AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸದಿಂದಿಳಿದು ಉಕ್ರೇನ್​ನ ಮಧ್ಯಪ್ರದೇಶದ ಮೇಲೆ ಅಧಿಪತ್ಯ ಸಾಧಿಸಿದ್ದೇವೆ ಎಂದು ಬೀಗಿದ ರಷ್ಯಾ: ಪ್ರಮುಖ 6 ಬೆಳವಣಿಗೆಗಳು

Russia Ukraine War: ಉಕ್ರೇನ್ ನ ಖಾರ್​ಖೀವ್​​ ನಗರದ ಮೇಲೆ ರಷ್ಯಾದ ಸಶಸ್ತ್ರ ಪಡೆಗಳು ಇಳಿಯುತ್ತಿದ್ದಂತೆ ನಮ್ಮ ಯೋಧರೂ ತಿರುಗೇಟು ನೀಡುತ್ತಿದ್ದಾರೆ ಎಂದು ಉಕ್ರೇನ್ ಸೇನೆ ಪ್ರತಿಕ್ರಿಯಿಸಿದೆ. ಖಾರ್​ಖೀವ್​ ನಗರ ರಷ್ಯಾದ ಗಡಿ ಭಾಗದಲ್ಲಿದ್ದು, ಇಲ್ಲಿ ಹೆಚ್ಚಾಗಿ ರಷ್ಯಾ ಮಾತನಾಡುವವರೇ ವಾಸವಾಗಿದ್ದಾರೆ. ಈ ನಗರವು ಸುಮಾರು 14 ಲಕ್ಷ ಮಂದಿ ಜನಸಂಖ್ಯೆ ಹೊಂದಿದೆ.

ಆಗಸದಿಂದಿಳಿದು ಉಕ್ರೇನ್​ನ ಮಧ್ಯಪ್ರದೇಶದ ಮೇಲೆ ಅಧಿಪತ್ಯ ಸಾಧಿಸಿದ್ದೇವೆ ಎಂದು ಬೀಗಿದ ರಷ್ಯಾ: ಪ್ರಮುಖ 6 ಬೆಳವಣಿಗೆಗಳು
ಉಕ್ರೇನ್​ನ ಮಧ್ಯಪ್ರದೇಶದ ಮೇಲೆ ಆಗಸದಿಂದ ಇಳಿದು ಅಧಿಪತ್ಯ ಸಾಧಿಸಿದ್ದೇವೆ ಎಂದು ಬೀಗಿದ ರಷ್ಯಾ
TV9 Web
| Edited By: |

Updated on:Mar 02, 2022 | 2:17 PM

Share

ನವದೆಹಲಿ: ರಷ್ಯಾ ಸೇನಾ ಪಡೆಗಳು ಆನೆ ನಡೆದಿದ್ದೇ ದಾರಿ ಎಂಬಂತೆ, ಹೆಚ್ಚಿನ ಪ್ರತಿರೋಧವಿಲ್ಲದೆ ತನ್ನ ಶತೃ ರಾಷ್ಟ್ರ ಉಕ್ರೇನ್​ ಮೇಲೆ ಯುದ್ಧ ಮುಂದುವರಿಸಿದೆ (Russia Ukraine War). ಜನಸಂಖ್ಯೆಯಲ್ಲಿ ಉಕ್ರೇನ್​ನ ಎರಡನೆಯ ದೊಡ್ಡ ನಗರವಾದ ಖಾರ್​ಖೀವ್​ ನೊಳಕ್ಕೆ ರಷ್ಯಾ ಪಡೆಗಳು ನುಸುಳಿವೆ. ಆಗಸದಿಂದ ರಷ್ಯಾ ಪಡೆಗಳು ಖಾರ್ಕಿವ್ ನೊಳಕ್ಕೆ ಬಂದಿಳಿದಿವೆ. ಹಾಗೆ ಖಾರ್​ಖೀವ್​ ನೊಳಕ್ಕೆ ರಷ್ಯಾ ಪಡೆಗಳು ಹಾರಿಬರುತ್ತಿದ್ದಂತೆ ಉಕ್ರೇನ್ ಯೋಧರು ಪ್ರತಿರೋಧಕ ದಾಳಿ ಆರಂಭಿಸಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (US President Joe Biden) ಮಾತನಾಡಿದ್ದು ​ರಷ್ಯಾ ಪಡೆಗಳು ಉಕ್ರೇನ್ ನ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿವೆ. ಈಗಾಗಲೇ ಖಾರ್ಕಿವ್​, ಖೈವ್ ಮತ್ತಿತರ ನಗರಗಳ ಮೇಲೆ ಕಬ್ಜಾ ಸಾಧಿಸುತ್ತಾ ಸಾಗುತ್ತಿವೆ. ಆದರೆ ಇದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ಗೆ (Russia Vladimir Putin) ದೀರ್ಘಕಾಲದ ಕಾದಾಟವಾಗಲಿದೆ. ಆದರೆ ಅಷ್ಟು ಸುಲಭವಾಗಿ ಉಕ್ರೇನ್​ ಅವರಿಗೆ ದಕ್ಕುವುದಿಲ್ಲ ಎಂದು ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ.

ಪ್ರಮುಖ ಆರು ಬೆಳವಣಿಗೆಗಳು ಇಲ್ಲಿವೆ: 

  1. ಉಕ್ರೇನ್ ನ ಯುದ್ಧ ಪ್ರದೇಶಗಳಲ್ಲಿ ತಂಗಿರುವ ಭಾರತೀಯರನ್ನು ತಾಯ್ನಾಡಿಗೆ ವಾಪಸ್​ ಕರೆತರಲು ಮೂರು C-17 aircraft ಗಳು ಅಲ್ಲಿಗೆ ತೆರಳಿವೆ. ಎಲ್ಲಾ ಭಾರತೀಯರನ್ನೂ ವಾಪಸ್​ ಕರೆತರುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಭಾರತೀಯ ವಾಯುಪಡೆಯ ವೈಸ್​ ಚೀಫ್​​ ಏರ್​ ಮಾರ್ಷಲ್ ಸಂದೀಪ್​ ಸಿಂಗ್​ ಹೇಳಿದ್ದಾರೆ. ​
  2. ರಷ್ಯಾದ ಸಶಸ್ತ್ರ ಪಡೆಗಳು ಉಕ್ರೇನ್ ನ ಮಧ್ಯ ಪ್ರದೇಶಕ್ಕೂ ನುಗ್ಗಿದೆ. ಉಕ್ರೇನ್ ನ ಕೇಂದ್ರ ಭಾಗದಲ್ಲಿರುವ ಖೆರ್ಸಾನ್​ ನಗರದ ಮೇಲೆ ಆಗಸದಿಂದಲೇ ನಮ್ಮ ಪಡೆಗಳು ಅಧಿಪತ್ಯ ಸಾಧಿಸಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಇಗೋರ್ ಕೊನಾಷೆನ್ಕೋವ್ ಟೆಲಿವಿಶನ್​ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
  3. ಉಕ್ರೇನ್ ನ ಖಾರ್ಕಿವ್​​ ನಗರದ ಮೇಲೆ ರಷ್ಯಾದ ಸಶಸ್ತ್ರ ಪಡೆಗಳು ಇಳಿಯುತ್ತಿದ್ದಂತೆ ನಮ್ಮ ಯೋಧರೂ ತಿರುಗೇಟು ನೀಡುತ್ತಿದ್ದಾರೆ ಎಂದು ಉಕ್ರೇನ್ ಸೇನೆ (Ukrainian Army) ಪ್ರತಿಕ್ರಿಯಿಸಿದೆ. ಖಾರ್ಕಿವ್​ ನಗರ ರಷ್ಯಾದ ಗಡಿ ಭಾಗದಲ್ಲಿದ್ದು, ಇಲ್ಲಿ ಹೆಚ್ಚಾಗಿ ರಷ್ಯಾ ಮಾತನಾಡುವವರೇ ವಾಸವಾಗಿದ್ದಾರೆ. ಈ ನಗರವು ಸುಮಾರು 14 ಲಕ್ಷ ಮಂದಿ ಜನಸಂಖ್ಯೆ ಹೊಂದಿದೆ.
  4. ‘ಡಿಕ್ಟೇಟರ್​’ ವ್ಲಾದಿಮಿರ್ ಪುಟಿನ್ ಹೀಗೆಯೇ ಮುಂದುವರಿದರೆ ರಾಜತಾಂತ್ರಿಕ ಮತ್ತು ಆರ್ಥಿಕ ದಿಗ್ಬಂಧನಗಳ ಮೂಲಕ ರಷ್ಯಾ ನಡುಗಡ್ಡೆಯಾಗಲಿದೆ ಎಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದಾರೆ. ಈ ನಡುವೆ ಉಕ್ರೇನ್​ ಅಧ್ಯಕ್ಷ ವೊಲೊಡಿಮೀರ್ ಜೆಲೆನ್​ಸ್ಕೀ ಜೊತೆ ಮಾತನಾಡಿರುವ ಅಧ್ಯಕ್ಷ ಜೋ ಬೈಡನ್ ಅವರು ಯುದ್ಧ ಪರಿಣಾಮಗಳಿಗೆ ರಷ್ಯಾವನ್ನೇ ಕಾರಣೀಭೂತವನ್ನಾಗಿಸಲು ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಹೇಗೆ ಕಾರ್ಯಮಗ್ನವಾಗಿವೆ ಎಂಬುದನ್ನು ಮನದಟ್ಟುಪಡಿಸಿದ್ದಾರೆ.
  5. ಕಳೆದ ಗುರುವಾರ ಆರಂಭವಾಗಿರುವ ಉಕ್ರೇನ್​ ಮೇಲಿನ ರಷ್ಯಾದ ಅತಿಕ್ರಮಮಣದಿಂದಾಗಿ ರಷ್ಯಾದ ಮೇಲೆ ಅನೇಕ ದಿಗ್ಬಂಧನಗಳ ಬಿಗಿ ಸಾಧಿಸಲಾಗಿದೆ. ಅದು ವ್ಯಾಪಾರ ಮತ್ತು ಹಣಕಾಸು ದಂಡದ ರೂಪದಲ್ಲಿವೆ. ಆಪಲ್​ ಮತ್ತು ನೈಕ್​ ಕಂಪನಿಗಳು ಈಗಾಗಲೇ ರಷ್ಯಾದಲ್ಲಿ ತನ್ನ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿವೆ.
  6. ರಷ್ಯಾ ಮೂಲಕ ಭಾರತೀಯರ ಸ್ಥಳಾಂತರಕ್ಕೆ ಅಸ್ತು: ರಷ್ಯಾ ರಾಯಭಾರಿಯ ಮಹತ್ವದ ಹೇಳಿಕೆ

Published On - 2:04 pm, Wed, 2 March 22

ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ