AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breakfast ತಿಂಡಿಯಲ್ಲಿ 25 ಮಕ್ಕಳಿಗೆ ವಿಷವುಣಿಸಿದ್ದ ಶಿಕ್ಷಕಿಗೆ ಗಲ್ಲು ಶಿಕ್ಷೆ!

ಚೀನಾದಲ್ಲಿ ಮನುಷ್ಯರಿಗಿಂತ ದಾನವರೇ ಹೆಚ್ಚಿದ್ದಾರೆ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇಡೀ ಜಗತ್ತಿಗೆ ಕೊರೊನಾ ವಿಷವುಣಿಸಿರುವ ಚೀನಾದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಶಿಶುವಿಹಾರದಲ್ಲಿ ಶಿಕ್ಷಕಿಯಾಗಿದ್ದ ಮಹಾತಾಯಿಯೊಬ್ಬಳು ಯಾರದೋ ಮೇಲಿನ ಕೋಪಕ್ಕೆ 25 ಮಕ್ಕಳಿಗೆ ವಿಷವುಣಿಸಿದ್ದಾಳೆ. ಸೋಡಿಯಂ ನೈಟ್ರೇಟ್​ ಎಂಬ ಮಾರಕ ರಾಸಾಯನಿಕವನ್ನು ಊಟದಲ್ಲಿ ಬೆರೆಸಿಕೊಟ್ಟಿದ್ದಕ್ಕೆ 25 ಮಕ್ಕಳ ಪೈಕಿ ಒಂದು ಮಗು ಅಸುನೀಗಿತ್ತು. ಚೀನಾದ ಮಧ್ಯ ಪ್ರಾಂತ್ಯವಾದ ಹೆನಾನ್​ನಲ್ಲಿ ವಾಂಗ್ ಯುನ್​ ಎಂಬ ಶಿಕ್ಷಕಿ ಒಂದು ವರ್ಷದ ಹಿಂದೆ ತುಚ್ಛ ಮತ್ತು ಹೇಯವಾಗಿ […]

Breakfast ತಿಂಡಿಯಲ್ಲಿ 25 ಮಕ್ಕಳಿಗೆ ವಿಷವುಣಿಸಿದ್ದ ಶಿಕ್ಷಕಿಗೆ ಗಲ್ಲು ಶಿಕ್ಷೆ!
ಸಾಧು ಶ್ರೀನಾಥ್​
|

Updated on:Sep 30, 2020 | 11:37 AM

Share

ಚೀನಾದಲ್ಲಿ ಮನುಷ್ಯರಿಗಿಂತ ದಾನವರೇ ಹೆಚ್ಚಿದ್ದಾರೆ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇಡೀ ಜಗತ್ತಿಗೆ ಕೊರೊನಾ ವಿಷವುಣಿಸಿರುವ ಚೀನಾದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಶಿಶುವಿಹಾರದಲ್ಲಿ ಶಿಕ್ಷಕಿಯಾಗಿದ್ದ ಮಹಾತಾಯಿಯೊಬ್ಬಳು ಯಾರದೋ ಮೇಲಿನ ಕೋಪಕ್ಕೆ 25 ಮಕ್ಕಳಿಗೆ ವಿಷವುಣಿಸಿದ್ದಾಳೆ. ಸೋಡಿಯಂ ನೈಟ್ರೇಟ್​ ಎಂಬ ಮಾರಕ ರಾಸಾಯನಿಕವನ್ನು ಊಟದಲ್ಲಿ ಬೆರೆಸಿಕೊಟ್ಟಿದ್ದಕ್ಕೆ 25 ಮಕ್ಕಳ ಪೈಕಿ ಒಂದು ಮಗು ಅಸುನೀಗಿತ್ತು.

ಚೀನಾದ ಮಧ್ಯ ಪ್ರಾಂತ್ಯವಾದ ಹೆನಾನ್​ನಲ್ಲಿ ವಾಂಗ್ ಯುನ್​ ಎಂಬ ಶಿಕ್ಷಕಿ ಒಂದು ವರ್ಷದ ಹಿಂದೆ ತುಚ್ಛ ಮತ್ತು ಹೇಯವಾಗಿ ಉದ್ದೇಶಪೂರ್ವಕವಾಗಿ ಮುಗ್ಧ ಮಕ್ಕಳಿಗೆ ಬ್ರೇಕ್​ಫಾಸ್ಟ್​ ತಿಂಡಿಯಲ್ಲಿ ವಿಷವಿಟ್ಟಿದ್ದಳು. ಶಾಲಾ ಮಕ್ಕಳನ್ನು ಹೇಗೆ ನಿಭಾಯಿಸಬೇಕು, ಅವರಲ್ಲಿ ಹೇಗೆ ಶಿಸ್ತು ಮೂಡಿಸಬೇಕು ಎಂಬ ವಿಷಯದ ಬಗ್ಗೆ ಆಕೆ ಮತ್ತೊಬ್ಬ ಶಿಕ್ಷಕಿಯ ಜೊತೆ ಜಗಳವಾಡಿದ್ದು ಈ ರಾದ್ಧಾಂತಕ್ಕೆ ಕಾರಣವಾಗಿತ್ತು.

ವಿಷಯುಕ್ತ ತಿಂಡಿ ತಿಂದ ಎಲ್ಲ 25 ಮಕ್ಕಳೂ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಅವರ ಪೈಕಿ ಒಂದು ಮಗು ಸುಮಾರು 8 ತಿಂಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ, ಅಸುನೀಗಿತ್ತು. ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ವಿಚಾರಣೆ ವೇಳೆಯೇ ಆರೋಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅದಕ್ಕೆಂದೇ ಶಿಕ್ಷಕಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಅದಕ್ಕೂ ಮುನ್ನ 3 ವರ್ಷದ ಹಿಂದೆ ಇದೇ ಮಹಿಳೆ ತನ್ನ ಗಂಡನೊಂದಿಗೆ ಖ್ಯಾತೆ ತೆಗೆದು ಆತನಿಗೂ ಇದೇ ರೀತಿ ಊಟದಲ್ಲಿ ವಿಷಯ ಬೆರೆಸಿಕೊಟ್ಟಿದ್ದಳು. ಆತ ಅದುಹೇಗೋ ಪ್ರಾಣಾಪಾಯದಿಂದ ಬಚಾವಾಗಿದ್ದ.

Published On - 11:29 am, Wed, 30 September 20

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ