AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧೀಜಿ ಬಳಸಿದ ಬಟ್ಟಲು, ಚಮಚ ಹರಾಜಿಗಿದೆ.. ಆರಂಭಿಕ ಬೆಲೆ ಕೇಳಿದರೆ ಹೌಹಾರುತ್ತೀರಿ!

ಮಹಾತ್ಮ ಗಾಂಧೀಜಿ ಬಳಸಿದ ಲೋಹದ ಬಟ್ಟಲು, ಮರದ ಚಮಚ, ಫೋರ್ಕ್ ಎಲ್ಲವನ್ನೂ ಹರಾಜಿಗಿಡಲಾಗಿದೆ. ಬ್ರಿಟನ್​ನ ಬ್ರಿಸ್ಟೋಲ್​ನಲ್ಲಿ ಜನವರಿ 10ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು ಹರಾಜಿನ ಆರಂಭಿಕ ಬೆಲೆ ಭಾರತೀಯ ಮೌಲ್ಯದಲ್ಲಿ ₹54,59,808.20 (GBP 55,000) ಆಗಿರಲಿದೆ.

ಗಾಂಧೀಜಿ ಬಳಸಿದ ಬಟ್ಟಲು, ಚಮಚ ಹರಾಜಿಗಿದೆ.. ಆರಂಭಿಕ ಬೆಲೆ ಕೇಳಿದರೆ ಹೌಹಾರುತ್ತೀರಿ!
ಮಹಾತ್ಮ ಗಾಂಧೀಜಿ
Skanda
| Edited By: ಸಾಧು ಶ್ರೀನಾಥ್​|

Updated on: Dec 30, 2020 | 2:35 PM

Share

ಒಂದು ಕಾಲದಲ್ಲಿ ಮಹಾತ್ಮ ಗಾಂಧೀಜಿ ಬಳಸಿದ ಲೋಹದ ಬಟ್ಟಲು, ಮರದ ಚಮಚ, ಫೋರ್ಕ್ ಎಲ್ಲವಕ್ಕೂ ಈಗ ಭರಪೂರ ಡಿಮ್ಯಾಂಡ್ ಬಂದಿದೆ. ಬ್ರಿಟನ್​ನ ಬ್ರಿಸ್ಟಲ್​ನಲ್ಲಿ ಜನವರಿ 10ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು ಹರಾಜಿನ ಆರಂಭಿಕ ಬೆಲೆ ಭಾರತೀಯ ಮೌಲ್ಯದಲ್ಲಿ ₹54,59,808.20 (GBP 55,000) ಆಗಿರಲಿದೆ. ಅದರೊಂದಿಗೆ ಹರಾಜು ಸಮಿತಿಯ ಕಮಿಷನ್, ಜಿಎಸ್​ಟಿ, ವಿಮೆ, ಭಾರತದಿಂದ ಆಮದು ಮಾಡಿಕೊಂಡ ಮೊತ್ತ ಇತ್ಯಾದಿ ಸೇರಿಕೊಂಡು ಒಟ್ಟು ಮೊತ್ತ ₹ 1.2 ಕೋಟಿ ಆಗಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಇದು ಆಯೋಜಕರು ನಿರೀಕ್ಷಿಸುತ್ತಿರುವ ಕನಿಷ್ಠ ಮೌಲ್ಯವಾಗಿದ್ದು ಹರಾಜಿನ ಸಂದರ್ಭದಲ್ಲಿ 2-3 ಪಟ್ಟು ಹೆಚ್ಚು ಮೌಲ್ಯಕ್ಕೆ ಹೋಗುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ. ಈ ವಸ್ತುಗಳನ್ನು ಮಹಾತ್ಮ ಗಾಂಧೀಜಿಯವರು 1942ರಿಂದ 1944ರ ಅವಧಿಯಲ್ಲಿ ಪುಣೆಯ ಅಗಾ ಖಾನ್​ ಅರಮನೆಯಲ್ಲಿ ಸೆರೆಯಾಳಾಗಿದ್ದಾಗ ಹಾಗೂ ಮುಂಬೈನ ಪಂಬನ್​ ಹೌಸ್​ನಲ್ಲಿದ್ದಾಗ ಬಳಕೆ ಮಾಡಿದ್ದರು ಎಂದು ಹರಾಜು ಪ್ರಕ್ರಿಯೆ ಆಯೋಜಕರು ತಿಳಿಸಿದ್ದಾರೆ.

ಯಾರ ಸಂಗ್ರಹಣೆಯಲ್ಲಿತ್ತು ಇದು? ಈ ವಸ್ತುಗಳು ಗಾಂಧೀಜಿಯವರ ಕಟ್ಟಾ ಅನುಯಾಯಿ ಆದ ಸುಮತಿ ಮೊರಾರ್ಜಿ ಅವರ ಸಂಗ್ರಹಣೆಯಲ್ಲಿತ್ತು. ಈ ಕುರಿತು 1970ರಲ್ಲಿ ಸುಮತಿ ಮೊರಾರ್ಜಿ ಅವರ ಗೌರವಾರ್ಥವಾಗಿ ಪ್ರಕಟಿಸಿದ ಸ್ಮರಣ ಗ್ರಂಥ ಮತ್ತು ವಿಠ್ಠಲ ಭಾಯಿ ಝಾವೇರಿ ಬಯೋಪಿಕ್​ನಲ್ಲೂ ಉಲ್ಲೇಖವಿದೆ. ಈ ವಸ್ತುಗಳು ಗಾಂಧೀಜಿಯವರಿಗೆ ಸಂಬಂಧಿಸಿದ್ದಷ್ಟೇ ಅಲ್ಲದೇ ಭಾರತೀಯ ಇತಿಹಾಸಕ್ಕೂ ಸಂಬಂಧಿಸಿದ್ದಾಗಿದ್ದರಿಂದ ಹರಾಜು ಪ್ರಕ್ರಿಯೆ ಬಹಳಷ್ಟು ಕುತೂಹಲ ಮೂಡಿಸಿದೆ.

ಬ್ರಿಟನ್ನಲ್ಲಿರುವ ಗಾಂಧಿ ಹಾಗೂ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಪ್ರತಿಮೆ ತೆರವು ಸಾಧ್ಯತೆ.. ಕಾರಣವೇನು..?

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ