AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧೀಜಿ ಬಳಸಿದ ಬಟ್ಟಲು, ಚಮಚ ಹರಾಜಿಗಿದೆ.. ಆರಂಭಿಕ ಬೆಲೆ ಕೇಳಿದರೆ ಹೌಹಾರುತ್ತೀರಿ!

ಮಹಾತ್ಮ ಗಾಂಧೀಜಿ ಬಳಸಿದ ಲೋಹದ ಬಟ್ಟಲು, ಮರದ ಚಮಚ, ಫೋರ್ಕ್ ಎಲ್ಲವನ್ನೂ ಹರಾಜಿಗಿಡಲಾಗಿದೆ. ಬ್ರಿಟನ್​ನ ಬ್ರಿಸ್ಟೋಲ್​ನಲ್ಲಿ ಜನವರಿ 10ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು ಹರಾಜಿನ ಆರಂಭಿಕ ಬೆಲೆ ಭಾರತೀಯ ಮೌಲ್ಯದಲ್ಲಿ ₹54,59,808.20 (GBP 55,000) ಆಗಿರಲಿದೆ.

ಗಾಂಧೀಜಿ ಬಳಸಿದ ಬಟ್ಟಲು, ಚಮಚ ಹರಾಜಿಗಿದೆ.. ಆರಂಭಿಕ ಬೆಲೆ ಕೇಳಿದರೆ ಹೌಹಾರುತ್ತೀರಿ!
ಮಹಾತ್ಮ ಗಾಂಧೀಜಿ
Skanda
| Edited By: ಸಾಧು ಶ್ರೀನಾಥ್​|

Updated on: Dec 30, 2020 | 2:35 PM

Share

ಒಂದು ಕಾಲದಲ್ಲಿ ಮಹಾತ್ಮ ಗಾಂಧೀಜಿ ಬಳಸಿದ ಲೋಹದ ಬಟ್ಟಲು, ಮರದ ಚಮಚ, ಫೋರ್ಕ್ ಎಲ್ಲವಕ್ಕೂ ಈಗ ಭರಪೂರ ಡಿಮ್ಯಾಂಡ್ ಬಂದಿದೆ. ಬ್ರಿಟನ್​ನ ಬ್ರಿಸ್ಟಲ್​ನಲ್ಲಿ ಜನವರಿ 10ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು ಹರಾಜಿನ ಆರಂಭಿಕ ಬೆಲೆ ಭಾರತೀಯ ಮೌಲ್ಯದಲ್ಲಿ ₹54,59,808.20 (GBP 55,000) ಆಗಿರಲಿದೆ. ಅದರೊಂದಿಗೆ ಹರಾಜು ಸಮಿತಿಯ ಕಮಿಷನ್, ಜಿಎಸ್​ಟಿ, ವಿಮೆ, ಭಾರತದಿಂದ ಆಮದು ಮಾಡಿಕೊಂಡ ಮೊತ್ತ ಇತ್ಯಾದಿ ಸೇರಿಕೊಂಡು ಒಟ್ಟು ಮೊತ್ತ ₹ 1.2 ಕೋಟಿ ಆಗಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಇದು ಆಯೋಜಕರು ನಿರೀಕ್ಷಿಸುತ್ತಿರುವ ಕನಿಷ್ಠ ಮೌಲ್ಯವಾಗಿದ್ದು ಹರಾಜಿನ ಸಂದರ್ಭದಲ್ಲಿ 2-3 ಪಟ್ಟು ಹೆಚ್ಚು ಮೌಲ್ಯಕ್ಕೆ ಹೋಗುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ. ಈ ವಸ್ತುಗಳನ್ನು ಮಹಾತ್ಮ ಗಾಂಧೀಜಿಯವರು 1942ರಿಂದ 1944ರ ಅವಧಿಯಲ್ಲಿ ಪುಣೆಯ ಅಗಾ ಖಾನ್​ ಅರಮನೆಯಲ್ಲಿ ಸೆರೆಯಾಳಾಗಿದ್ದಾಗ ಹಾಗೂ ಮುಂಬೈನ ಪಂಬನ್​ ಹೌಸ್​ನಲ್ಲಿದ್ದಾಗ ಬಳಕೆ ಮಾಡಿದ್ದರು ಎಂದು ಹರಾಜು ಪ್ರಕ್ರಿಯೆ ಆಯೋಜಕರು ತಿಳಿಸಿದ್ದಾರೆ.

ಯಾರ ಸಂಗ್ರಹಣೆಯಲ್ಲಿತ್ತು ಇದು? ಈ ವಸ್ತುಗಳು ಗಾಂಧೀಜಿಯವರ ಕಟ್ಟಾ ಅನುಯಾಯಿ ಆದ ಸುಮತಿ ಮೊರಾರ್ಜಿ ಅವರ ಸಂಗ್ರಹಣೆಯಲ್ಲಿತ್ತು. ಈ ಕುರಿತು 1970ರಲ್ಲಿ ಸುಮತಿ ಮೊರಾರ್ಜಿ ಅವರ ಗೌರವಾರ್ಥವಾಗಿ ಪ್ರಕಟಿಸಿದ ಸ್ಮರಣ ಗ್ರಂಥ ಮತ್ತು ವಿಠ್ಠಲ ಭಾಯಿ ಝಾವೇರಿ ಬಯೋಪಿಕ್​ನಲ್ಲೂ ಉಲ್ಲೇಖವಿದೆ. ಈ ವಸ್ತುಗಳು ಗಾಂಧೀಜಿಯವರಿಗೆ ಸಂಬಂಧಿಸಿದ್ದಷ್ಟೇ ಅಲ್ಲದೇ ಭಾರತೀಯ ಇತಿಹಾಸಕ್ಕೂ ಸಂಬಂಧಿಸಿದ್ದಾಗಿದ್ದರಿಂದ ಹರಾಜು ಪ್ರಕ್ರಿಯೆ ಬಹಳಷ್ಟು ಕುತೂಹಲ ಮೂಡಿಸಿದೆ.

ಬ್ರಿಟನ್ನಲ್ಲಿರುವ ಗಾಂಧಿ ಹಾಗೂ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಪ್ರತಿಮೆ ತೆರವು ಸಾಧ್ಯತೆ.. ಕಾರಣವೇನು..?

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು