AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ಮತ್ತೆ ಕೊವಿಡ್: ದೊಡ್ಡ ನಗರಗಳಲ್ಲಿ ಮತ್ತೆ ಲಾಕ್​ಡೌನ್ ಘೋಷಣೆ, ವಿಶ್ವದಲ್ಲಿ ಮರುಕಳಿಸಿದ ಆತಂಕ

ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳಿರುವ ಈ ನಗರವು ಬಂದರು ನಗರಿಯೂ ಹೌದು. ಚೀನಾದಲ್ಲಿ ಇತ್ತೀಚೆಗೆ ಒಟ್ಟು 3,400 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಚೀನಾದಲ್ಲಿ ಮತ್ತೆ ಕೊವಿಡ್: ದೊಡ್ಡ ನಗರಗಳಲ್ಲಿ ಮತ್ತೆ ಲಾಕ್​ಡೌನ್ ಘೋಷಣೆ, ವಿಶ್ವದಲ್ಲಿ ಮರುಕಳಿಸಿದ ಆತಂಕ
ಚೀನಾದ ಶೆನ್​ಝೆನ್ ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 14, 2022 | 10:33 AM

ಬೀಚಿಂಗ್:  ಇಡೀ ಜಗತ್ತು ಕೊರೊನಾ ಪಿಡುಗಿನಿಂದ ಚೇತರಿಸಿಕೊಂಡು, ಲಾಕ್​ಡೌನ್ ಮತ್ತು ಇತರ ನಿರ್ಬಂಧಗಳನ್ನು ತೆರವುಗೊಳಿಸುವ ಹೊತ್ತಿನದಲ್ಲಿ ಚೀನಾದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಚೀನಾ ದೇಶವು ದಕ್ಷಿಣದಲ್ಲಿರುವ ಶೆನ್​ಝೆನ್ (Shenzhen) ನಗರದಲ್ಲಿ ಕಳೆದ ಒಂದು ವಾರದಿಂದ ಲಾಕ್​ಡೌನ್ ಘೋಷಿಸಿದೆ. ಸುಮಾರು 1.75 ಕೋಟಿ ಜನಸಂಖ್ಯೆಯಿರುವ ಈ ದೊಡ್ಡ ನಗರದಲ್ಲಿ ಕೊವಿಡ್ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿತ್ತು. ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳಿರುವ ಈ ನಗರವು ಬಂದರು ನಗರಿಯೂ ಹೌದು. ಚೀನಾದಲ್ಲಿ ಇತ್ತೀಚೆಗೆ ಒಟ್ಟು 3,400 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸರ್ಕಾರವು ನಗರದ ಎಲ್ಲ ನಿವಾಸಿಗಳನ್ನು ಮೂರು ಬಾರಿ ತಪಾಸಣೆಗೆ ಒಳಪಡಿಸಿತ್ತು. ಮಾರ್ಚ್ 20ರವರೆಗೂ ನಿರ್ಬಂಧದ ಆದೇಶಗಳು ಮುಂದುವರಿಯಲಿವೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಎಲ್ಲ ಬಸ್ ಮತ್ತು ಸಬ್​ವೇ ವ್ಯವಸ್ಥೆಗಳನ್ನು ಮುಚ್ಚಲಾಗಿದೆ. ಅತ್ಯಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ವಹಿವಾಟು ರದ್ದುಪಡಿಸಲಾಗಿದೆ. ಉದ್ಯೋಗಿಗಳಿಗೆ ವರ್ಕ್​ ಫ್ರಂ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಹುವಾವೆ ಟೆಕ್ನಾಲಜಿ, ಟೆನ್​ಸೆಂಟ್ ಹೋಲ್ಡಿಂಗ್ಸ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳ ಕೇಂದ್ರ ಕಚೇರಿ ಇರುವ ಶೆನ್​ಝೆನ್ ನಗರದಿಂದ ಹೊರಗೆ ಹೋಗಬಾರದೆಂದು ನಾಗರಿಕರನ್ನು ನಿರ್ಬಂಧಿಸಲಾಗಿದೆ. ಶೆನ್​ಝೆನ್ ಬಂದರು ಚೀನಾದ ಅತಿದೊಡ್ಡ ಮತ್ತು ಅತಿಹೆಚ್ಚು ಚಟುವಟಿಕೆ ಇರುವ ಬಂದರುಗಳಲ್ಲಿ ಒಂದಾಗಿದೆ.

ಪಕ್ಕದ ಹಾಂಗ್​ಕಾಂಗ್​ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಬೆನ್ನಿಗೇ ಶೆನ್​ಝೆನ್ ನಗರದಲ್ಲಿಯೂ ಸೋಂಕು ಹೆಚ್ಚಾಗಿದೆ. ಹಾಂಗ್​ಕಾಂಗ್​ನಲ್ಲಿ ಸುಮಾರು 3 ಲಕ್ಷ ಜನರು ಪ್ರಸ್ತುತ ಹೋಂ ಕ್ವಾರಂಟೈನ್​ ಅಥವಾ ಐಸೊಲೇಶನ್​ನಲ್ಲಿದ್ದಾರೆ. ಶಾಂಘೈ ನಗರದಲ್ಲಿ ಕೊವಿಡ್​ ತೀವ್ರಗೊಂಡಿದ್ದು, ಬಹುತೇಕ ಶಿಕ್ಷಣ ಸಂಸ್ಥೆಗಳು ಮತ್ತೆ ಆನ್​ಲೈನ್ ಶಿಕ್ಷಣದ ಮೊರೆ ಹೊಕ್ಕಿವೆ. ವಿಮಾನಗಳನ್ನು ನಿರ್ಬಂಧಿಸುವ ಸಾಧ್ಯತೆ ಕುರಿತು ಚೀನಾದ ವೈಮಾನಿಕ ನಿಯಂತ್ರಣ ಸಂಸ್ಥೆ ಮಾತುಕತೆ ನಡೆಸುತ್ತಿದೆ.

ಕೊವಿಡ್ ವಿಚಾರದಲ್ಲಿ ಆರಂಭದಿಂದಲೂ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದ ಚೀನಾ ಇದೀ ಒಮಿಕ್ರಾನ್ ರೂಪಾಂತರಿಯ ಹಾವಳಿಗೆ ಬೆಚ್ಚಿಬಿದ್ದಿದೆ. ಚೀನಾದ ಅತ್ಯಂತ ದೊಡ್ಡ ಮತ್ತು ಆರ್ಥಿಕ ಶಕ್ತಿಗಳೆನಿಸಿಕೊಂಡ ನಗರಗಳಲ್ಲಿ ಏಕಾಏಕಿ ಕಾಣಿಸಿಕೊಂಡಿರುವ ಹಾವಳಿಯನ್ನು ಹೇಗೆ ನಿರ್ವಹಿಸುವುದು ಎಂಬುದು ಚೀನಾ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿದೆ. ಶೂನ್ಯ ಕೊವಿಡ್ ಕಾರ್ಯತಂತ್ರವನ್ನು ಪ್ರತಿಪಾದಿಸುತ್ತಿದ್ದ ಚೀನಾದ ಎಷ್ಟೋ ಹೇಳಿಕೆಗಳನ್ನು ಇದೀಗ ಕಾಣಿಸಿಕೊಂಡಿರುವ ಸೋಂಕು ದೂಳೀಪಟ ಮಾಡಿದೆ.

ಜಗತ್ತಿನ ಹಲವು ದೇಶಗಳು ತಮ್ಮಲ್ಲಿ ಕೊರೊನಾ ಕಾಣಿಸಿಕೊಂಡ ವಿಚಾರ ಒಪ್ಪಿಕೊಂಡು, ವೈರಸ್ ಜೊತೆಗಿನ ಬದುಕು ಅನಿವಾರ್ಯ ಎಂಬ ನಿಲುವಿಗೆ ಬಂದು ವಿದೇಶಗಳಿಂದ ವಿಮಾನಗಳು ಬಂದು ಹೋಗಲು ಅನುಮತಿ ನೀಡಿದಾಗಲೂ ಚೀನಾ ತನ್ನ ನಿಲುವು ಸಡಿಲಿಸಿರಲಿಲ್ಲ. ಬದಲಿಗೆ ಇಂಥ ದೇಶಗಳನ್ನು ದೂರವೇ ಇರಿಸುವ ನಿಲುವಿಗೆ ಬಂದಿತ್ತು. ಇಂದಿಗೂ ಚೀನಾದ ಅಧಿಕಾರಿಗಳು ನಿರ್ಬಂಧ ವಿಧಿಸುವುದರ ವಿರುದ್ಧವೇ ಇದ್ದಾರೆ. ನಿರ್ಬಂಧದಿಂದ ಆರ್ಥಿಕತೆಗೆ ಗಂಭೀರ ಹೊಡೆತ ಬೀಳುತ್ತದೆ ಎನ್ನುವುದು ಚೀನಾದ ಉನ್ನತ ವಲಯದ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ವಿಯೆಟ್ನಾಂನ ಡ್ರ್ಯಾಗನ್ ಹಣ್ಣಿನಲ್ಲೂ ಕೊರೊನಾ ವೈರಸ್ ಪತ್ತೆ; ಚೀನಾದಲ್ಲಿ ಸೂಪರ್ ಮಾರ್ಕೆಟ್​ಗಳು ಬಂದ್

ಇದನ್ನೂ ಓದಿ: Chaina Zero Corona Policy: ಕೊರೊನಾ ಸೋಂಕಿತರನ್ನ ಚೀನಾ ಹೇಗೆ ಟ್ರೀಟ್ ಮಾಡ್ತಿದೆ ಗೊತ್ತಾ ?

ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್
ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್