AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Plane Crash: ಅಮೆಜಾನ್ ದಟ್ಟ​ ಕಾಡಿನಲ್ಲಿ ವಿಮಾನ ಪತನ, ಪವಾಡವೆಂಬಂತೆ ಬದುಕುಳಿದ 4 ಮಕ್ಕಳು, 2 ವಾರಗಳ ಬಳಿಕ ಪತ್ತೆ

ಎರಡು ವಾರಗಳ ಹಿಂದೆ ಕೊಲಂಬಿಯಾದ ಅಮೆಜಾನ್(Amazon) ದಟ್ಟ ಕಾಡಿನಲ್ಲಿ ವಿಮಾನ ಪತನ ಸಂಭವಿಸಿತ್ತು, ಹೇಗೂ ಯಾರೂ ಬದುಕುಳಿಯಲು ಸಾಧ್ಯವೇ ಇಲ್ಲ ಎಂದು ಭಾವಿಸಲಾಗಿತ್ತು.

Plane Crash: ಅಮೆಜಾನ್ ದಟ್ಟ​ ಕಾಡಿನಲ್ಲಿ ವಿಮಾನ ಪತನ,  ಪವಾಡವೆಂಬಂತೆ ಬದುಕುಳಿದ 4 ಮಕ್ಕಳು, 2 ವಾರಗಳ ಬಳಿಕ ಪತ್ತೆ
ಅಮೆಜಾನ್ ಕಾಡುImage Credit source: iStock
ನಯನಾ ರಾಜೀವ್
|

Updated on: May 18, 2023 | 8:24 AM

Share

ಎರಡು ವಾರಗಳ ಹಿಂದೆ ಕೊಲಂಬಿಯಾದ ಅಮೆಜಾನ್(Amazon) ದಟ್ಟ ಕಾಡಿನಲ್ಲಿ ವಿಮಾನ ಪತನ ಸಂಭವಿಸಿತ್ತು, ಹೇಗೂ ಯಾರೂ ಬದುಕುಳಿಯಲು ಸಾಧ್ಯವೇ ಇಲ್ಲ ಎಂದು ಭಾವಿಸಲಾಗಿತ್ತು. ಆದರೆ ಪವಾಡವೆಂಬಂತೆ 11 ತಿಂಗಳ ಮಗು ಸೇರಿದಂತೆ 4 ಮಕ್ಕಳು ಜೀವ ಉಳಿಸಿಕೊಂಡಿದ್ದಾರೆ. ಅಪಘಾತದಲ್ಲೇನೋ ಜೀವ ಉಳಿಯಿತು ಆದರೆ ಅಪಘಾತವಾಗಿ 2 ವಾರಗಳ ವರೆಗೆ ಆ ದಟ್ಟ ಅರಣ್ಯದಲ್ಲಿ ಪ್ರಾಣಿಗಳಿಂದಲೂ ತಮ್ಮ ಜೀವ ಕಾಪಾಡಿಕೊಂಡಿದ್ದಾರೆ.

ಮಿಲಿಟರಿ ಸತತ ಹುಡುಕಾಟ ನಡೆಸುತ್ತಿತ್ತು, ಎರಡು ವಾರಗಳ ಬಳಿಕ ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಮೇ 1 ರಂದು ವಿಮಾನ ಅಪಘಾತಕ್ಕೀಡಾಗಿತ್ತು, 100ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿತ್ತು. 11 ತಿಂಗಳ ಮಗು, 13 ವರ್ಷ, 9 ಹಾಗೂ 4 ವರ್ಷದ ಮಕ್ಕಳಿದ್ದರು. ಅಪಘಾತದ ನಂತರ ದಕ್ಷಿಣ ಕ್ಯಾಕ್ವೆಟಾ ವಿಭಾಗದಲ್ಲಿ ಕಾಡಿನ ಮೂಲಕ ಅಲೆದಾಡುತ್ತಿದ್ದರು.

ಅಲ್ಲಿರುವ ಕೋಲುಗಳನ್ನು ಬಳಸಿ ಮನೆಯ ರೀತಿ ನಿರ್ಮಿಸಿಕೊಂಡಿದ್ದರು ಅದನ್ನು ಕಂಡ ಬಳಿಕ ಯಾರೋ ಬದುಕುಳಿದಿದ್ದಾರೆ ಎನ್ನುವ ನಂಬಿಕೆ ಬಂದಿತ್ತು. ಮಗುವಿನ ಹಾಲಿನ ಬಾಟಲಿ, ಅರ್ಧ ತಿಂದಿದ್ದ ಹಣ್ಣಿನ ತುಂಡು ಪತ್ತೆಯಾಗಿತ್ತು, ಪೈಲಟ್​ ಹಾಗೂ ಇಬ್ಬರು ವಯಸ್ಕರ ಶವವನ್ನು ಸೈನಿಕರು ಪತ್ತೆ ಮಾಡಿದ್ದರು.

ಮತ್ತಷ್ಟು ಓದಿ: Nepal Air Crash: ಯೇತಿ ಏರ್‌ಲೈನ್ಸ್ ವಿಮಾನ ಪತನಕ್ಕೆ ಎಂಜಿನ್ ಸಮಸ್ಯೆ ಕಾರಣ: ವರದಿ

ಈ 4 ಮಕ್ಕಳು ಮೃತ ರಾನೋಕ್ ಅವರ ಮಕ್ಕಳಾಗಿದ್ದರು, 40 ಮೀಟರ್ ಎತ್ತರದ ವರೆಗೆ ಬೆಳೆಯುವ ದೈತ್ಯ ಮರಗಳು, ಕಾಡು ಪ್ರಾಣಿಗಳು, ಭಾರಿ ಮಳೆ ನಡುವೆ ಹುಡುಕಾಟ ಸ್ವಲ್ಪ ಕಷ್ಟವಾಗಿತ್ತು. ಸಹಾಯಕ್ಕಾಗಿ 3 ಹೆಲಿಕಾಪ್ಟರ್ ಬಳಸಲಾಗಿತ್ತು, ವಿಮಾನ ಪತನಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಾಡಾರ್‌ಗಳಿಂದ ವಿಮಾನವು ಕಣ್ಮರೆಯಾಗುವ ಕೆಲವೇ ನಿಮಿಷಗಳ ಮೊದಲು ಪೈಲಟ್ ಎಂಜಿನ್‌ನಲ್ಲಿ ಸಮಸ್ಯೆಯ ಬಗ್ಗೆ ತಿಳಿಸಿದ್ದರು.

ಕಳೆದ 2 ವರ್ಷಗಳ ಹಿಂದೆ ಅಮೆಜಾನ್ ಕಾಡಿನಲ್ಲಿ ಪೈಲಟ್​ ಒಬ್ಬರು ಸಿಲುಕಿಕೊಂಡಿದ್ದರು 5 ವಾರಗಳ ವರೆಗೆ ಹಕ್ಕಿಯ ಮೊಟ್ಟೆಗಳನ್ನು ತಿಂದು ಜೀವ ಉಳಿಸಿಕೊಂಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ