AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಡಾಖ್ ಬಳಿ ಚೀನಾದ ಚಟುವಟಿಕೆಯು ಆತಂಕ ಹುಟ್ಟಿಸುವಂತದ್ದು: ಅಮೆರಿಕದ ಕಮಾಂಡಿಂಗ್ ಜನರಲ್

ಅಮೆರಿಕ ಆರ್ಮಿ ಪೆಸಿಫಿಕ್‌ನ ಕಮಾಂಡಿಂಗ್ ಜನರಲ್ ಚಾರ್ಲ್ಸ್ ಎ ಫ್ಲಿನ್ ಅವರು ಹಿಮಾಲಯದ ಗಡಿಯಲ್ಲಿ ಚೀನಾದ ಮೂಲಸೌಕರ್ಯ ನಿರ್ಮಾಣದ ಕುರಿತು ಮಾತನಾಡಿದ್ದು, ಚೀನಾದ್ದು ಅಸ್ಥಿರಗೊಳಿಸುವ ಮತ್ತು ವಿನಾಶಕಾರಿ ನಡವಳಿಕೆ ಎಂದಿದ್ದಾರೆ

ಲಡಾಖ್ ಬಳಿ ಚೀನಾದ ಚಟುವಟಿಕೆಯು ಆತಂಕ ಹುಟ್ಟಿಸುವಂತದ್ದು: ಅಮೆರಿಕದ ಕಮಾಂಡಿಂಗ್ ಜನರಲ್
ಚಾರ್ಲ್ಸ್ ಎ ಫ್ಲಿನ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Jun 08, 2022 | 4:39 PM

Share

ದೆಹಲಿ: ಲಡಾಖ್ (Ladakh) ಬಳಿ ಚೀನಾದ (China) ಚಟುವಟಿಕೆಯು ದಿಗಿಲು ಹುಟ್ಟಿಸುವಂತದ್ದು, ಅಲ್ಲಿ ನಿರ್ಮಿಸಲಾಗುತ್ತಿರುವ ಕೆಲವು ಮೂಲಸೌಕರ್ಯಗಳು ಆತಂಕಕಾರಿಯಾಗಿದೆ ಎಂದು ಅಮೆರಿಕದ ಹಿರಿಯ ಜನರಲ್ ಹೇಳಿದ್ದಾರೆ. ಅಮೆರಿಕ ಆರ್ಮಿ ಪೆಸಿಫಿಕ್‌ನ ಕಮಾಂಡಿಂಗ್ ಜನರಲ್ ಚಾರ್ಲ್ಸ್ ಎ ಫ್ಲಿನ್ (Charles A Flynn) ಅವರು ಹಿಮಾಲಯದ ಗಡಿಯಲ್ಲಿ ಚೀನಾದ ಮೂಲಸೌಕರ್ಯ ನಿರ್ಮಾಣದ ಕುರಿತು ಮಾತನಾಡಿದ್ದು, ಚೀನಾದ್ದು ಅಸ್ಥಿರಗೊಳಿಸುವ ಮತ್ತು ವಿನಾಶಕಾರಿ ನಡವಳಿಕೆ ಎಂದಿದ್ದಾರೆ. “ಚಟುವಟಿಕೆಗಳು ಗಾಬರಿ ಹುಟ್ಟಿಸುತ್ತವೆ. ವೆಸ್ಟರ್ನ್ ಥಿಯೇಟರ್ ಕಮಾಂಡ್‌ನಲ್ಲಿ ರಚಿಸಲಾಗುತ್ತಿರುವ ಕೆಲವು ಮೂಲಸೌಕರ್ಯಗಳು ಆತಂಕಕಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಅವರ ಎಲ್ಲಾ ಮಿಲಿಟರಿ ಶಸ್ತ್ರಾಗಾರದಂತಿರುವ ಅದನ್ನು ಯಾಕೆ ಎಂದು ಕೇಳಬೇಕು ಎಂದು ಏಷ್ಯಾ-ಪೆಸಿಫಿಕ್ ಪ್ರದೇಶವನ್ನು ನೋಡಿಕೊಳ್ಳುವ ಜನರಲ್ ಆಯ್ದ ಪತ್ರಕರ್ತರ ಗುಂಪಿಗೆ ಹೇಳಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ. ಚೀನಾದ “ಹೆಚ್ಚುತ್ತಿರುವ ಕಪಟ ಮಾರ್ಗ ಮತ್ತು ಅಸ್ಥಿರಗೊಳಿಸುವ ಮತ್ತು ನಾಶಕಾರಿ ನಡವಳಿಕೆ” ಪ್ರದೇಶಕ್ಕೆ ಒಳಿತಲ್ಲ ಎಂದು ಜನರಲ್ ಫ್ಲಿನ್ ಹೇಳಿದ್ದಾರೆ. ಚೀನಿಯರು (ಪ್ರದರ್ಶಿಸುವ) ಕೆಲವು ನಾಶಕಾರಿ ಮತ್ತು ಭ್ರಷ್ಟ ನಡವಳಿಕೆಗಳಿ ವಿರುದ್ಧಗಿ ಒಟ್ಟಾಗಿ ಕೆಲಸ ಮಾಡುವುದು ಯೋಗ್ಯವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಜನರಲ್ ಹೇಳಿದರು.

ಭಾರತ ಮತ್ತು ಅಮೆರಿಕ ಈ ಅಕ್ಟೋಬರ್‌ನಲ್ಲಿ ಯುದ್ಧ ಅಭ್ಯಾಸದ ಭಾಗವಾಗಿ ಹಿಮಾಲಯದಲ್ಲಿ 9,000-10,000 ಅಡಿ ಎತ್ತರದಲ್ಲಿ ಎತ್ತರದ ತರಬೇತಿ ಕಾರ್ಯಾಚರಣೆಗಳನ್ನು ನಡೆಸಲು ಸಿದ್ಧವಾಗಿವೆ. ಸ್ಥಳವನ್ನು ನಿರ್ದಿಷ್ಟಪಡಿಸಲಾಗಿಲ್ಲ. ಭಾರತೀಯ ಪಡೆಗಳಿಗೆ ಅಲಾಸ್ಕಾದಲ್ಲಿ ಇದೇ ರೀತಿಯ ತೀವ್ರ-ಶೀತ ಹವಾಮಾನ ಪರಿಸ್ಥಿತಿಗಳಲ್ಲಿ ತರಬೇತಿ ನೀಡಲಾಗುತ್ತದೆ.  ಈ ಚಟುವಟಿಕೆಗಳು ಉನ್ನತ-ಎತ್ತರದ ಯುದ್ಧದ ಹರವಿನಾದ್ಯಂತ ಅತ್ಯಂತ ಉನ್ನತ ಮಟ್ಟದ ಜಂಟಿ ಕಾರ್ಯಾಚರಣೆಗಳಾಗಿವೆ.

ಇದು ಹೊಸ ತಂತ್ರಜ್ಞಾನ, ವಾಯುಪಡೆಯ ಸ್ವತ್ತುಗಳು, ದಾಳಿಯ ವಾಯುಯಾನ, ಲಾಜಿಸ್ಟಿಕ್ಸ್ ಮತ್ತು ನೈಜ-ಸಮಯದ ಆಧಾರದ ಮೇಲೆ ಮಾಹಿತಿ ಹಂಚಿಕೆಯನ್ನು ಒಳಗೊಂಡಿರುತ್ತದೆ. “ಇವೆಲ್ಲವೂ ಭಾರತೀಯ ಸೇನೆ ಮತ್ತು ಯುಎಸ್ ಸೈನ್ಯವನ್ನು ಬಳಸಿಕೊಳ್ಳುವ ಅಮೂಲ್ಯ ಅವಕಾಶಗಳಾಗಿವೆ” ಎಂದು ಜನರಲ್ ಫ್ಲಿನ್ ಹೇಳಿದರು.

ಇದನ್ನೂ ಓದಿ
Image
ಲಡಾಖ್​ನಲ್ಲಿ ಮತ್ತೆ ಚಟುವಟಿಕೆ ಆರಂಭಿಸಿದ ಚೀನಾ: ಭಾರತಕ್ಕೆ ಅಮೆರಿಕ ಎಚ್ಚರಿಕೆ
Image
ಲಡಾಖ್​​ನಲ್ಲಿ ಅಪಘಾತ: ಯೋಧರ ಸಾವಿಗೆ ರಾಷ್ಟ್ರಪತಿ, ಪ್ರಧಾನಿ ಮೋದಿ ಸಂತಾಪ
Image
Shyok River Ladakh Accident ಲಡಾಖ್‌ನ ಶ್ಯೋಕ್ ನದಿಗೆ ವಾಹನ ಉರುಳಿ ಬಿದ್ದು 7 ಯೋಧರು ಸಾವು

ಎನ್‌ಡಿಟಿವಿ ಜನವರಿಯಲ್ಲಿ ಉಪಗ್ರಹ ಚಿತ್ರಗಳ ಮೇಲೆ ವರದಿ ಮಾಡಿದ್ದು ಅದು ಪ್ಯಾಂಗೊಂಗ್ ಸರೋವರದ ಮೇಲೆ ಚೀನಾದ ಸೇತುವೆಯನ್ನು ನಿರ್ಮಿಸುತ್ತಿದೆ ಎಂದು ತೋರಿಸಿದೆ. ಚೀನಿಯರು ತಮ್ಮ ವಾಯುನೆಲೆಗಳು ಮತ್ತು ರಸ್ತೆ ಮೂಲಸೌಕರ್ಯಗಳನ್ನು ಗಮನಾರ್ಹವಾಗಿ ನವೀಕರಿಸಿದ್ದಾರೆ ಮತ್ತು ವಿಸ್ತರಿಸಿದ್ದಾರೆ. ಈ ಮೂಲಕ ಹಿಮಾಲಯದ ಗಡಿಯಲ್ಲಿ ಭಾರತಕ್ಕೆ ನೇರ ಬೆದರಿಕೆಯನ್ನು ಒಡ್ಡಿದ್ದಾರೆ. ಹನ್ನೆರಡು ಸುತ್ತಿನ ಮಿಲಿಟರಿ ಮಾತುಕತೆಗಳ ಹೊರತಾಗಿಯೂ, ಚೀನಿಯರು ಲಡಾಖ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಉಲ್ಲಂಘಿಸಿದ ನಂತರ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಹಲವಾರು ಪ್ರದೇಶಗಳಿಂದ ಹಿಂದೆ ಸರಿಯಲಿಲ್ಲ.

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್