AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅಫ್ಘಾನ್​ ಮಾಜಿ ಸೇನಾ ಅಧಿಕಾರಿಗೆ ತಾಲಿಬಾನಿಗಳಿಂದ ಥಳಿತ; ದೃಶ್ಯ ನೋಡಿ ನೆಟ್ಟಿಗರ ಆಕ್ರೋಶ

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಇಲ್ಲಿನ ಮಾಜಿ ಸೇನಾಧಿಕಾರಿಗಳು, ಸಿಬ್ಬಂದಿಯನ್ನು ಬಂಧಿಸಿ, ಚಿತ್ರಹಿಂಸೆ ನೀಡಿ, ಕೊಲ್ಲುತ್ತಿದ್ದಾರೆ ಎಂದು ಹ್ಯೂಮನ್​ ರೈಟ್​ ವಾಚ್​ ಸೇರಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಹಿಂದೆ ವರದಿ ಮಾಡಿದ್ದವು.

Video: ಅಫ್ಘಾನ್​ ಮಾಜಿ ಸೇನಾ ಅಧಿಕಾರಿಗೆ ತಾಲಿಬಾನಿಗಳಿಂದ ಥಳಿತ; ದೃಶ್ಯ ನೋಡಿ ನೆಟ್ಟಿಗರ ಆಕ್ರೋಶ
ಆರ್ಮಿ ಅಧಿಕಾರಿಯನ್ನು ಥಳಿಸುತ್ತಿರುವ ದೃಶ್ಯ
TV9 Web
| Updated By: Digi Tech Desk|

Updated on:Dec 29, 2021 | 4:04 PM

Share

ಕಾಬೂಲ್​: ತಾಲಿಬಾನಿಗಳು ಅಫ್ಘಾನಿಸ್ತಾನ (Taliban In Afghanistan)ವನ್ನು ವಶಪಡಿಸಿಕೊಂಡ ಬಳಿಕ  ಹಳೇ ಸರ್ಕಾರದ ಉದ್ಯೋಗಿಗಳಿಗೆ ಅಮ್ನೆಸ್ಟಿ (ಸಾಮಾನ್ಯ ಕ್ಷಮಾದಾನ) ಘೋಷಿಸಿದ್ದಾರೆ. ಆದರೆ ಅವರ ಜನರಲ್ ಅಮ್ನೆಸ್ಟಿ (General Amnesty)ಗೆ ವಿರುದ್ಧವಾಗಿ ಹಿಂದಿನ ಸರ್ಕಾರದ ಸೇನಾಧಿಕಾರಿಯೊಬ್ಬರಿಗೆ ತಾಲಿಬಾನಿಗಳು ವಿಪರೀತ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಇದು ತೀವ್ರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಆಗಸ್ಟ್​ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗಿನಿಂದಲೂ ಅಲ್ಲಿ ಕಠಿಣ ಕಾನೂನು ಹೇರುತ್ತಿದ್ದಾರೆ. ಮಹಿಳೆಯರಿಗೆ ಸಂಬಂಧಪಟ್ಟಂತೆ ವಿವಿಧ ನಿರ್ಬಂಧ ವಿಧಿಸಲಾಗಿದೆ.  ಆದರೆ ಈಗ ಅಫ್ಘಾನ್​ ಮಾಜಿ ಸರ್ಕಾರದ ಸೇನಾಧಿಕಾರಿಯನ್ನು ಇಬ್ಬರು ತಾಲಿಬಾನಿಗಳು ಥಳಿಸುತ್ತಿರುವ ವಿಡಿಯೋ ನೋಡಿದ ಜನರು, ತಾಲಿಬಾನಿಗಳು ಹೇಳುವುದೇ ಒಂದು, ಮಾಡುವುದೇ ಒಂದು ಎಂದು ಹೇಳುತ್ತಿದ್ದಾರೆ. ತಾಜುಡೆನ್ ಸೊರೊಶ್ ಎಂಬುವರು ವಿಡಿಯೋ ಶೇರ್​ ಮಾಡಿಕೊಂಡು, ಅಫ್ಘಾನ್​ ಮಾಜಿ ಸರ್ಕಾರದ ಮಿಲಿಟರಿ ಅಧಿಕಾರಿ ರಹಮತುಲ್ಲಾ ಖಾದರಿಯವರಿಗೆ ತಾಲಿಬಾನಿಗಳು ಚಿತ್ರಹಿಂಸೆ ನೀಡುತ್ತಿರುವ ದೃಶ್ಯ ಇದು ಎಂದು ಹೇಳಿದ್ದಾರೆ. ಹಾಗೇ, ಖಾದರಿಯನ್ನು ಕಳೆದವಾರ ತಾಲಿಬಾನಿಗಳು ಬಂಧಿಸಿದ್ದರು ಎಂದೂ ತಿಳಿಸಿದ್ದಾರೆ.

ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೆಕ್ಮತುಲ್ಲಾ ಮಿರ್ಜಾದ, ತಾಲಿಬಾನಿಗಳು ಅಧಿಕಾರಕ್ಕೆ ಬರುತ್ತಿದ್ದಂತೆ ಜನರಲ್​ ಅಮ್ನೆಸ್ಟಿ ಘೋಷಿಸಿದ್ದಾರೆ. ಅವರು ಅದಕ್ಕೆ ಬದ್ಧರಾಗಿರಬೇಕು. ಅವರು ತಾವು ಹೇಳಿದ್ದೇ ಒಂದು, ಮಾಡುವುದೇ ಮತ್ತೊಂದು ಮಾಡಿದರೆ ಜನರ ನಂಬಿಕೆ ಗಳಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ, ತಾಲಿಬಾನ್​ನ ಉನ್ನತ ಸ್ಥಾನದಲ್ಲಿರುವ ಸದಸ್ಯ ಅನಾಸ್​ ಹಕ್ಕಾನಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ. ತಾಲಿಬಾನ್ ಘೋಷಿಸಿರುವ ಸಾಮಾನ್ಯ ಕ್ಷಮಾದಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಹಂತಕ್ಕೆ ತಲುಪಬಾರದು ಎಂದಿದ್ದಾರೆ. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂದು ಅನಾಸ್ ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖವಾಗಿದೆ.

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಇಲ್ಲಿನ ಮಾಜಿ ಸೇನಾಧಿಕಾರಿಗಳು, ಸಿಬ್ಬಂದಿಯನ್ನು ಬಂಧಿಸಿ, ಚಿತ್ರಹಿಂಸೆ ನೀಡಿ, ಕೊಲ್ಲುತ್ತಿದ್ದಾರೆ ಎಂದು ಹ್ಯೂಮನ್​ ರೈಟ್​ ವಾಚ್​ ಸೇರಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಹಿಂದೆ ವರದಿ ಮಾಡಿದ್ದವು. ಆದರೆ  ತಾಲಿಬಾನ್ ಇದನ್ನು ನಿರಾಕರಿಸಿತ್ತು.  ಆದರೆ ಇದೀಗ ವೈರಲ್​ ಆದ ವಿಡಿಯೋ ತಾಲಿಬಾನ್​ನ ಎಲ್ಲ ಹೇಳಿಕೆಗಳಿಗೂ ತದ್ವಿರುದ್ಧವಾಗಿದೆ ಎಂದು ಸೋಷಿಯಲ್​ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲ, ಪ್ರಮುಖ ರಾಜಕೀಯ ವಿಶ್ಲೇಷಕರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ಅಶ್ವಿನಿ ಮತ್ತು ಮಕ್ಕಳ ಕಣ್ಣೀರು; ಪುನೀತ್​ ನಿಧನರಾಗಿ ಇಂದಿಗೆ 2 ತಿಂಗಳು

Published On - 12:53 pm, Wed, 29 December 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ