AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video:‘ಪಾಕಿಸ್ತಾನ ಸರ್ವನಾಶವಾಗಲಿ’- ಕಾಬೂಲ್​​ನಲ್ಲಿ ಅಫ್ಘಾನ್ ಮಹಿಳೆಯರ ಪ್ರತಿಭಟನೆ; ತಾಲಿಬಾನಿಗಳಿಂದ ಗುಂಡಿನ ದಾಳಿ, ಕುಚೋದ್ಯ

ಪಾಕ್ ವಿರೋಧಿ ಪ್ರತಿಭಟನಾಕಾರರು ಕಾಬೂಲ್​ನ ಸೆರೆನಾ ಹೋಟೆಲ್​ನತ್ತ, ಘೋಷಣೆ ಕೂಗುತ್ತ ಹೊರಟಿದ್ದಾರೆ. ಈ ಮಧ್ಯೆ ಅಧ್ಯಕ್ಷರ ಭವನದ ಎದುರು ಗುಂಪುಗೂಡಿದ್ದರು.

Video:‘ಪಾಕಿಸ್ತಾನ ಸರ್ವನಾಶವಾಗಲಿ’- ಕಾಬೂಲ್​​ನಲ್ಲಿ ಅಫ್ಘಾನ್ ಮಹಿಳೆಯರ ಪ್ರತಿಭಟನೆ; ತಾಲಿಬಾನಿಗಳಿಂದ ಗುಂಡಿನ ದಾಳಿ, ಕುಚೋದ್ಯ
ಮಹಿಳೆಯರಿಂದ ಪ್ರತಿಭಟನೆ
TV9 Web
| Edited By: |

Updated on:Sep 07, 2021 | 4:22 PM

Share

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಪಾಕಿಸ್ತಾನಿ ವಿರೋಧಿ ಪ್ರತಿಭಟನೆ (Anti-Pakistan Protest) ನಡೆಸುತ್ತಿದ್ದರೆ, ತಾಲಿಬಾನಿ (Taliban Terrorists)ಗಳು ಆ ಮಹಿಳೆಯರ ಮೇಲೆ ಗುಂಡಿನ ದಾಳಿ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ (Kabul)​ನಲ್ಲೀಗ ಪಾಕ್​ ವಿರೋಧಿ ಪ್ರತಿಭಟನೆಗಳು ಶುರುವಾಗಿವೆ. ಅಪಾರ ಸಂಖ್ಯೆಯ ಮಹಿಳೆಯರು ಪಾಕಿಸ್ತಾನ, ಅದರ ಗುಪ್ತಚರ ಸಂಸ್ಥೆ ಐಎಸ್​ಐ (ISI) ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದಾರೆ. ಈ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸಿಟ್ಟಿಗೆದ್ದ ತಾಲಿಬಾನಿಗಳು ಮಹಿಳೆಯರ ಮೇಲೆ ಗುಂಡು ಹಾರಿಸುತ್ತಿದ್ದಾರೆ. 

ಸ್ಥಳೀಯ ಮಾಧ್ಯಮ ಅಸ್ವಾಕಾ ವಿಡಿಯೋವನ್ನು ಕೂಡ ಶೇರ್​ ಮಾಡಿದೆ. ಈ ಪಾಕ್ ವಿರೋಧಿ ಪ್ರತಿಭಟನಾಕಾರರು ಕಾಬೂಲ್​ನ ಸೆರೆನಾ ಹೋಟೆಲ್​ನತ್ತ, ಘೋಷಣೆ ಕೂಗುತ್ತ ಹೊರಟಿದ್ದಾರೆ. ಈ ಮಧ್ಯೆ ಅಧ್ಯಕ್ಷರ ಭವನದ ಎದುರು ಗುಂಪುಗೂಡಿದ್ದರು. ಅದೇ ಹೊತ್ತಲ್ಲಿ ತಾಲಿಬಾನಿಗಳು ಅಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ ಅವರು, ಬರುಬರುತ್ತ ಪ್ರತಿಭಟನಾಕಾರರಿಗೆ ಗುರಿಯಿಟ್ಟೇ ಹೊಡೆಯಲು ಶುರು ಮಾಡಿದರು ಎಂದು ವರದಿ ಮಾಡಿದೆ. ಇನ್ನು ಸೆರೆನಾ ಹೋಟೆಲ್​ನಲ್ಲಿ ಪಾಕಿಸ್ತಾನ ಐಎಸ್​ಐ ನಿರ್ದೇಶಕ ಕಳೆದ ಒಂದು ವಾರದಿಂದಲೂ ವಾಸವಾಗಿದ್ದಾರೆ. ಇದೇ ಕಾರಣಕ್ಕೆ ಪ್ರತಿಭಟನಾಕಾರರು ಆ ಕಡೆಗೆ ಹೊರಟಿದ್ದಾರೆ.

ಪ್ರತಿಭಟನೆಯಲ್ಲಿ ಪುರುಷರೂ ಇದ್ದಾರೆ.. ಈ ಪಾಕ್​ ವಿರೋಧಿ ಪ್ರತಿಭಟನೆಯಲ್ಲಿ ನೂರಾರು ಜನ ತೊಡಗಿದ್ದಾರೆ. ಪುರುಷರೂ ಭಾಗವಹಿಸಿದ್ದಾರೆ. ಆದರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ. ಇವರು ಮೆರವಣಿಗೆಯ ದಾರಿಯುದ್ದಕ್ಕೂ ಪಾಕಿಸ್ತಾನಿ ವಿರೋಧಿ ಘೋಷಣೆ ಕೂಗುತ್ತಿದ್ದು ಅಂಥ ಪ್ಲೇಕಾರ್ಡ್​ಗಳನ್ನೇ ಹಿಡಿದುಕೊಂಡಿದ್ದಾರೆ. ಮೊದಲು ಕಾಬೂಲ್​ನ ರಸ್ತೆಯಲ್ಲಿ ಶುರುವಾದ ಪ್ರತಿಭಟನೆ ಬರುಬರುತ್ತ ಬಲ್ಖ್​ ಪ್ರಾಂತ್ಯಕ್ಕೂ ಹಬ್ಬಿತು.  ಪ್ರತಿಭಟನಾಕಾರರು ಅದೆಷ್ಟು ಕ್ರೋಧಗೊಂಡಿದ್ದಾರೆಂದರೆ..ತುಂಬ ಆವೇಶ ಭರಿತವಾಗಿ ‘ಪಾಕಿಸ್ತಾನ ನಾಶವಾಗಲಿ’ ‘ಐಎಸ್​ಐ ನಾಶವಾಗಲಿ’ ಎಂದು ಘೋಷಣೆ ಕೂಗುತ್ತಿದ್ದಾರೆ. ಹಾಗೇ, ತಮಗೆ ಸ್ವಾತಂತ್ರ್ಯ ಬೇಕು ಎಂದೂ ಆಗ್ರಹಿಸುತ್ತಿದ್ದಾರೆ.

ಪಂಜಶಿರ್​ ಆಕ್ರಮಣ ಮಾಡಲು ಯಾರಿಗೂ ಹಕ್ಕಿಲ್ಲ ಶನಿವಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಮುಖ್ಯಸ್ಥ ಫೈಜ್​ ಹಮೀದ್​ ಕಾಬೂಲ್​ಗೆ ಭೇಟಿ ಕೊಟ್ಟಿದ್ದರು. ಇನ್ನು ತಾಲಿಬಾನಿಗಳಿಗೆ ಯಾವುದೇ ಬೆಂಬಲ ಕೊಡಲು ಸಿದ್ಧ ಎಂಬುದನ್ನು ಪಾಕಿಸ್ತಾನ ಹೇಳಿಕೊಳ್ಳುತ್ತಲೇ ಬಂದಿದೆ. ಈ ಮಧ್ಯೆ ಅಫ್ಘಾನ್​ನಲ್ಲಿ ನೂತನ ಸರ್ಕಾರ ರಚನೆಯಾಗುವ ಹೊತ್ತಲ್ಲಿ ಪಾಕಿಸ್ತಾನ ಬಹುಮುಖ್ಯ ಪಾತ್ರ ವಹಿಸುತ್ತಿದೆ ಎಂದೂ ಹೇಳಲಾಗಿದೆ.  ಅದಕ್ಕೂ ಮಿಗಿಲಾಗಿ, ಕಳೆದ 20ವರ್ಷಗಳಿಂದಲೂ ತಾಲಿಬಾನ್​ಗೆ ಅಗತ್ಯವಿರುವ ನೆರವು, ಆಶ್ರಯಗಳನ್ನು ನೀಡಿದ್ದಾಗಿ ಪಾಕ್​ ಒಪ್ಪಿಕೊಂಡಿದೆ. ಹಾಗೇ ತಾಲಿಬಾನ್ ಮುಖಂಡರೂ ಕೂಡ ಪಾಕಿಸ್ತಾನದ ಬಗ್ಗೆ ಒಲವು ಹೊಂದಿದ್ದಾರೆ. ನಮ್ಮಲ್ಲಿ ಅದೆಷ್ಟೋ ಜನರ ಪತ್ನಿ, ಮಕ್ಕಳು ಪಾಕ್​ನಲ್ಲಿಯೇ ಇದ್ದಾರೆ ಎಂಬುದನ್ನು ವಕ್ತಾರ ಸುಹೇನ್​ ಶಹೀಲ್​ ಹಿಂದೆಯೇ ಹೇಳಿದ್ದಾರೆ.

ಆದರೆ ತಾಲಿಬಾನಿಗಳ ಆಡಳಿತ ಒಪ್ಪದ ಅಫ್ಘಾನ್​ ನಾಗರಿಕರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಪ್ರತಿಭಟನೆ ಶುರುಮಾಡಿದ್ದಾರೆ. ತಾಲಿಬಾನಿಗಳಿಗೆ ಬೆಂಬಲ ನೀಡುತ್ತಿರುವ ಪಾಕ್ ಸರ್ವನಾಶವಾಗಲಿ ಎಂದು ಹೇಳುತ್ತಿದ್ದಾರೆ.  ಹಾಗೇ, ಪ್ರತಿಭಟನಾ ನಿರತ ಮಹಿಳೆಯೊಬ್ಬರು ಮಾಧ್ಯಮಗಳೊಟ್ಟಿಗೆ ಮಾತನಾಡಿ, ಪಂಜಶಿರ್​ನ್ನು ಅತಿಕ್ರಮಣ ಮಾಡಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಪಾಕಿಸ್ತಾನವಾಗಲೀ, ತಾಲಿಬಾನಿಗಳೇ ಆಗಲಿ ಅವರಿಗೆ ಯಾವುದೇ ಹಕ್ಕು, ಅಧಿಕಾರ ಇಲ್ಲ ಎಂದು ಹೇಳಿದ್ದಾರೆ.

ಪ್ರತಿಭಟನೆ ವರದಿಗೆ ತೆರಳಿದ ಪತ್ರಕರ್ತರನ್ನು ಬಂಧಿಸಿದ ತಾಲಿಬಾನಿಗಳು ಪತ್ರಿಕಾ ಸ್ವಾತಂತ್ರ್ಯಕ್ಕೆ ಯಾವುದೇ ಭಂಗ ತರುವುದಿಲ್ಲ ಎಂದು ಹೇಳಿರುವ ತಾಲಿಬಾನ್​ ಅದನ್ನು ಪದೇಪದೆ ಸುಳ್ಳು ಮಾಡುತ್ತಿದ್ದಾರೆ. ಇಂದು ಕಾಬೂಲ್​ನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರೋಧಿ ಪ್ರತಿಭಟನೆಯ ವರದಿಗೆ ತೆರಳಿರುವ ಪತ್ರಕರ್ತರು, ನ್ಯೂಸ್​ ಚಾನೆಲ್​ ಸಿಬ್ಬಂದಿ, ಕ್ಯಾಮರಾಮೆನ್​ಗಳನ್ನೆಲ್ಲ ತಾಲಿಬಾನಿಗಳು ಬಂಧಿಸಿದ್ದಾರೆ. ಅವರಿಗೆ  ದೃಶ್ಯ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ಫೋಟೊಗ್ರಾಫರ್​ ಆಂಡ್ರ್ಯೂ ಕ್ವಿಲ್ಟಿ ಎಂಬುವರು ಟ್ವೀಟ್ ಮಾಡಿದ್ದು, ತಾಲಿಬಾನಿಗಳಲ್ಲೂ ಕೆಲವು ಸುಶಿಕ್ಷಿತರಿದ್ದಾರೆ. ಅವರು ಸುಮಾರು 300-500 ಜನರಿಗೆ  ಕಾಬೂಲ್​ ರಸ್ತೆಯಲ್ಲಿ ಹಲವು ಕಿಮೀ ದೂರಗಳವರೆಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದರು. ಆದರೆ ಜನ್​ಬಾಕ್​ ಚೌಕದ ಬಳಿ ಕಾವಲಿಗೆ ನಿಂತಿದ್ದ ಕೆಲವರು ಗಾಳಿಯಲ್ಲಿ ಮನಸಿಗೆ ಬಂದಂತೆ ಗುಂಡು ಹಾರಿಸಿದರು. ಪ್ರತಿಭಟನಾಕಾರರಿಗೆ ಥಳಿಸಿದರು. ಸುದ್ದಿ ಮಾಧ್ಯಮದವರ ವಾಹನ, ಕ್ಯಾಮರಾಗಳನ್ನೆಲ್ಲ ಧ್ವಂಸ ಮಾಡಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: Pawan Kalyan: ಪವನ್​ ಕಲ್ಯಾಣ್​ ಸಿನಿಮಾದ ಡೈಲಾಗ್​ ಹೊಡೆದ ವೀರೇಂದ್ರ ಸೆಹ್ವಾಗ್; ಇಲ್ಲಿದೆ ವೈರಲ್​ ವಿಡಿಯೋ

Kolkata: ಶಾಲಾ ಶಿಕ್ಷಕಿ ಮತ್ತು ಆಕೆಯ ಪುತ್ರನ ಭೀಕರ ಹತ್ಯೆ; ಪತಿ-ಟ್ಯೂಷನ್​ ಶಿಕ್ಷಕನ ವಿಚಾರಣೆ

Published On - 3:55 pm, Tue, 7 September 21

ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ