AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗ, ಹುಡುಗಿ ಒಟ್ಟಿಗೆ ಓದುವಂತಿಲ್ಲ; ಶಿಕ್ಷಕ, ಶಿಕ್ಷಕಿ ಒಂದೆಡೆ ಕೆಲಸ ಮಾಡುವಂತಿಲ್ಲ: ಶಿಕ್ಷಣ ಪದ್ಧತಿ ಬದಲಿಸಿ ಫತ್ವಾ ಹೊರಡಿಸಿದ ತಾಲಿಬಾನ್

ಫತ್ವಾ ಹೊರಡಿಸುವ ಮೂಲಕ ತಾಲಿಬಾನಿಗಳು ತಮ್ಮ ಅಸಲಿ ಸ್ವರೂಪ ಬದಲಾಗಲಾರದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲದೇ, ಹೆಣ್ಣು ಮಕ್ಕಳಿಗೆ ಪುರುಷ ಶಿಕ್ಷಕರು, ಗಂಡು ಮಕ್ಕಳಿಗೆ ಮಹಿಳಾ ಶಿಕ್ಷಕರು ಭೋದನೆ ಮಾಡುವಂತಿಲ್ಲ ಎಂಬ ಫತ್ವಾ ಕೂಡಾ ಹೊರಡಿಸಿದ್ದಾರೆ.

ಹುಡುಗ, ಹುಡುಗಿ ಒಟ್ಟಿಗೆ ಓದುವಂತಿಲ್ಲ; ಶಿಕ್ಷಕ, ಶಿಕ್ಷಕಿ ಒಂದೆಡೆ ಕೆಲಸ ಮಾಡುವಂತಿಲ್ಲ: ಶಿಕ್ಷಣ ಪದ್ಧತಿ ಬದಲಿಸಿ ಫತ್ವಾ ಹೊರಡಿಸಿದ ತಾಲಿಬಾನ್
ಶೇಕ್​ ಅಬ್ದುಲ್​ ಬಕೀ ಹಕ್ಕಾನಿ
TV9 Web
| Edited By: |

Updated on: Aug 30, 2021 | 12:19 PM

Share

ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಹತ್ತಿಕ್ಕಿ ದೇಶದ ಬಹುಭಾಗವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು ಇದೀಗ ತಮಗೆ ಬೇಕಾದಂತಹ ಕಾನೂನು ರೂಪಿಸುವಲ್ಲಿ ನಿರತರಾಗಿದ್ದಾರೆ. ಬಹುಮುಖ್ಯವಾಗಿ ಸ್ತ್ರೀ ಸ್ವಾತಂತ್ರ್ಯದ ವಿಚಾರದಲ್ಲಿ ಕಟುವಾಗಿ ವರ್ತಿಸುವ ತಾಲಿಬಾನ್​ ಸಂಘಟನೆ ಇದೀಗ ಸಹ ಶಿಕ್ಷಣ ಪದ್ಧತಿಗೆ ಅಡ್ಡಗಾಲು ಹಾಕಿದ್ದು, ಇನ್ನುಮುಂದೆ ಅಫ್ಘಾನಿಸ್ತಾನದಲ್ಲಿ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಒಟ್ಟಿಗೆ ಓದುವಂತಿಲ್ಲ ಎಂದು ಫತ್ವಾ ಹೊರಡಿಸಿದೆ. ಹೆಣ್ಣು ಮಕ್ಕಳ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಹೇಳಿದ ಕೆಲವೇ ಕೆಲವು ದಿನಗಳಲ್ಲಿ ಇಂಥದ್ದೊಂದು ಫತ್ವಾ ಹೊರಡಿಸುವ ಮೂಲಕ ತಾಲಿಬಾನಿಗಳು ತಮ್ಮ ಅಸಲಿ ಸ್ವರೂಪ ಬದಲಾಗಲಾರದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲದೇ, ಹೆಣ್ಣು ಮಕ್ಕಳಿಗೆ ಪುರುಷ ಶಿಕ್ಷಕರು, ಗಂಡು ಮಕ್ಕಳಿಗೆ ಮಹಿಳಾ ಶಿಕ್ಷಕರು ಭೋದನೆ ಮಾಡುವಂತಿಲ್ಲ ಎಂಬ ಫತ್ವಾ ಕೂಡಾ ಹೊರಡಿಸಿದ್ದಾರೆ.

ತಾಲಿಬಾನ್​ ನೇಮಿಸಿರುವ ನೂತನ ಉನ್ನತ ಶಿಕ್ಷಣ ಸಚಿವ ಶೇಕ್​ ಅಬ್ದುಲ್​ ಬಕೀ ಹಕ್ಕಾನಿ ಈ ಆದೇಶ ಹೊರಡಿಸಿದ್ದು, ಶರಿಯಾ ಕಾನೂನಿನ ಪ್ರಕಾರವೇ ಶಿಕ್ಷಣ ಪದ್ಧತಿ ಸಾಗಬೇಕು. ಸಹ ಶಿಕ್ಷಣ ಪದ್ಧತಿಗೆ ಇನ್ನುಮುಂದೆ ಅವಕಾಶವಿಲ್ಲ. ಪುರುಷ ಶಿಕ್ಷಕರು ಯಾವ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ಪಾಠ ಮಾಡುವಂತಿಲ್ಲ. ಅಂತೆಯೇ, ಶಿಕ್ಷಕಿಯರು ಗಂಡು ಮಕ್ಕಳಿಗೆ ಪಾಠ ಮಾಡುವುದಕ್ಕೂ ಅನುಮತಿ ಇಲ್ಲ. ಗಂಡು ಮಕ್ಕಳ ಶಾಲೆಯಲ್ಲಿ ಕೇವಲ ಶಿಕ್ಷಕರು ಹಾಗೂ ಹೆಣ್ಣು ಮಕ್ಕಳ ಶಾಲೆಯಲ್ಲಿ ಕೇವಲ ಶಿಕ್ಷಕಿಯರು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.

ಆದರೆ, ಈ ನಿಯಮದ ಕುರಿತು ತರ್ಕಬದ್ಧ ವಿಶ್ಲೇಷಣೆ ನೀಡಿರುವ ಅಫ್ಘಾನಿಸ್ತಾನದ ಪತ್ರಕರ್ತ ಬಶೀರ್​ ಅಹ್ಮದ್​ ಗ್ವಾಕ್​, ಈ ತೆರನಾದ ನಿಯಮವು ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿಸಲಿದೆ. ಇದು ಶಿಕ್ಷಣ ಪದ್ಧತಿಗೆ ದೊಡ್ಡ ಹಿನ್ನೆಡೆಯಾಗಲಿದೆ. ವಿಶ್ವವಿದ್ಯಾಲಯಗಳಲ್ಲಿ ಗಂಡು ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಿಕ್ಷಣ ಒದಗಿಸುವ ಸೌಕರ್ಯ ಇಲ್ಲ. ಮೇಲಾಗಿ ಅದಕ್ಕೆ ತಕ್ಕುದಾದ ಮಾನವ ಸಂಪನ್ಮೂಲವೂ ಲಭ್ಯವಿಲ್ಲ ಎಂದು ಹೇಳಿದ್ದಾರೆ.

ಆದರೆ, ಇಂತಹ ನಿಯಮಗಳಿಂದ ಆಗಬಹುದಾದ ತೊಂದರೆಗಳ ಬಗ್ಗೆ ಚಿಂತಿಸದ ತಾಲಿಬಾನ್​, ಶರಿಯಾ ಕಾನೂನಿನಂತೆಯೇ ಶಿಕ್ಷಣ ಪದ್ಧತಿ ಸಾಗಬೇಕು ಎಂದು ಹೇಳಿಕೆ ನೀಡಿದೆ. ಕಳೆದ ವಾರ ವಿಶ್ವವಿದ್ಯಾಲಯಗಳ ವಿಚಾರದಲ್ಲಿ ಮೂಗು ತೂರಿಸಿದ್ದ ತಾಲಿಬಾನ್​ ಸಹ ಶಿಕ್ಷಣ ಪದ್ಧತಿಯೇ ಸಮಾಜದ ಎಲ್ಲಾ ದುಷ್ಕೃತ್ಯಗಳಿಗೆ ಮೂಲ ಎಂದು ಹೇಳಿತ್ತು. ಇದೀಗ ತಾಲಿಬಾನಿಗಳ ಆದೇಶವನ್ನು ಪರಿಪಾಲಿಸಲೇಬೇಕಾದ ಅನಿವಾರ್ಯತೆಯಲ್ಲಿರುವ ಅಧಿಕಾರಿಗಳು ಕೂಡಾ ಇದಕ್ಕೆ ಪರ್ಯಾಯ ಮಾರ್ಗ ನಮ್ಮ ಮುಂದಿಲ್ಲ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಮೇಲೆ ತಾಲಿಬಾನ್​ ಸಂಘಟನೆ ಹೊರಡಿಸಿರುವ ಮೊದಲ ಫತ್ವಾ ಇದಾಗಿದ್ದು, ನೂತನ ಉನ್ನತ ಶಿಕ್ಷಣ ಸಚಿವ ಸ್ಥಾನಕ್ಕೆ ನೇಮಕಗೊಂಡ ಒಂದೇ ದಿನದಲ್ಲಿ ಶೇಕ್​ ಅಬ್ದುಲ್​ ಬಕೀ ಹಕ್ಕಾನಿ ಇದನ್ನು ಪ್ರಕಟಿಸಿದ್ದಾರೆ. ಆದರೆ, ಈ ಫತ್ವಾಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಖಾಸಗಿ ಸಂಸ್ಥೆಗಳು ಈ ನಿಯಮ ಪರಿಪಾಲನೆಗೆ ಬೇಕಾದ ಮಾನವ ಸಂಪನ್ಮೂಲ ನಮ್ಮಲ್ಲಿ ಇಲ್ಲವೇ ಇಲ್ಲ ಎಂದು ಹೇಳಿಕೊಂಡಿವೆ.

ಇದನ್ನೂ ಓದಿ: Video: ಸುದ್ದಿ ಓದುತ್ತಿದ್ದ ನಿರೂಪಕನ ಹಿಂದೆ ಗನ್​ ಹಿಡಿದು ನಿಂತ ತಾಲಿಬಾನಿಗಳು; ಆ ಒಂದು ಮಾತನ್ನು ಬಲವಂತಾಗಿ ಹೇಳಿಸಿದರು ! 

ನಾಲ್ಕು ಕಾರ್ ಹಾಗೂ ಹೆಲಿಕಾಪ್ಟರ್​ನಲ್ಲಿ ಕೊಂಡೊಯ್ದ ಅಫ್ಘಾನಿಸ್ತಾನದ ಹಣವನ್ನು ಹಿಂತಿರುಗಿಸಿ: ಅಶ್ರಫ್ ಘನಿಗೆ ತಾಲಿಬಾನ್ ಎಚ್ಚರಿಕೆ

(Taliban Bans co education in Afghanistan Men not allowed to teach girls and Vice Versa Says Education Minister)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ