಂತ ಜನರು, ಆಡಳಿತಗಳು ಭಾವಿಸಿಕೊಂಡಿವೆ. ಆದರೆ ಈಗ, ಅಫ್ಘಾನಿಸ್ತಾನ ತಾಲಿಬಾನಿಗಳನ್ನು ಎದುರಿಸಲು ಸಿದ್ಧವಾಗಿದೆ, ಸುಸಜ್ಜಿತ ವ್ಯವಸ್ಥೆ ಮಾಡಿಕೊಂಡಿದೆ ಎಂದು ನೀವು ಸಾರ್ವಜನಿಕವಾಗಿ ಘೋಷಿಸಿ. ಈ ಮೂಲಕ ಜನರ ಅಭಿಪ್ರಾಯವನ್ನು ಬದಲಿಸಿ ಎಂದು ಬೈಡನ್​ ಹೇಳಿದ್ದರು. ಆಗ ಘನಿ, ಅಫ್ಘಾನ್​ನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದರು. ಇಲ್ಲಿರುವುದು ತಾಲಿಬಾನ್​ ಮಾತ್ರವಲ್ಲ. ಪಾಕಿಸ್ತಾನದ ಉಗ್ರರೂ ಇದ್ದಾರೆ. ಈ ಅಂತಾರಾಷ್ಟ್ರೀಯ ಭಯೋತ್ಪಾದಕರಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಬೈಡೆನ್​ ಗೆ ಮನವರಿಕೆ ಮಾಡಿಕೊಟ್ಟಿದ್ದರು.

ಪಾಕಿಸ್ತಾನ ತಾಲಿಬಾನಿಗಳಿಗೆ ಬೆಂಬಲ ನೀಡುತ್ತಿದೆ ಎಂಬುದನ್ನು ಈ ಹಿಂದಿನ ಸರ್ಕಾರದ ಅಧಿಕಾರಿಗಳು, ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್​ ಸೇರಿ ಹಲವರು ಪದೇಪದೆ ಒತ್ತಿ ಹೇಳಿದ್ದಾರೆ. ಆದರೆ ಪಾಕ್​ನ ಮಂತ್ರಿಗಳು, ರಾಜಕೀಯ ಮುಖಂಡರು ಇದನ್ನು ಅಲ್ಲಗಳೆಯುತ್ತಲೇ ಇದ್ದಾರೆ. ಆದರೂ ತಾಲಿಬಾನಿಗಳ ಆಡಳಿತ ಬಂದ ನಂತರ ಪಾಕ್​ ಸಂಭ್ರಮಿಸಿದ್ದನ್ನು ಇಡೀ ಜಗತ್ತು ನೋಡಿದ್ದಂತೂ ಸುಳ್ಳಲ್ಲ.

ಇದನ್ನೂ ಓದಿ: T20 World cup: ವಿಶ್ವದ ಮುಂದೆ ಭಾರತದ ಮಾನ ತೆಗೆದಿದ್ದ ಬಾಂಗ್ಲಾ ತಂಡದ ಓಪನರ್ ಟಿ-20 ವಿಶ್ವಕಪ್​ಗೆ ಗೈರು! ಕಾರಣ ಸಿಂಪಲ್

ಪ್ರಾಯಶ್ಚಿತವಾಗಿ ಗುರುದ್ವಾರವನ್ನು ಸ್ವಚ್ಛಗೊಳಿಸುವೆ; ಪಂಜ್ ಪ್ಯಾರೆ ಪದ ಬಳಕೆಗೆ ಕ್ಷಮೆಯಾಚಿಸಿದ ಹರೀಶ್ ರಾವತ್

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು