AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pak vs Bangla: 1971ರ ನರಮೇಧ: ಪಾಕಿಸ್ತಾನದ ಕ್ಷಮೆಗೆ ಬಾಂಗ್ಲಾದೇಶ ಮತ್ತೆ ಆಗ್ರಹ

1971 Bangla Massacre- ಶ್ರೀಲಂಕಾದ 75ನೇ ಗಣರಾಜ್ಯೋತ್ಸವ ಆಚರಣೆ ಸಂಬಂಧ ಅಲ್ಲಿ ಪಾಕಿಸ್ತಾನದ ಸಚಿವೆಯನ್ನು ಭೇಟಿಯಾದ ಲಂಕಾ ಸಚಿವರು, 1971ರ ನರಮೇಧ ಘಟನೆಗೆ ಪಾಕಿಸ್ತಾನ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ ಘಟನೆ ನಡೆದಿದೆ.

Pak vs Bangla: 1971ರ ನರಮೇಧ: ಪಾಕಿಸ್ತಾನದ ಕ್ಷಮೆಗೆ ಬಾಂಗ್ಲಾದೇಶ ಮತ್ತೆ ಆಗ್ರಹ
ಹೀನಾ ರಬ್ಬಾನಿ ಖರ್Image Credit source: The Dawn
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 06, 2023 | 3:15 PM

Share

ಕೊಲಂಬೋ: 1971ರ ಯುದ್ಧದ ವೇಳೆ ಪಾಕಿಸ್ತಾನದ ಸೇನಾ ಪಡೆಗಳು ಬಾಂಗ್ಲಾದೇಶೀಯರ ಮೇಲೆ ದಾಳಿ ಮಾಡಿ ನರಮೇಧ ಎಸಗಿದ ಘಟನೆಗೆ ಪಾಕಿಸ್ತಾನ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಬಾಂಗ್ಲಾದೇಶ ಆಗ್ರಹಿಸಿದ ಘಟನೆ ನಡೆದಿದೆ. ಮೊನ್ನೆ ಶನಿವಾರದಂದು ಶ್ರೀಲಂಕಾದ ರಾಜಧಾನಿ ನಗರದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸಚಿವರ ಭೇಟಿ ವೇಳೆ ಈ ಬೆಳವಣಿಗೆ ನಡೆದಿರುವುದು ವರದಿಯಾಗಿದೆ. 1971ರ ನರಮೇಧ ಘಟನೆಗೆ ಪಾಕಿಸ್ತಾನ ಕ್ಷಮೆ ಯಾಚಿಸಬೇಕು ಎಂದು ಆ ದೇಶದ ವಿದೇಶಾಂಗ ಖಾತೆ ರಾಜ್ಯ ಸಚಿವೆ ಹೀನಾ ರಬ್ಬಾನಿ ಖರ್ ಅವರನ್ನು ಬಾಂಗ್ಲಾದೇಶ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೋಮೆನ್ ಆಗ್ರಹಪಡಿಸಿದರು. ಆದರೆ, ಹೀನಾ ರಬ್ಬಾನಿ ಈ ಆಗ್ರಹಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

1971ರಲ್ಲಿ ಬಾಂಗ್ಲಾದೇಶ ವಿಮೋಚನೆಗಾಗಿ ನಡೆದ ಹೋರಾಟದ ವೇಳೆ ಪಾಕಿಸ್ತಾನ ಸೇನಾ ಪಡೆಗಳು ಅಮಾನುಷ ರೀತಿಯಲ್ಲಿ ಬಾಂಗ್ಲಾದೇಶೀಯರನ್ನು ಹತ್ಯೆಗೈದಿದ್ದವು. ಆಗ ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಭಾಷೆ ವಿಚಾರಕ್ಕೆ ಶುರುವಾದ ವಿಮುಕ್ತಿ ಹೋರಾಟ 1971ರಲ್ಲಿ ತಾರಕಕ್ಕೇರಿತ್ತು. ಆ ಹೋರಾಟ ಹತ್ತಿಕ್ಕಲು ಪಾಕಿಸ್ತಾನ ಸೇನಾ ಪಡೆಗಳು ಬಾಂಗ್ಲಾದ ಇಸ್ಲಾಮಿ ಉಗ್ರರ ಜೊತೆ ಸೇರಿಕೊಂಡು 3ರಿಂದ 30 ಲಕ್ಷ ಜನರ ನರಮೇಧ ಮಾಡಿತ್ತು. ಲಕ್ಷಾಂತರ ಮಹಿಳೆಯ ಮೇಲೆ ಅತ್ಯಾಚಾರ ಆಯಿತು. ಅಂತಿಮವಾಗಿ ಭಾರತೀಯ ಸೇನೆಯ ಸಹಾಯದಿಂದ ಬಾಂಗ್ಲಾದೇಶ ವಿಮೋಚನೆ ಪಡೆದು ಸ್ವತಂತ್ರ ದೇಶವಾಯಿತು.

ಇದನ್ನೂ ಓದಿ: Pakistan Crisis: ಸ್ವಯಂಕೃತ ಅಪರಾಧಗಳಿಗೆ ತತ್ತರಿಸಿದ ಪಾಕಿಸ್ತಾನ; ಆರ್ಥಿಕ ಅಧಃಪತನಕ್ಕೆ ಭಾರತ ದ್ವೇಷವೇ ಮುಖ್ಯ ಕಾರಣ

ಆ ನರಮೇಧ ಕೃತ್ಯಕ್ಕೆ ಪಾಕಿಸ್ತಾನ ಇದೂವರೆಗೂ ಸಾರ್ವಜನಿಕವಾಗಿ ಕ್ಷಮೆ ಕೋರಿಲ್ಲ. ಬಾಂಗ್ಲಾದೇಶ ಹಲವು ಬಾರಿ ಕ್ಷಮೆಗಾಗಿ ಆಗ್ರಹಪಡಿಸಿದರೂ ಪಾಕಿಸ್ತಾನ ಬಹಿರಂಗವಾಗಿ ಕ್ಷಮಾಪಣೆ ಮಾಡಿಲ್ಲ. ನಿನ್ನೆ ಭಾನುವಾರ ಕೊಲಂಬೋದಲ್ಲಿ ಶ್ರೀಲಂಕಾ ಸರ್ಕಾರದ ಗೆಸ್ಟ್ ಹೌಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಾಂಗ್ಲಾದೇಶದ ವಿದೇಶಾಂಗ ಸಚಿವರು ತಾನು ಪಾಕಿಸ್ತಾನದ ಸಚಿವೆಗೆ ನರಮೇಧ ಘಟನೆಗೆ ಕ್ಷಮೆ ಯಾಚಿಸಬೇಕೆಂದು ಆಗ್ರಹಪಡಿಸಿದ ಸಂಗತಿ ವಿವರಿಸಿದರು.

ನಮ್ಮ ಜೊತೆಗಿನ ಸಂಬಂಧ ಗಟ್ಟಿಗೊಳಿಸಬೇಕು ಎಂದು ಆಕೆ (ಪಾಕ್ ಸಚಿವೆ) ನನಗೆ ಹೇಳಿದರು. 1971ರ ನರಮೇಧ ಘಟನೆಗೆ ಸಾರ್ವಜನಿಕ ಕ್ಷಮೆ ಯಾಚಿಸಿ ಎಂದು ನಾವು ಉತ್ತರಿಸಿದೆವು. ಆಕೆ ಈ ವಿಚಾರದ ಬಗ್ಗೆ ಆಸಕ್ತಿ ತೋರಲಿಲ್ಲ, ಉತ್ತರ ಕೊಡಲೂ ಇಲ್ಲ. ತಮಗೆ ಕೆಲ ಮಿತಿಗಳಿವೆ ಎಂದರು. ನಾನು ಕೂಡ ನಮ್ಮಲ್ಲಿ ಕೆಲ ಮಿತಿಗಳು ಇವೆ ಎಂದೆಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: Viral News: ಒಂದೇ ವ್ಯಕ್ತಿಯನ್ನು ಮದುವೆಯಾದ ತ್ರಿವಳಿ ಸಹೋದರಿಯರು; ಕೀನ್ಯಾದಲ್ಲೊಂದು ವಿಚಿತ್ರ ವಿವಾಹ

ನಮ್ಮ ಜೊತೆ ವ್ಯಾಪಾರ ಸಂಬಂಧ ಹೆಚ್ಚಿಸುವುದು ಪಾಕಿಸ್ತಾನ ಇರಾದೆ. ಆದರೆ, ಅವರಿಗೆ ಅದು ಎಫ್​ಒಸಿಯಲ್ಲಿ (ಉಚಿತವಾಗಿ) ಆಗಲಿ ಎಂದು ಬಯಸುತ್ತದೆ. ನೀವು ಆ್ಯಂಟಿಡಂಪಿಂಗ್ ಕಂಡೀಷನ್ಸ್ ಹಾಕಿದ್ದೀರಲ್ಲ ಎಂದೆ. ಅದು ಒಳ್ಳೆಯದೇ ಅಲ್ವಾ ಎಂದು ಅವರು ಹೇಳಿದರು. ನನಗೆ ಅದು ಸರಿ ಎನಿಸಿತು. ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಮಾತ್ರವಲ್ಲ ಇಡೀ ಭಾರತೀಯ ಉಪಖಂಡದ ಜೊತೆಗಿನ ಸಂಬಂಧ ಉತ್ತಮಪಡಿಸಲು ಬಯಸುತ್ತದೆಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೋಮೆನ್ ಹೇಳಿದರು.

Published On - 3:15 pm, Mon, 6 February 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್