AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ವರ್ಷದಿಂದ ಕೋಮಾದಲ್ಲಿರುವ ಬ್ರಿಟಿಷ್ ಯುವಕ; ಆತನಿಗೆ 2 ಬಾರಿ ಕೋವಿಡ್ ತಗುಲಿದ್ದೇ ಗೊತ್ತಿಲ್ಲ

Coronavirus Pandemic: ಬರ್ಟನ್​ನ ಸೆಂಟ್ರಲ್ ಇಂಗ್ಲಿಷ್ ಟೌನ್​ನಲ್ಲಿ 2020 ಮಾರ್ಚ್ 1ರಂದು ಸಂಭವಿಸಿದ ಅಪಘಾತದಲ್ಲಿ 19ರ ಹರೆಯದ ಜೋಸೆಫ್ ಫ್ಲಾವಿಲ್ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದರು.

1 ವರ್ಷದಿಂದ ಕೋಮಾದಲ್ಲಿರುವ ಬ್ರಿಟಿಷ್ ಯುವಕ; ಆತನಿಗೆ 2 ಬಾರಿ ಕೋವಿಡ್ ತಗುಲಿದ್ದೇ ಗೊತ್ತಿಲ್ಲ
ಜೋಸೆಫ್ ಫ್ಲಾವಿಲ್
ರಶ್ಮಿ ಕಲ್ಲಕಟ್ಟ
| Edited By: |

Updated on: Feb 09, 2021 | 12:53 PM

Share

ನಾಟಿಂಗ್​ಹ್ಯಾಮ್ : ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಬ್ರಿಟನ್​ನ ಯುವಕ ಜೋಸೆಫ್ ಫ್ಲಾವಿಲ್ ಒಂದು ವರ್ಷದ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಎರಡು ಬಾರಿ ಕೊರೊನಾ ಸೋಂಕು ತಗಲಿದ್ದರೂ ಸಾಂಕ್ರಾಮಿಕ ರೋಗದ ಬಗ್ಗೆ ಆತನಿಗೆ ಅರಿವು ಇಲ್ಲ ಅಂತಾರೆ ಇವರ ಕುಟುಂಬದವರು.

ಬರ್ಟನ್​ನ ಸೆಂಟ್ರಲ್ ಇಂಗ್ಲಿಷ್ ಟೌನ್​ನಲ್ಲಿ 2020 ಮಾರ್ಚ್ 1ರಂದು ಸಂಭವಿಸಿದ ಅಪಘಾತದಲ್ಲಿ 19ರ ಹರೆಯದ ಜೋಸೆಫ್ ಫ್ಲಾವಿಲ್ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದರು. ಅಷ್ಟು ಹೊತ್ತಿಗೆ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಬ್ರಿಟನ್ ರಾಷ್ಟ್ರಾದ್ಯಂತ ಲಾಕ್​ಡೌನ್ ಘೋಷಿಸಿತ್ತು.

ಕೊರೊನಾವೈರಸ್ ಲಾಕ್​ಡೌನ್ ನಿರ್ಬಂಧಗಳಿಂದಾಗಿ ಜೋಸೆಫ್ ಅವರ ಜತೆ ಕುಟುಂಬದ ಸದಸ್ಯರಿಗೆ ಇರಲು ಸಾಧ್ಯವಾಗಲಿಲ್ಲ. ಅವರು ವಿಡಿಯೊ ಕರೆ ಮೂಲಕವೇ ಜೋಸೆಫ್ ಜತೆ ಮಾತನಾಡುತ್ತಿದ್ದರು. ಇತ್ತೀಚೆಗೆ ಜೋಸೆಫ್ ನಿಧಾನವಾಗಿ ಚೇತರಿಸುತ್ತಿದ್ದಾನೆ. ಅದು ಖುಷಿ ಕೊಡುವ ವಿಷಯ. ನಮ್ಮ ಮಾತುಗಳಿಗೆ ಆತ ಸ್ಪಂದಿಸುತ್ತಿದ್ದಾನೆ.

Joseph Flavill

ಜೋಸೆಫ್ ಫ್ಲಾವಿಲ್

ಜೋಸೆಫ್, ನಾವು ನಿನ್ನ ಜತೆ ಇರಲಾಗುವುದಿಲ್ಲ. ನೀನು ಸುರಕ್ಷಿತವಾಗಿದ್ದಿ ಎಂದು ಹೇಳುವಾಗ ಅವನು ಕಣ್ಣು ಮಿಟುಕಿಸಿ ಸ್ಪಂದಿಸುತ್ತಿದ್ದಾನೆ. ಒಂದು ಬಾರಿ ಕಣ್ಣು ಮಿಟುಕಿಸಿ ಹೌದು ಎಂದೂ, ಎರಡು ಬಾರಿ ಮಿಟುಕಿಸಿ ಇಲ್ಲ ಎಂದು ಉತ್ತರಿಸುತ್ತಿದ್ದಾನೆ ಎಂದು ಅವರ ಚಿಕ್ಕಮ್ಮ ಸ್ಯಾಲಿ ಫ್ಲಾವಿಲ್ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ಲಾಕ್​ಡೌನ್​ಗೆ ಮೂರು ವಾರಗಳ ಮುಂಚೆ ಜೋಸೆಫ್ ಅಪಘಾತಕ್ಕೊಳಗಾಗಿದ್ದರು. ಕಳೆದ 11 ತಿಂಗಳಲ್ಲಿ ಬ್ರಿಟನ್​ ನಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 40 ಲಕ್ಷವಾಗಿದ್ದು, 110,000 ಮಂದಿ ಸಾವಿಗೀಡಾಗಿದ್ದಾರೆ.

ಲಾಕ್​ಡೌನ್ ಬದುಕಿನ ಕಥೆಗಳನ್ನು ಜೋಸೆಫ್ ಅರ್ಥ ಮಾಡಿಕೊಳ್ಳಬಲ್ಲನೇ ಎಂಬುದು ನಮಗೆ ತಿಳಿದಿಲ್ಲ. ಆತ ಗುಣಮುಖವಾಗಿ ಸಹಜ ಸ್ಥಿತಿಗೆ ಬರಲು ಇನ್ನೂ ಹಲವು ದಿನಗಳು ಬೇಕಾಗುತ್ತವೆ ಎಂದಿದ್ದಾರೆ ಸ್ಯಾಲಿ ಫ್ಲಾವಿಲ್. ಕ್ರೀಡಾಪಟುವಾಗಿದ್ದ ಜೋಸೆಫ್ ಈಗ ಸೆಂಟ್ರಲ್ ಇಂಗ್ಲೆಂಡ್​ನ ಸ್ಟೋಕ್ ಆನ್ ಟ್ರೆಂಟ್​ನಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕುಟುಂಬದವರು josephsjourney.co.uk ಮೂಲಕ ಚಿಕಿತ್ಸೆಗಾಗಿ ಹಣ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

ಬ್ರಿಟನ್​ನಲ್ಲಿ ಮೂರನೇ ಕೊರೊನಾ ಲಸಿಕೆಗೂ ಸಿಕ್ತು ಅನುಮತಿ.. ಮಾರುಕಟ್ಟೆಗೆ ಬರಲಿದೆ ಮಾಡೆರ್ನಾ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ