AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸದಿಂದಿಳಿದು ಉಕ್ರೇನ್​ನ ಮಧ್ಯಪ್ರದೇಶದ ಮೇಲೆ ಅಧಿಪತ್ಯ ಸಾಧಿಸಿದ್ದೇವೆ ಎಂದು ಬೀಗಿದ ರಷ್ಯಾ: ಪ್ರಮುಖ 6 ಬೆಳವಣಿಗೆಗಳು

Russia Ukraine War: ಉಕ್ರೇನ್ ನ ಖಾರ್​ಖೀವ್​​ ನಗರದ ಮೇಲೆ ರಷ್ಯಾದ ಸಶಸ್ತ್ರ ಪಡೆಗಳು ಇಳಿಯುತ್ತಿದ್ದಂತೆ ನಮ್ಮ ಯೋಧರೂ ತಿರುಗೇಟು ನೀಡುತ್ತಿದ್ದಾರೆ ಎಂದು ಉಕ್ರೇನ್ ಸೇನೆ ಪ್ರತಿಕ್ರಿಯಿಸಿದೆ. ಖಾರ್​ಖೀವ್​ ನಗರ ರಷ್ಯಾದ ಗಡಿ ಭಾಗದಲ್ಲಿದ್ದು, ಇಲ್ಲಿ ಹೆಚ್ಚಾಗಿ ರಷ್ಯಾ ಮಾತನಾಡುವವರೇ ವಾಸವಾಗಿದ್ದಾರೆ. ಈ ನಗರವು ಸುಮಾರು 14 ಲಕ್ಷ ಮಂದಿ ಜನಸಂಖ್ಯೆ ಹೊಂದಿದೆ.

ಆಗಸದಿಂದಿಳಿದು ಉಕ್ರೇನ್​ನ ಮಧ್ಯಪ್ರದೇಶದ ಮೇಲೆ ಅಧಿಪತ್ಯ ಸಾಧಿಸಿದ್ದೇವೆ ಎಂದು ಬೀಗಿದ ರಷ್ಯಾ: ಪ್ರಮುಖ 6 ಬೆಳವಣಿಗೆಗಳು
ಉಕ್ರೇನ್​ನ ಮಧ್ಯಪ್ರದೇಶದ ಮೇಲೆ ಆಗಸದಿಂದ ಇಳಿದು ಅಧಿಪತ್ಯ ಸಾಧಿಸಿದ್ದೇವೆ ಎಂದು ಬೀಗಿದ ರಷ್ಯಾ
TV9 Web
| Edited By: |

Updated on:Mar 02, 2022 | 2:17 PM

Share

ನವದೆಹಲಿ: ರಷ್ಯಾ ಸೇನಾ ಪಡೆಗಳು ಆನೆ ನಡೆದಿದ್ದೇ ದಾರಿ ಎಂಬಂತೆ, ಹೆಚ್ಚಿನ ಪ್ರತಿರೋಧವಿಲ್ಲದೆ ತನ್ನ ಶತೃ ರಾಷ್ಟ್ರ ಉಕ್ರೇನ್​ ಮೇಲೆ ಯುದ್ಧ ಮುಂದುವರಿಸಿದೆ (Russia Ukraine War). ಜನಸಂಖ್ಯೆಯಲ್ಲಿ ಉಕ್ರೇನ್​ನ ಎರಡನೆಯ ದೊಡ್ಡ ನಗರವಾದ ಖಾರ್​ಖೀವ್​ ನೊಳಕ್ಕೆ ರಷ್ಯಾ ಪಡೆಗಳು ನುಸುಳಿವೆ. ಆಗಸದಿಂದ ರಷ್ಯಾ ಪಡೆಗಳು ಖಾರ್ಕಿವ್ ನೊಳಕ್ಕೆ ಬಂದಿಳಿದಿವೆ. ಹಾಗೆ ಖಾರ್​ಖೀವ್​ ನೊಳಕ್ಕೆ ರಷ್ಯಾ ಪಡೆಗಳು ಹಾರಿಬರುತ್ತಿದ್ದಂತೆ ಉಕ್ರೇನ್ ಯೋಧರು ಪ್ರತಿರೋಧಕ ದಾಳಿ ಆರಂಭಿಸಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (US President Joe Biden) ಮಾತನಾಡಿದ್ದು ​ರಷ್ಯಾ ಪಡೆಗಳು ಉಕ್ರೇನ್ ನ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿವೆ. ಈಗಾಗಲೇ ಖಾರ್ಕಿವ್​, ಖೈವ್ ಮತ್ತಿತರ ನಗರಗಳ ಮೇಲೆ ಕಬ್ಜಾ ಸಾಧಿಸುತ್ತಾ ಸಾಗುತ್ತಿವೆ. ಆದರೆ ಇದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ಗೆ (Russia Vladimir Putin) ದೀರ್ಘಕಾಲದ ಕಾದಾಟವಾಗಲಿದೆ. ಆದರೆ ಅಷ್ಟು ಸುಲಭವಾಗಿ ಉಕ್ರೇನ್​ ಅವರಿಗೆ ದಕ್ಕುವುದಿಲ್ಲ ಎಂದು ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ.

ಪ್ರಮುಖ ಆರು ಬೆಳವಣಿಗೆಗಳು ಇಲ್ಲಿವೆ: 

  1. ಉಕ್ರೇನ್ ನ ಯುದ್ಧ ಪ್ರದೇಶಗಳಲ್ಲಿ ತಂಗಿರುವ ಭಾರತೀಯರನ್ನು ತಾಯ್ನಾಡಿಗೆ ವಾಪಸ್​ ಕರೆತರಲು ಮೂರು C-17 aircraft ಗಳು ಅಲ್ಲಿಗೆ ತೆರಳಿವೆ. ಎಲ್ಲಾ ಭಾರತೀಯರನ್ನೂ ವಾಪಸ್​ ಕರೆತರುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಭಾರತೀಯ ವಾಯುಪಡೆಯ ವೈಸ್​ ಚೀಫ್​​ ಏರ್​ ಮಾರ್ಷಲ್ ಸಂದೀಪ್​ ಸಿಂಗ್​ ಹೇಳಿದ್ದಾರೆ. ​
  2. ರಷ್ಯಾದ ಸಶಸ್ತ್ರ ಪಡೆಗಳು ಉಕ್ರೇನ್ ನ ಮಧ್ಯ ಪ್ರದೇಶಕ್ಕೂ ನುಗ್ಗಿದೆ. ಉಕ್ರೇನ್ ನ ಕೇಂದ್ರ ಭಾಗದಲ್ಲಿರುವ ಖೆರ್ಸಾನ್​ ನಗರದ ಮೇಲೆ ಆಗಸದಿಂದಲೇ ನಮ್ಮ ಪಡೆಗಳು ಅಧಿಪತ್ಯ ಸಾಧಿಸಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಇಗೋರ್ ಕೊನಾಷೆನ್ಕೋವ್ ಟೆಲಿವಿಶನ್​ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
  3. ಉಕ್ರೇನ್ ನ ಖಾರ್ಕಿವ್​​ ನಗರದ ಮೇಲೆ ರಷ್ಯಾದ ಸಶಸ್ತ್ರ ಪಡೆಗಳು ಇಳಿಯುತ್ತಿದ್ದಂತೆ ನಮ್ಮ ಯೋಧರೂ ತಿರುಗೇಟು ನೀಡುತ್ತಿದ್ದಾರೆ ಎಂದು ಉಕ್ರೇನ್ ಸೇನೆ (Ukrainian Army) ಪ್ರತಿಕ್ರಿಯಿಸಿದೆ. ಖಾರ್ಕಿವ್​ ನಗರ ರಷ್ಯಾದ ಗಡಿ ಭಾಗದಲ್ಲಿದ್ದು, ಇಲ್ಲಿ ಹೆಚ್ಚಾಗಿ ರಷ್ಯಾ ಮಾತನಾಡುವವರೇ ವಾಸವಾಗಿದ್ದಾರೆ. ಈ ನಗರವು ಸುಮಾರು 14 ಲಕ್ಷ ಮಂದಿ ಜನಸಂಖ್ಯೆ ಹೊಂದಿದೆ.
  4. ‘ಡಿಕ್ಟೇಟರ್​’ ವ್ಲಾದಿಮಿರ್ ಪುಟಿನ್ ಹೀಗೆಯೇ ಮುಂದುವರಿದರೆ ರಾಜತಾಂತ್ರಿಕ ಮತ್ತು ಆರ್ಥಿಕ ದಿಗ್ಬಂಧನಗಳ ಮೂಲಕ ರಷ್ಯಾ ನಡುಗಡ್ಡೆಯಾಗಲಿದೆ ಎಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದಾರೆ. ಈ ನಡುವೆ ಉಕ್ರೇನ್​ ಅಧ್ಯಕ್ಷ ವೊಲೊಡಿಮೀರ್ ಜೆಲೆನ್​ಸ್ಕೀ ಜೊತೆ ಮಾತನಾಡಿರುವ ಅಧ್ಯಕ್ಷ ಜೋ ಬೈಡನ್ ಅವರು ಯುದ್ಧ ಪರಿಣಾಮಗಳಿಗೆ ರಷ್ಯಾವನ್ನೇ ಕಾರಣೀಭೂತವನ್ನಾಗಿಸಲು ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಹೇಗೆ ಕಾರ್ಯಮಗ್ನವಾಗಿವೆ ಎಂಬುದನ್ನು ಮನದಟ್ಟುಪಡಿಸಿದ್ದಾರೆ.
  5. ಕಳೆದ ಗುರುವಾರ ಆರಂಭವಾಗಿರುವ ಉಕ್ರೇನ್​ ಮೇಲಿನ ರಷ್ಯಾದ ಅತಿಕ್ರಮಮಣದಿಂದಾಗಿ ರಷ್ಯಾದ ಮೇಲೆ ಅನೇಕ ದಿಗ್ಬಂಧನಗಳ ಬಿಗಿ ಸಾಧಿಸಲಾಗಿದೆ. ಅದು ವ್ಯಾಪಾರ ಮತ್ತು ಹಣಕಾಸು ದಂಡದ ರೂಪದಲ್ಲಿವೆ. ಆಪಲ್​ ಮತ್ತು ನೈಕ್​ ಕಂಪನಿಗಳು ಈಗಾಗಲೇ ರಷ್ಯಾದಲ್ಲಿ ತನ್ನ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿವೆ.
  6. ರಷ್ಯಾ ಮೂಲಕ ಭಾರತೀಯರ ಸ್ಥಳಾಂತರಕ್ಕೆ ಅಸ್ತು: ರಷ್ಯಾ ರಾಯಭಾರಿಯ ಮಹತ್ವದ ಹೇಳಿಕೆ

Published On - 2:04 pm, Wed, 2 March 22

Follow Us
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ